‘ತಾಲ್ಲೂಕಿನಲ್ಲಿ ಶೇ 75ರಷ್ಟು ಮನೆಗಳು ಮಳೆಗೆ ಸೋರುತ್ತಿವೆ. ಶುಕ್ರವಾರ-ಶನಿವಾರ ಎರಡು ದಿನದಲ್ಲಿ 196 ಮನೆಗಳು ಹಾನಿಯಾಗಿದ್ದು, ₹ 80 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ನಿರಾಶ್ರಿತರಿಗೆ ಆಹಾರ ಧಾನ್ಯ, ಹಾಸಿಗೆ ಹಾಗೂ ಹೊದಿಕೆ ಕಲ್ಪಿಸುವ ಸಲುವಾಗಿ ಅಗತ್ಯವಿರುವ 80 ಗ್ರಾಮದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.