ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಕಾರ್ಮಿಕರಿಗೆ ಕೂಲಿ ನೀಡಲು ಚಿತ್ರದುರ್ಗದ ಪಂಜಾಬ್ ಬ್ಯಾಂಕಿನಲ್ಲಿ ಹಣ ಬಿಡಿಸಿಕೊಂಡು ಹೋಗುತ್ತಿರುವುದಾಗಿ ಬೊಲೆರೊದಲ್ಲಿದ್ದ ಹೈದರಾಬಾದ್ ದಿಲೀಪ್ ಬಿಲ್ಡರ್ನ ವ್ಯವಸ್ಥಾಪಕ ಅಮರನಾಥ್ ತಿಳಿಸಿದ್ದಾರೆ. ಎಸ್ಎಸ್ಟಿ ಅಧಿಕಾರಿ ಪ್ರೊ. ಕರಿಬಸಪ್ಪ ಹಾಗೂ ಪೊಲೀಸ್ ಅಧಿಕಾರಿ ತಿಪ್ಪೇಸ್ವಾಮಿ ಹಣ ಹಾಗೂ ವಾಹನವನ್ನು ವಶಪಡಿಸಿಕೊಂಡು ಚುನಾವಣಾ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.