ಮಡಿವಾಳ ಮಾಚಿದೇವ ಗುರುಪೀಠದಲ್ಲಿ ನಡೆದ ಸಮಾರಂಭದಲ್ಲಿ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ,'ಸಮಸಮಾಜದ ಮಾರ್ಗದರ್ಶಕ, ಜಾತಿ ಅಳಿಸಲು ಜ್ಞಾನ ಜ್ಯೋತಿ ನೀಡಿದ ಅಪರಿಮಿತ ಜ್ಞಾನಿ ಅಂಬೇಡ್ಕರ್.ದಿಕ್ಕೆಟ್ಟವರ ದಿಕ್ಸೂಚಕ, ಶ್ರಮಿಕ ವರ್ಗದ ಆಸ್ಮಿತೆ, ದನಿಯಿಲ್ಲದವರ ಬಾಳಿನ ಆಶಾಕಿರಣ ಆಗಿದ್ದಾರೆ. ವೈಜ್ಞಾನಿಕ-ವೈಚಾರಿಕತೆಯ ಪ್ರವರ್ತಕ ಅಂಬೇಡ್ಕರ್ ಆದರ್ಶ ಸರ್ವಕಾಲಕ್ಕೂ ಪ್ರಸ್ತುತ’ ಎಂದು ಅಭಿಪ್ರಾಯಪಟ್ಟಿದ್ದಾರೆ.