ದುಗ್ಗಪ್ಪ ಎಂಬುವವರ ಮೂವರು ಮಕ್ಕಳಲ್ಲಿ ಶರಣಬಸವ ಒಬ್ಬರು. ಮತ್ತಿಬ್ಬರು ಮಕ್ಕಳಾದ ಯಲ್ಲಾಲಿಂಗ ಹಾಗೂ ಯಶೋದಳನ್ನು ಆಟೊಗೆ ಹತ್ತಿಸುವಾಗ, ರಸ್ತೆ ಬದಿಯಲ್ಲಿ ನಿಂತಿದ್ದ ಶರಣಬಸವನಿಗೆ ಹಿರಿಯೂರು ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ತಲೆಗೆ ಬಲವಾದ ಹೊಡೆತ ಬಿದ್ದಿದ್ದರಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ.