ಉತ್ಸವ ಸಂಜೆ 4 ಗಂಟೆಗೆ ಎಂದು ಪ್ರಕಟಣೆ ಹೊರಡಿಸಿದ್ದರೂ ಉತ್ಸವಕ್ಕೆ ಬರಬೇಕಿದ್ದ ಎಲ್ಲ ದೇವರುಗಳು ಬರುವ ವೇಳೆಗೆ ಸಂಜೆ 6 ಗಂಟೆಯಾಗಿತ್ತು. ಶಾಸಕಿ ಪೂರ್ಣಿಮಾ ಶ್ರೀನಿವಾಸ್, ನಗರಸಭಾಧ್ಯಕ್ಷೆ ಮಂಜುಳಾ, ಬಿಜೆಪಿ ಮುಖಂಡ ಡಿ. ಟಿ.ಶ್ರೀನಿವಾಸ್, ಬನ್ನಿಮಂಟಪ ಸಮಿತಿ ಅಧ್ಯಕ್ಷ ರಾಜಪ್ಪ, ನಗರಸಭಾ ಸದಸ್ಯರಾದ ಟಿ. ಚಂದ್ರಶೇಖರ್, ಎ. ಮಂಜುನಾಥ್, ಶಿವಣ್ಣ, ಪ್ರೇಮ್ ಕುಮಾರ್, ವನಿತಾ, ತಿಪ್ಪಮ್ಮ, ಪುರುಷೋತ್ತಮ್, ದ್ಯಾಮಣ್ಣ ಅವರೂ ಪಾಲ್ಗೊಂಡಿದ್ದರು.