ಸಿಂಹಾರೂಢ ಭಂಗಿಯಲ್ಲಿ ಆನೆಬಾಗಿಲ ಬಳಿಯ ಪ್ರಸನ್ನ ಗಣಪತಿ, ಬುರುಜನಹಟ್ಟಿಯ ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿನ ಹೂವಿನ ಮೇಲಿನ ಚಿಟ್ಟೆ ಗಣಪತಿ, ಏಕನಾಥೇಶ್ವರಿ ಪಾದಗುಡಿಯ ಏಕನಾಥೇಶ್ವರಿ ಗ್ರೂಪ್ಸ್ ಸರ್ಕಲ್ ಅಡ್ಡ ಬಳಗದ ಪಂಚಮುಖಿ ಆಂಜನೇಯ ಗಣಪತಿ, ಬಸವ ಮಂಟಪದಲ್ಲಿ ದರ್ಬಾರ್ ಗಣಪ, ಸೊಪ್ಪಿನವರ ಬೀದಿಯ ವಿನಾಯಕ ಗೆಳೆಯರ ಬಳಗದ ಗಲಾಟೆ ಗಣಪತಿ, ಸಿಹಿನೀರು ಹೊಂಡದ ಬಾಗಿಲಿನ ಬನಶಂಕರಿ ಕ್ರೀಡಾ ಕ್ಲಬ್ನ ವಿನಾಯಕ ಸೇವಾ ಸಮಿತಿಯ ದರ್ಬಾರ್ ಗಣಪ, ಪತ್ರಿಕಾ ಭವನದಲ್ಲಿನ ಪರಿಸರ ಗಣಪ ಸೇರಿದಂತೆ ಮತ್ತಿತರ ಸ್ವರೂಪಿಯ ಗಣೇಶಗಳನ್ನು ಕೂರಿಸಿ ಪೂಜಿಸಲಾಗುತ್ತಿದೆ.