ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕುಕ್ಕೆಶ್ರೀ ಟ್ರಾವೆಲ್ಸ್ನ ಹವಾನಿಯಂತ್ರವಲ್ಲದ ಸ್ಲೀಪರ್ ಕೋಚ್ ಬಸ್ ಆ.12ರಂದು ನಸುಕಿನ 4.15ಕ್ಕೆ ಬೆಂಕಿಗೆ ಆಹುತಿ ಆಗಿತ್ತು. ಬಸ್ನಲ್ಲಿದ್ದ ಇಬ್ಬರು ಚಾಲಕರು ಹಾಗೂ 29 ಪ್ರಯಾಣಿಕರಲ್ಲಿ ಐವರು ದಹನವಾಗಿದ್ದರು. ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಬದುಕುಳಿದ 24 ಪ್ರಯಾಣಿಕರಲ್ಲಿ 23 ಜನರನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಆದರೆ, ಸುರೇಶ್ ಮಾತ್ರ ಯಾರ ಸಂಪರ್ಕಕ್ಕೂ ಬಂದಿಲ್ಲ.