ನಾಯಕನಹಟ್ಟಿ: ಮೇಕೆ ಮೇಯಿಸಲು ತೆರಳಿದ್ದ ನೆಲಗೇತನಹಟ್ಟಿ ಗ್ರಾಮದ ಬಾಲಕ ಬಿ.ಬಿ.ನಾಗೇಶ (15) ಸೋಮವಾರ ಆಕಸ್ಮಿಕವಾಗಿ ಹಳ್ಳದಲ್ಲಿ ಬಿದ್ದು ಮೃತಪಟ್ಟಿದ್ದಾನೆ.
ಬಾಲಕ ನೆಲಗೇತನಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದನು. ಎಂದಿನಂತೆ ಬಾಲಕ ಮೇಕೆ ಮೇಯಿಸಲು ಗ್ರಾಮದ ಹೊರವಲಯಕ್ಕೆ ತೆರಳಿದ್ದಾನೆ. ಆಗ ಕಾಲು ಜಾರಿ ಹಳ್ಳದಲ್ಲಿ ಬಿದ್ದಿದ್ದಾನೆ.
ಬಾಲಕ ಮುಳುಗುತ್ತಿದ್ದುದನ್ನು ಸಮೀಪದಲ್ಲೇ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು ಗಮನಿಸಿ ಕೂಗಿಕೊಂಡಿದ್ದಾರೆ. ಆಗ ಅದೇ ಗ್ರಾಮದ ಯುವಕರಿಬ್ಬರು ಹಳ್ಳಕ್ಕೆ ಜಿಗಿದು ಬಾಲಕನನ್ನು ಮೇಲಕ್ಕೆ ಎತ್ತಿಕೊಂಡು ಬಂದು ಮಲಗಿಸಿದ್ದಾರೆ. ಅದಾಗಲೇ ಯುವಕ ಮೃತಪಟ್ಟಿರುವುದು ಮೃತಪಟ್ಟಿದ್ದನು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಉಪತಹಶೀಲ್ದಾರ್ ಟಿ.ಜಗದೀಶ್, ಎಎಸ್ಐ ನಾಗರಾಜ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ಸ್ಥಳಕ್ಕೆ ಬಂದು ಪರಿಶೀಲಿಸಿದರು. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.