<p>ಚಳ್ಳಕೆರೆ: ನಗರದ ವಾಸವಿ ಕಾಲೊನಿಯ ಶಾರದಾಶ್ರಮದ ದೇವಸ್ಥಾನ ಕಟ್ಟಿದ ಕಾರ್ಮಿಕರು ಮತ್ತು ಇತರ 15 ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ಗಳನ್ನು ಆಶ್ರಮದ ಸ್ವಯಂ ಸೇವಕರು ಎಲ್ಲಾ ಕಾರ್ಮಿಕರಿಗೆ ಪೂಜೆ ಮತ್ತು ಆರತಿ ಮಾಡಿ ವಿತರಿಸಿದರು.</p>.<p>ಕಿಟ್ಗಳನ್ನು ವಿತರಿಸಿದ ಶಾರದಾಶ್ರಮದ ಅಧ್ಯಕ್ಷೆ ಮಾತಾಜಿ ತ್ಯಾಗಮಯೀ ಆಶೀರ್ವಚನ ನೀಡಿ, ‘ಆಶ್ರಮದಿಂದ ಪ್ರತಿ ತಿಂಗಳು ಸ್ವಾಮಿ ವಿವೇಕಾನಂದರ ಜೀವ ಶಿವಸೇವಾ ಕಾರ್ಯಕ್ರಮದ ಅಂಗವಾಗಿ ಬಡ- ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ. ಈ ಬಾರಿ ಆಶ್ರಮದ ದೇವಸ್ಥಾನವನ್ನು ಕಟ್ಟಿದ ಕಾರ್ಮಿಕರು ಮತ್ತು ಇತರರಿಗೆ ರಾಗಿ, ಗೋಧಿ, ಬೇಳೆ, ಬೆಲ್ಲ, ಎಣ್ಣೆ, ಸೋಪು ಸೇರಿದಂತೆ ದಿನಬಳಕೆಯ ವಸ್ತುಗಳು ಒಳಗೊಂಡ ಕಿಟ್ಗಳನ್ನು ಆಶ್ರಮದ ಭಕ್ತರ ಆರ್ಥಿಕ ನೆರವಿನಿಂದ ನೀಡಲಾಗುತ್ತಿದೆ. ಕಾರ್ಮಿಕರು ಈ ವಸ್ತುಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಡೆಸಲಿ’ ಎಂದು ಸಲಹೆ ನೀಡಿದರು.</p>.<p>ಆಶ್ರಮದ ಭಕ್ತರಾದ ಯತೀಶ್ ಎಂ ಸಿದ್ದಾಪುರ, ಎಚ್.ಲಕ್ಷ್ಮಿದೇವಮ್ಮ, ನೇತಾಜಿ ಪ್ರಸನ್ನ, ರಮೇಶ್, ಎಂ.ಗೀತಾ ನಾಗರಾಜ್, ಡಾ.ಸಿ.ಟಿ.ಬಸವರಾಜಪ್ಪ, ಡಾ.ಲಾವಣ್ಯ, ಪಿ.ಎಸ್.ಮಾಣಿಕ್ಯ, ವನಜಾಕ್ಷಿ, ಬೊಮ್ಮಕ್ಕ, ಪೂಜಾ, ನಾಗರತ್ನಮ್ಮ ಹಾಗೂ ಬಾಪೂಜಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-44-1044776890</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಳ್ಳಕೆರೆ: ನಗರದ ವಾಸವಿ ಕಾಲೊನಿಯ ಶಾರದಾಶ್ರಮದ ದೇವಸ್ಥಾನ ಕಟ್ಟಿದ ಕಾರ್ಮಿಕರು ಮತ್ತು ಇತರ 15 ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ಗಳನ್ನು ಆಶ್ರಮದ ಸ್ವಯಂ ಸೇವಕರು ಎಲ್ಲಾ ಕಾರ್ಮಿಕರಿಗೆ ಪೂಜೆ ಮತ್ತು ಆರತಿ ಮಾಡಿ ವಿತರಿಸಿದರು.</p>.<p>ಕಿಟ್ಗಳನ್ನು ವಿತರಿಸಿದ ಶಾರದಾಶ್ರಮದ ಅಧ್ಯಕ್ಷೆ ಮಾತಾಜಿ ತ್ಯಾಗಮಯೀ ಆಶೀರ್ವಚನ ನೀಡಿ, ‘ಆಶ್ರಮದಿಂದ ಪ್ರತಿ ತಿಂಗಳು ಸ್ವಾಮಿ ವಿವೇಕಾನಂದರ ಜೀವ ಶಿವಸೇವಾ ಕಾರ್ಯಕ್ರಮದ ಅಂಗವಾಗಿ ಬಡ- ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ. ಈ ಬಾರಿ ಆಶ್ರಮದ ದೇವಸ್ಥಾನವನ್ನು ಕಟ್ಟಿದ ಕಾರ್ಮಿಕರು ಮತ್ತು ಇತರರಿಗೆ ರಾಗಿ, ಗೋಧಿ, ಬೇಳೆ, ಬೆಲ್ಲ, ಎಣ್ಣೆ, ಸೋಪು ಸೇರಿದಂತೆ ದಿನಬಳಕೆಯ ವಸ್ತುಗಳು ಒಳಗೊಂಡ ಕಿಟ್ಗಳನ್ನು ಆಶ್ರಮದ ಭಕ್ತರ ಆರ್ಥಿಕ ನೆರವಿನಿಂದ ನೀಡಲಾಗುತ್ತಿದೆ. ಕಾರ್ಮಿಕರು ಈ ವಸ್ತುಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಡೆಸಲಿ’ ಎಂದು ಸಲಹೆ ನೀಡಿದರು.</p>.<p>ಆಶ್ರಮದ ಭಕ್ತರಾದ ಯತೀಶ್ ಎಂ ಸಿದ್ದಾಪುರ, ಎಚ್.ಲಕ್ಷ್ಮಿದೇವಮ್ಮ, ನೇತಾಜಿ ಪ್ರಸನ್ನ, ರಮೇಶ್, ಎಂ.ಗೀತಾ ನಾಗರಾಜ್, ಡಾ.ಸಿ.ಟಿ.ಬಸವರಾಜಪ್ಪ, ಡಾ.ಲಾವಣ್ಯ, ಪಿ.ಎಸ್.ಮಾಣಿಕ್ಯ, ವನಜಾಕ್ಷಿ, ಬೊಮ್ಮಕ್ಕ, ಪೂಜಾ, ನಾಗರತ್ನಮ್ಮ ಹಾಗೂ ಬಾಪೂಜಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-44-1044776890</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>