ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ, ಮಗ ಚೇಸಿಂಗ್‌: ಗಾಬರಿಯಿಂದ ಅಪಘಾತ

ಕಲ್ಲು ಕಂಬಕ್ಕೆ ಡಿಕ್ಕಿ: ವ್ಯಕ್ತಿ ಸಾವು, ಚರಂಡಿಗೆ ಬಿದ್ದ ಸ್ಕಾರ್ಪಿಯೊ
Last Updated 6 ಡಿಸೆಂಬರ್ 2022, 5:32 IST
ಅಕ್ಷರ ಗಾತ್ರ

ಶ್ರೀರಾಂಪುರ: ಮಹಿಳೆಯೊಬ್ಬ ರನ್ನು ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದವ್ಯ ಕ್ತಿಯೊಬ್ಬರು, ಪತ್ನಿ ಮತ್ತು ಮಗ ಹಿಂಬಾಲಿಸಿದ್ದರಿಂದ ಗಾಬರಿಗೊಂಡು ವೇಗದಿಂದ ಸಾಗಿ ಕಲ್ಲಿನ ಕಂಬಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ಸಮೀಪದ ಅರಲಹಳ್ಳಿ ಗೇಟ್ ಬಳಿ ಸೋಮವಾರ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪಟ್ಟಣದ ನಯಾಜ್‌ ಉಲ್ಲಾ ಖಾನ್‌ (48) ಎಂದು ಗುರುತಿಸಲಾಗಿದೆ. ಬೈಕ್‌ ಹಿಂಬದಿಯಲ್ಲಿ ಕುಳಿತಿದ್ದ ಅದೇ ಗ್ರಾಮದ ನಸ್ರೀನ್‌ ತಾಜ್‌ ಎಂಬವರಿಗೆ ಗಾಯಗಳಾಗಿವೆ.

ಹುಳಿಯಾರು ಪಟ್ಟಣದಿಂದ ನಸ್ರೀನ್‌ ತಾಜ್‌ ಅವರನ್ನು ಬೈಕ್‍ ಹಿಂಬದಿಯಲ್ಲಿ ಕೂರಿಸಿಕೊಂಡು ಬರುತ್ತಿದ್ದ ನಯಾಜ್‌ ಉಲ್ಲಾ ಖಾನ್‌ ಅವರು ತಮ್ಮ ಬೈಕ್‌ ಅನ್ನು ಪತ್ನಿ ಷಬಾನ್‌ ಬಾನು, ಮಗ ಶಾಬಜ್‌ ಖಾನ್‌, ಅಕ್ಕನ ಮಗ ಅತೀಕ್‌ ಸ್ಕಾರ್ಪಿಯೊ ವಾಹನದಲ್ಲಿ ಹಿಂಬಾಲಿಸಿದ್ದನ್ನು ಅರಿತು ಬೈಕ್‌ನ ವೇಗ ಹೆಚ್ಚಿಸಿದ್ದಾರೆ. ಈ ಸಂದರ್ಭ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಲ್ಲು ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇದೇ ವೇಳೆ ಅವರನ್ನು ಹಿಂಬಾಲಿಸುತ್ತಿದ್ದ ಸ್ಕಾರ್ಪಿಯೊ ವಾಹನವೂ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ. ಅವರ ಪತ್ನಿ ಸೇರಿ ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT