<p><strong>ಚಿಕ್ಕಜಾಜೂರು:</strong> ಎರಡು ತಿಂಗಳಿಂದ ದಿನೇದಿನೇ ಬಿಸಿಲಿನ ತಾಪಮಾನ ಏರಿಕೆಯಾಗುತ್ತಲೇ ಇದ್ದು, ಪರಿಣಾಮವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೊಳವೆ ಬಾವಿಗಳಲ್ಲಿ ನೀರು ಬರದೇ ತೋಟದ ಬೆಳೆಗಾರರು ಕಂಗಾಲಾಗಿದ್ದಾರೆ.</p>.<p>ಮೇ ತಿಂಗಳು ಕಾಲಿಟ್ಟರೂ ಮಳೆ ಸುರಿಯದ್ದರಿಂದ ಬಿ. ದುರ್ಗ ಹೋಬಳಿ ಹಾಗೂ ಚಿಕ್ಕಜಾಜೂರು ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ತೋಟಗಳಲ್ಲಿನ ಅಡಿಕೆ ಮರಗಲು ಒಣಗುತ್ತಿವೆ. ಏಪ್ರಿಲ್ನಲ್ಲಿ ರೈತರು ಹನಿ ನೀರಾವರಿ ಮೂಲಕ ಅಡಿಕೆ ತೋಟಗಳಿಗೆ ನೀರುಣಿಸಿದರು. ಆಗ ಏಕ ಕಾಲದಲ್ಲಿ 6ರಿಂದ 8 ವಾಲ್ವ್ಗಳ ಮೂಲಕ ಅಡಿಕೆ ಮರಗಳಿಗೆ ನೀರನ್ನು ಹಾಯಿಸುತ್ತಿದ್ದರು. ಈಗ ಅವುಗಳ ಸಂಖ್ಯೆ 3ರಿಂದ 4 ಕ್ಕೆ ಇಳಿದಿದೆ.</p>.<p>ಕೊಳವೆಬಾವಿಗಳ ಬತ್ತಿದ್ದರಿಂದ ಜಮೀನುಗಳಲ್ಲಿ ರೈತರು ಮತ್ತೆ 800ರಿಂದ 900 ಅಡಿ ಆಳದವರೆಗೆ ಕೊಳವೆ ಬಾವಿಗಳನ್ನು ಕೊರೆಸುತ್ತಿರುವುದು ಸಾಮಾನ್ಯವಾಗಿದೆ.</p>.<p>ಗುಂಜಿಗನೂರು, ಹಿರಿಯೂರು, ಮಲ್ಲೇನಹಳ್ಳಿ, ಹಿರೇಕಂದವಾಡಿ ಮೊದಲಾದ ಕಡೆಗಳಲ್ಲಿನ ಬಹುತೇಕ ಕೊಳವೆ ಬಾವಿಗಳು ಬರಿದಾಗಿದ್ದು, ರೈತರು ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರನ್ನು ಅವಲಂಬಿಸುವಂತಾಗಿದೆ.</p>.<p>600ರಿಂದ 700 ಅಡಿ ಆಳದಲ್ಲಿ ಸ್ವಲ್ಪ ಮಟ್ಟಿಗೆ ನೀರು ಕಾಣಿಸಿಕೊಂಡರೂ, ನಂತರ 10ರಿಂದ 20 ಅಡಿ ಆಳಕ್ಕೆ ಹೋಗುತ್ತಲೇ ಮತ್ತೆ ದೂಳು ಹೊರಬರುತ್ತದೆ ಎನ್ನುತ್ತಾರೆ ರೈತರಾದ ಚಿಕ್ಕಜಾಜೂರಿನ ಪಿ.ಜಿ. ಪವನ್, ದೀಪಕ್, ಹಿರೇಕಂದವಾಡಿ ಬಿ.ಆರ್. ಈಶ್ವರಪ್ಪ, ಚಿಕ್ಕಂದವಾಡಿ ಜಯಪ್ಪ, ಮೂರ್ತಿ, ಆನಂದಪ್ಪ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-44-1308548502</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಜಾಜೂರು:</strong> ಎರಡು ತಿಂಗಳಿಂದ ದಿನೇದಿನೇ ಬಿಸಿಲಿನ ತಾಪಮಾನ ಏರಿಕೆಯಾಗುತ್ತಲೇ ಇದ್ದು, ಪರಿಣಾಮವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೊಳವೆ ಬಾವಿಗಳಲ್ಲಿ ನೀರು ಬರದೇ ತೋಟದ ಬೆಳೆಗಾರರು ಕಂಗಾಲಾಗಿದ್ದಾರೆ.</p>.<p>ಮೇ ತಿಂಗಳು ಕಾಲಿಟ್ಟರೂ ಮಳೆ ಸುರಿಯದ್ದರಿಂದ ಬಿ. ದುರ್ಗ ಹೋಬಳಿ ಹಾಗೂ ಚಿಕ್ಕಜಾಜೂರು ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ತೋಟಗಳಲ್ಲಿನ ಅಡಿಕೆ ಮರಗಲು ಒಣಗುತ್ತಿವೆ. ಏಪ್ರಿಲ್ನಲ್ಲಿ ರೈತರು ಹನಿ ನೀರಾವರಿ ಮೂಲಕ ಅಡಿಕೆ ತೋಟಗಳಿಗೆ ನೀರುಣಿಸಿದರು. ಆಗ ಏಕ ಕಾಲದಲ್ಲಿ 6ರಿಂದ 8 ವಾಲ್ವ್ಗಳ ಮೂಲಕ ಅಡಿಕೆ ಮರಗಳಿಗೆ ನೀರನ್ನು ಹಾಯಿಸುತ್ತಿದ್ದರು. ಈಗ ಅವುಗಳ ಸಂಖ್ಯೆ 3ರಿಂದ 4 ಕ್ಕೆ ಇಳಿದಿದೆ.</p>.<p>ಕೊಳವೆಬಾವಿಗಳ ಬತ್ತಿದ್ದರಿಂದ ಜಮೀನುಗಳಲ್ಲಿ ರೈತರು ಮತ್ತೆ 800ರಿಂದ 900 ಅಡಿ ಆಳದವರೆಗೆ ಕೊಳವೆ ಬಾವಿಗಳನ್ನು ಕೊರೆಸುತ್ತಿರುವುದು ಸಾಮಾನ್ಯವಾಗಿದೆ.</p>.<p>ಗುಂಜಿಗನೂರು, ಹಿರಿಯೂರು, ಮಲ್ಲೇನಹಳ್ಳಿ, ಹಿರೇಕಂದವಾಡಿ ಮೊದಲಾದ ಕಡೆಗಳಲ್ಲಿನ ಬಹುತೇಕ ಕೊಳವೆ ಬಾವಿಗಳು ಬರಿದಾಗಿದ್ದು, ರೈತರು ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರನ್ನು ಅವಲಂಬಿಸುವಂತಾಗಿದೆ.</p>.<p>600ರಿಂದ 700 ಅಡಿ ಆಳದಲ್ಲಿ ಸ್ವಲ್ಪ ಮಟ್ಟಿಗೆ ನೀರು ಕಾಣಿಸಿಕೊಂಡರೂ, ನಂತರ 10ರಿಂದ 20 ಅಡಿ ಆಳಕ್ಕೆ ಹೋಗುತ್ತಲೇ ಮತ್ತೆ ದೂಳು ಹೊರಬರುತ್ತದೆ ಎನ್ನುತ್ತಾರೆ ರೈತರಾದ ಚಿಕ್ಕಜಾಜೂರಿನ ಪಿ.ಜಿ. ಪವನ್, ದೀಪಕ್, ಹಿರೇಕಂದವಾಡಿ ಬಿ.ಆರ್. ಈಶ್ವರಪ್ಪ, ಚಿಕ್ಕಂದವಾಡಿ ಜಯಪ್ಪ, ಮೂರ್ತಿ, ಆನಂದಪ್ಪ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-44-1308548502</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>