<p><strong>ಚಿಕ್ಕಜಾಜೂರು:</strong> ಚಿಕ್ಕಜಾಜೂರು ಸೇರಿದಂತೆ ಬಿ. ದುರ್ಗ ಹೋಬಳಿಯ ಬಹುತೇಕ ಕಡೆಗಳಲ್ಲಿ ಭಾನುವಾರ ಮುಂಜಾನೆ ದಟ್ಟ ಮಂಜು ಮುಸುಕಿದ ವಾತಾವರಣ ಕಂಡುಬಂದಿತು. ಮುಂಜಾನೆ 6ರಿಂದ 8ರವರೆಗೂ ರಸ್ತೆ, ತೋಟಗಳು ಮಂಜಿನಿಂದ ಆವರಿಸಿದ್ದವು. ವಾಹನ ಸವಾರರು ದೀಪ ಹಾಕಿಕೊಂಡು ಸಂಚರಿಸಿದರು. </p>.<p><strong>ತೋಟದ ಬೆಳೆಗಾರರಲ್ಲಿ ಆತಂಕ:</strong> ಕಳೆದ ಶುಕ್ರವಾರವೂ ಇಬ್ಬನಿ ಬಿದ್ದಿತ್ತು. ಇದಾದ ಎರಡು ದಿನಗಳ ಅಂತರದಲ್ಲಿ ಮತ್ತೆ ದಟ್ಟ ಮಂಜು ಆವರಿಸಿತ್ತು. ಈಗ ಮತ್ತೆ ದಟ್ಟವಾದ ಮಂಜು ಆವರಿಸಿದ್ದು, ತೋಟಗಾರಿಕೆ ಬೆಳೆಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ. </p>.<p>ಮಾವು, ಅಡಿಕೆ ಮತ್ತು ತೆಂಗಿನ ಮರಗಳಲ್ಲಿನ ಹರಳು ಹಾಗೂ ಈಚುಗಳಿಗೆ ಹಾನಿಯಾಗುವ ಭೀತಿ ಮೂಡಿದೆ. ಕಳೆದ ವರ್ಷ ಮಾವಿನಿಂದ ನಿರೀಕ್ಷಿತ ಇಳುವರಿ ಮತ್ತು ಆದಾಯ ಸಿಗಲಿಲ್ಲ. ಈ ಬಾರಿ ಮಾವು ಸಮೃದ್ಧವಾಗಿ ಹೂ ಬಿಟ್ಟು, ಈಚುಗಳಾಗುತ್ತಿವೆ. ಇಬ್ಬನಿಯಿಂದಾಗಿ ಈಚು ಉದುರುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಕಡೂರು, ಹಿರೇಎಮ್ಮಿಗನೂರು, ಚಿಕ್ಕಜಾಜೂರಿನ ರೈತರಾದ ಅನಂತಪ್ಪ, ಶ್ರೀನಿವಾಸ್, ಓಂಕಾರಪ್ಪ, ಮಂಜುನಾಥ್, ರಘು, ಎಂ. ಲೋಕೇಶ್ ಮತ್ತಿತರರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಜಾಜೂರು:</strong> ಚಿಕ್ಕಜಾಜೂರು ಸೇರಿದಂತೆ ಬಿ. ದುರ್ಗ ಹೋಬಳಿಯ ಬಹುತೇಕ ಕಡೆಗಳಲ್ಲಿ ಭಾನುವಾರ ಮುಂಜಾನೆ ದಟ್ಟ ಮಂಜು ಮುಸುಕಿದ ವಾತಾವರಣ ಕಂಡುಬಂದಿತು. ಮುಂಜಾನೆ 6ರಿಂದ 8ರವರೆಗೂ ರಸ್ತೆ, ತೋಟಗಳು ಮಂಜಿನಿಂದ ಆವರಿಸಿದ್ದವು. ವಾಹನ ಸವಾರರು ದೀಪ ಹಾಕಿಕೊಂಡು ಸಂಚರಿಸಿದರು. </p>.<p><strong>ತೋಟದ ಬೆಳೆಗಾರರಲ್ಲಿ ಆತಂಕ:</strong> ಕಳೆದ ಶುಕ್ರವಾರವೂ ಇಬ್ಬನಿ ಬಿದ್ದಿತ್ತು. ಇದಾದ ಎರಡು ದಿನಗಳ ಅಂತರದಲ್ಲಿ ಮತ್ತೆ ದಟ್ಟ ಮಂಜು ಆವರಿಸಿತ್ತು. ಈಗ ಮತ್ತೆ ದಟ್ಟವಾದ ಮಂಜು ಆವರಿಸಿದ್ದು, ತೋಟಗಾರಿಕೆ ಬೆಳೆಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ. </p>.<p>ಮಾವು, ಅಡಿಕೆ ಮತ್ತು ತೆಂಗಿನ ಮರಗಳಲ್ಲಿನ ಹರಳು ಹಾಗೂ ಈಚುಗಳಿಗೆ ಹಾನಿಯಾಗುವ ಭೀತಿ ಮೂಡಿದೆ. ಕಳೆದ ವರ್ಷ ಮಾವಿನಿಂದ ನಿರೀಕ್ಷಿತ ಇಳುವರಿ ಮತ್ತು ಆದಾಯ ಸಿಗಲಿಲ್ಲ. ಈ ಬಾರಿ ಮಾವು ಸಮೃದ್ಧವಾಗಿ ಹೂ ಬಿಟ್ಟು, ಈಚುಗಳಾಗುತ್ತಿವೆ. ಇಬ್ಬನಿಯಿಂದಾಗಿ ಈಚು ಉದುರುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಕಡೂರು, ಹಿರೇಎಮ್ಮಿಗನೂರು, ಚಿಕ್ಕಜಾಜೂರಿನ ರೈತರಾದ ಅನಂತಪ್ಪ, ಶ್ರೀನಿವಾಸ್, ಓಂಕಾರಪ್ಪ, ಮಂಜುನಾಥ್, ರಘು, ಎಂ. ಲೋಕೇಶ್ ಮತ್ತಿತರರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>