ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾಷೆ ಕೇವಲ ಸಂವಹನಕ್ಕೆ ಇರುವ ಸಾಧನವಲ್ಲ. ಅದರೊಂದಿಗೆ ಸಂಸ್ಕೃತಿ ಇದೆ. ಭಾಷೆಗೆ ಧಕ್ಕೆಯುಂಟಾದರೆ, ಸಂಸ್ಕೃತಿಯೂ ನಾಶವಾಗುತ್ತದೆ. ಅವಸಾನದ ಅಂಚಿಗೆ ಸಾಗಿರುವ ಭಾಷೆಗಳನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಸಾಹಿತಿಗಳು ಸೇರಿದಂತೆ ಎಲ್ಲರು ಗಂಭೀರವಾಗಿ ಚಿಂತಿಸಬೇಕಿದೆ’ ಎಂದರು.