‘ಚಿತ್ರದುರ್ಗದ ಪ್ರಾದೇಶಿಕ ಅರಣ್ಯ ವಿಭಾಗದ ಉಪವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಕರಡಿ ಹಿಡಿಯಲು ಬಲೆಹಾಕಿದ್ದಾರೆ. ಆದರೆ ಕರಡಿ 6 ಅಡಿ ಎತ್ತರದ ಬಲೆ ಎಗರಿ ತಪ್ಪಿಸಿಕೊಂಡಿದೆ.ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ಬೆನ್ನತ್ತಿ ಹಿಡಿಯುವ ಯತ್ನ ನಡೆಸಿದ್ದಾರೆ.ಬಸವನ ಶಿವನಕೆರೆ, ಬೇಡರಶಿವನಕೆರೆ, ಕಬ್ಬಿಗೆರೆ ಗ್ರಾಮಗಳ ಮೂಲಕ ಓಡಿ ಹೋದ ಕರಡಿ ಗವೇಶ್ವರನ ಗುಡ್ಡಸೇರಿದೆ. ಅರಣ್ಯ ಸಿಬ್ಬಂದಿ ಮೂರು ದಿನಗಳಿಂದ ಕರಡಿ ಕಾಣಿಸಿಕೊಂಡ ಗ್ರಾಮಗಳ ಬಳಿ ಗಸ್ತು ತಿರುಗುತ್ತಿದ್ದಾರೆ.ಸಾರ್ವಜನಿಕರು ಆತಂಕ ಪಡಬೇಕಿಲ್ಲ’ ಎಂದು ಉಪ ವಲಯ ಅರಣ್ಯಾಧಿಕಾರಿ ರುದ್ರಮುನಿ ತಿಳಿಸಿದ್ದಾರೆ.