ಬಯಲು ಸೀಮೆ ಹಾಗೂ ಬರದ ನಾಡಿನ ರೈತರ ಹಲವು ವರ್ಷಗಳ ಕನಸು ನನಸಾಗುವ ದಿನ ಸಮೀಪಿಸಿರುವುದು ಸಂತಸ ತಂದಿದೆ. ಕುಕ್ಕಸಮುದ್ರ ಕೆರೆಯ ಹಳ್ಳದ ಸಾಲಿನ ಮೂಲಕ ವೇದಾವತಿ ನದಿ ಪಾತ್ರದಲ್ಲಿ ಹರಿಯುತ್ತಿರುವ ಭದ್ರೆಯ ನೀರನ್ನು ಈಗಾಗಲೇ ತಾಲ್ಲೂಕಿನ ಜನರು ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ನೀರು ಚಾನಲ್ನಲ್ಲಿ ಶಾಶ್ವತವಾಗಿ ಹಾಗೂ ನಿರಂತರವಾಗಿ ಹರಿಯಬೇಕಾದರೆ, ಸರ್ಕಾರ ಶೀಘ್ರ ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಒತ್ತಾಯಿಸಿದರು.