‘ಅಮಾವಾಸ್ಯೆ ಹಾಗೂ ಹುಣ್ಣಿಮೆ ನಿಸರ್ಗದತ್ತವಾಗಿ ಬಂದಿವೆ. ಆದರೆ, ಇವೆರಡೂ ಅಶುಭ ಎಂಬ ಮೌಢ್ಯ ಈಗಲೂ ಅನೇಕರಲ್ಲಿ ಬೇರೂರಿದೆ. ಅದನ್ನು ಜನರ ಮನಸ್ಸಿನಿಂದ ಕಿತ್ತು ಹಾಕಲಿಕ್ಕಾಗಿ ಮುರುಘಾ ಮಠದಲ್ಲಿ ಅಮಾವಾಸ್ಯೆ ದಿನ ಸಾಮೂಹಿಕ ಕಲ್ಯಾಣದಂಥ ಶುಭ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ. ಈಗ ಜನಿಸಿದ ಮಕ್ಕಳಿಗೆ ಆಶೀರ್ವದಿಸಿ, ತಾಯಂದಿರಿಗೆ ಸ್ಫೂರ್ತಿ ತುಂಬಲು ಆಸ್ಪತ್ರೆಗೆ ಭೇಟಿ ನೀಡಿದ್ದೇನೆ’ ಎಂದು ಹೇಳಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಬಸವರಾಜಪ್ಪ ಅವರೂ ಇದ್ದರು.