ಕಲ್ಲುಕ್ವಾರಿ ಗಣಿಗಾರಿಕೆಯಿಂದ ಪ್ರತಿನಿತ್ಯ ಸಂಜೆ 6 ರಿಂದ 7 ಗಂಟೆ ಸುಮಾರಿಗೆ ಭಾರಿ ಸ್ಪೋಟ ನಡೆಯುತ್ತಲೇ ಇದೆ. ಇದರಿಂದಾಗಿ ನಿಜಲಿಂಗಪ್ಪ ಸ್ಮಾರಕವಷ್ಟೇ ಅಲ್ಲದೆ, ಸುತ್ತಮುತ್ತಲಿನ ಗ್ರಾಮಸ್ಥರಿಗೂ, ಸಮೀಪದ ಶಾಲೆಗಳಿಗೂ, ಮಾದಾರ ಚನ್ನಯ್ಯ, ಮೇದಾರ ಕೇತಯ್ಯ, ಛಲವಾದಿ, ಸೇವಾಲಾಲ್ ಗುರುಪೀಠಕ್ಕೂ, ಯೋಗವನ ಬೆಟ್ಟದ ವಿನ್ಯಾಸಕ್ಕೂ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಸ್ಪೋಟದಿಂದಾಗುವ ಅನಾಹುತಗಳ ಕುರಿತು ಮನವರಿಕೆ ಮಾಡಿಕೊಟ್ಟರು.