ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊರೆ ಓಬೇನಹಳ್ಳಿ ಬ್ಯಾರೇಜ್ ಭರ್ತಿ: ಬಾಗಿನ ಅರ್ಪಣೆ

Last Updated 19 ಏಪ್ರಿಲ್ 2021, 3:54 IST
ಅಕ್ಷರ ಗಾತ್ರ

ತೊರೆಓಬೇನಹಳ್ಳಿ (ಧರ್ಮಪುರ): ವಾಣಿವಿಲಾಸ ಸಾಗರದಿಂದ ವೇದಾವತಿ ನದಿಗೆ ನೀರು ಬಿಟ್ಟಿರುವುದರಿಂದ ಇಲ್ಲಿನ ಬ್ಯಾರೇಜ್ ತುಂಬಿದ್ದು, ಗ್ರಾಮಸ್ಥರು ಮತ್ತು ಕರ್ನಾಟಕ ರಾಜ್ಯ ರೈತ ಸಂಘದವರು ಭಾನುವಾರ ಬಾಗಿನ ಅರ್ಪಿಸಿ ಸಂತಸ ಹಂಚಿಕೊಂಡರು.

ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ‘ವೇದಾವತಿ ನದಿ ಪಾತ್ರದಲ್ಲಿ ವಾಣಿವಿಲಾಸ ಸಾಗರದ ನೀರು ಹರಿಸಿದ್ದರಿಂದ ಈ ಭಾಗದ ಜನ–ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ನೀಗಿಸಿದಂತೆ ಆಗಿದೆ. ನದಿಯಲ್ಲಿ ನೀರು ಹರಿಯುವುದರಿಂದ ಧರ್ಮಪುರ ಹೋಬಳಿಯ ಬಹುತೇಕ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಲಿದೆ. ತೆಂಗು, ಅಡಿಕೆ, ಬಾಳೆ, ದಾಳಿಂಬೆ, ಪಪ್ಪಾಯ ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗಲಿದೆ’ ಎಂದರು.

ಈ ಸಂದರ್ಭದಲ್ಲಿ ಬ್ಯಾಡರಹಳ್ಳಿ ಶಿವಕುಮಾರ್, ಚೇತನ್, ರವೀಶ್, ತಿಪ್ಪೇಸ್ವಾಮಿ, ರಾಘವೇಂದ್ರ, ರಂಗೇಗೌಡ, ಹಿಮಂತ್ ರಾಜ್, ರಂಗಸ್ವಾಮಿ, ಗೌಡ, ಹನುಮಂತರಾಯ, ಮಂಜುನಾಥ್, ಜೀವಿತಾ, ಸುನೀತಾ, ರಂಗಮ್ಮ ಅವರೂ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT