ಇದುವರೆಗೆ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಜನರು ನ್ಯಾಯಾಲಯದಿಂದ ಪಡೆದುಕೊಳ್ಳ
ಬೇಕಿತ್ತು. ಈಗ ಜಿಲ್ಲಾ ಉಪವಿಭಾಗಾಧಿಕಾರಿಯಿಂದ ಪಡೆದುಕೊಳ್ಳಲು ಸರ್ಕಾರ ಆದೇಶಿಸಿದೆ. ಇದು ಅವೈಜ್ಞಾನಿಕವಾಗಿರುವ ಜತೆಗೆ ಜನರ ಸಮಯ, ಹಣ ವ್ಯರ್ಥವಾಗಲಿದೆ. ಕೂಡಲೇ ಈ ಬಗ್ಗೆ ಗಮನಹರಿಸಿ ಆದೇಶ ವಾಪಸ್ ಪಡೆದು ಹಳೆ ಪದ್ಧತಿ ಮುಂದುವರಿಸಬೇಕು ಎಂದು ಮನವಿ ಮಾಡಿದರು. ಶೀರಸ್ತೇದಾರ್ ಏಳುಕೋಟಿ ಮನವಿ ಸ್ವೀಕರಿಸಿದರು. ವಕೀಲರ ಸಂಘದ ಅಧ್ಯಕ್ಷ ಆರ್. ಆನಂದ್, ಉಪಾಧ್ಯಕ್ಷ ಡಿ. ಬಸವರಾಜ್, ಕಾರ್ಯದರ್ಶಿ ವಿ.ಡಿ. ರಾಘವೇಂದ್ರ, ಚಾಣಾಕ್ಯ, ಪರಮೇಶ್ವರಪ್ಪ, ರಾಮಾಂಜಿನೇಯ, ಅನಸೂಯ, ಸುರೇಶ್, ಒಳಮಠ್, ಹುಲಿಗಪ್ಪ ಇದ್ದರು.