ಹಿರಿಯೂರು: ಲಾಕ್ಡೌನ್ ವಿಸ್ತರಣೆ ನಂತರ ಸಾರ್ವಜನಿಕರು ಅನವಶ್ಯಕವಾಗಿ ಮನೆಯಿಂದ ಹೊರಬರದಂತೆ ಜಾಗೃತಿ ಮೂಡಿಸಲು ಬುಧವಾರ ಸಂಜೆ ಹಿರಿಯೂರಿನಲ್ಲಿ ನಡೆದ ಬೈಕ್ ರ್ಯಾಲಿಗೆ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಚಾಲನೆ ನೀಡಿದರು. ನಗರಠಾಣೆ ಎಸ್ಐಗಳಾದ ನಾಗರಾಜ್, ಅನುಸೂಯಮ್ಮ, ಎಎಸ್ಐಗಳಾದ ರಾಘವ ರೆಡ್ಡಿ, ಅಸ್ಲಾಂಭಾಷ, ತಿಪ್ಪೇಸ್ವಾಮಿ ಹಾಗು ಸಿಬ್ಬಂದಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.