ತಾಲ್ಲೂಕಿನ ಕೆಲ್ಲೋಡು, ಕಪ್ಪಗೆರೆ, ಕುರುಬರಹಳ್ಳಿ, ಕಬ್ಬಳ, ಹಾಗಲಕೆರೆ, ಕುಂದೂರು, ಬಾಗೂರು, ಮಾಡದಕೆರೆ, ಶ್ರೀರಂಗಾಪುರ, ನೀರಗುಂದ, ಮಳಲಿ ಸೇರಿ ಹಲವು ಹಳ್ಳಿಗಳಲ್ಲಿ ರೈತರು ಕೊತ್ತುಂಬರಿ ಸೊಪ್ಪು ಮತ್ತು ತರಕಾರಿ ಬೆಳೆಯುತ್ತಿದ್ದರು. ಆದರೆ, ಸತತ ಮಳೆ ಅಭಾವದಿಂದ ಅಂತರ್ಜಲ ಪಾತಾಳಕ್ಕೆ ಇಳಿದಿದೆ. ನೀರು ಪೂರೈಕೆ ಮಾಡುತ್ತಿದ್ದ ಕೊಳವೆಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ.