<p><strong>ಚಿತ್ರದುರ್ಗ:</strong> ‘ಅಲ್ಲಮಪ್ರಭುಗಳ ಜೀವನ ಮತ್ತು ಸಾಧನೆ ಅತ್ಯಂತ ಅನನ್ಯವಾದದು. ಮಾತೃ ಹೃದಯದ ವಾತ್ಸಲ್ಯ, ಸೂಕ್ಷ್ಮತೆಯ ಕಾರಣದಿಂದಾಗಿಯೇ 12ನೇ ಶತಮಾನದ ಎಲ್ಲಾ ಶರಣರು ಅವರಿಗೆ ತಲೆಬಾಗುತ್ತಿದ್ದರು’ ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.</p>.<p>ನಗರದ ಮುರುಘಾ ಮಠದಲ್ಲಿ ಗುರುವಾರ ಆಯೋಜಿಸಿದ್ದ ಅಲ್ಲಮಪ್ರಭುಗಳ ಶರಣೋತ್ಸವದಲ್ಲಿ ಮಾತನಾಡಿದ ಅವರು, ‘ಜ್ಞಾನ ವೈಚಾರಿಕತೆಯ ಪ್ರಾಜ್ಞನಾಗಿ ಶರಣರ, ಸಾಧಕರ ಮೇಲೆ ತನ್ನ ಆಳವಾದ ಪ್ರಭಾವ ಬೀರಿದರು. ಜತೆಗೆ ಶರಣ ಮಾರ್ಗಕ್ಕೆ ಗುರುವಾಗಿ ಅನುಭವ ಮಂಟಪದ ಅಧ್ಯಕ್ಷರಾದರೂ ಅಂತರ್ಮುಖಿಯಾಗಿ ಬದುಕಿದರು’ ಎಂದರು.</p>.<p>‘ಯಾವ ಕಟ್ಟುಪಾಡಿಗೂ ಒಳಗಾಗದೇ ಎಲ್ಲಾ ಮಾರ್ಗಗಳ, ಎಲ್ಲಾ ಪಂಥಗಳ, ಎಲ್ಲಾ ವ್ಯಕ್ತಿಗಳ ಗುಣಾಂಶವನ್ನು ಮೆಚ್ಚಿದರು. ಅಷ್ಟೇ ಅಲ್ಲದೇ ಅವಗುಣಗಳನ್ನು ಖಂಡಿಸಿದರು. ಅಲ್ಲಮನ ಆ ನಿಷ್ಠುರತೆಯ ಹಿಂದೆ ವೈಚಾರಿಕತೆಯ ಪ್ರಖರತೆ ಇತ್ತು’ ಎಂದು ಹೇಳಿದರು.</p>.<p>‘ಒಬ್ಬ ಸಾಹಿತಿ ಪ್ರಭುದೇವರನ್ನು ನೋಡುವ ದೃಷ್ಟಿಕೋನಕ್ಕೂ, ಒಬ್ಬ ಸ್ವಾಮೀಜಿ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಯಾಕೆಂದರೆ ಅಲ್ಲಮ ಈ ನೆಲದ ಬಹುದೊಡ್ಡ ತತ್ವಜ್ಞಾನಿ. ಜಗತ್ತಿನ ಧರ್ಮಗಳೆಲ್ಲ ಮತಗಳಾಗಿ, ಜಾತಿಗಳಾಗಿ ವಿಜೃಂಭಿಸುತ್ತಿದ್ದ ಕಾಲಘಟ್ಟದಲ್ಲಿ ಮತವೇ ಬೇರೆ, ಧರ್ಮವೇ ಬೇರೆ ಎಂದು ಸಾಧಿಸಿ ತೋರಿಸಿದವರು ಅಲ್ಲಮ ಪ್ರಭುದೇವರು’ ಎಂದು ಸ್ಮರಿಸಿದರು.</p>.<p>‘ಅಲ್ಲಮಪ್ರಭುಗಳು ಹಲವು ಶರಣರನ್ನು ಪ್ರಭಾವಿಸಿದವರು. ಗೊಗ್ಗಯ್ಯ, ಮುಕ್ತಾಯಕ್ಕ, ಸಿದ್ದರಾಮರಿಗೆ ಕೈವಲ್ಯ ಜ್ಞಾನವನ್ನು ನೀಡಿದವರು’ ಎಂದು ನಿವೃತ್ತ ಪ್ರಾಂಶುಪಾಲ ಕೊಟ್ರೇಶ್ ತಿಳಿಸಿದರು.</p>.<p>ಬಸವ ಯಾದವಾನಂದ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಬಸವ ಮಹಾಂತ ಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ, ಭಕ್ತರಾದ ಪೈಲ್ವಾನ್ ತಿಪ್ಪೇಸ್ವಾಮಿ, ನಾಗರಾಜ್ ಸಂಗಮ್, ಆನಂದ್, ಬಸವರಾಜ ಕಟ್ಟಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260321-44-349327818</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ‘ಅಲ್ಲಮಪ್ರಭುಗಳ ಜೀವನ ಮತ್ತು ಸಾಧನೆ ಅತ್ಯಂತ ಅನನ್ಯವಾದದು. ಮಾತೃ ಹೃದಯದ ವಾತ್ಸಲ್ಯ, ಸೂಕ್ಷ್ಮತೆಯ ಕಾರಣದಿಂದಾಗಿಯೇ 12ನೇ ಶತಮಾನದ ಎಲ್ಲಾ ಶರಣರು ಅವರಿಗೆ ತಲೆಬಾಗುತ್ತಿದ್ದರು’ ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.</p>.<p>ನಗರದ ಮುರುಘಾ ಮಠದಲ್ಲಿ ಗುರುವಾರ ಆಯೋಜಿಸಿದ್ದ ಅಲ್ಲಮಪ್ರಭುಗಳ ಶರಣೋತ್ಸವದಲ್ಲಿ ಮಾತನಾಡಿದ ಅವರು, ‘ಜ್ಞಾನ ವೈಚಾರಿಕತೆಯ ಪ್ರಾಜ್ಞನಾಗಿ ಶರಣರ, ಸಾಧಕರ ಮೇಲೆ ತನ್ನ ಆಳವಾದ ಪ್ರಭಾವ ಬೀರಿದರು. ಜತೆಗೆ ಶರಣ ಮಾರ್ಗಕ್ಕೆ ಗುರುವಾಗಿ ಅನುಭವ ಮಂಟಪದ ಅಧ್ಯಕ್ಷರಾದರೂ ಅಂತರ್ಮುಖಿಯಾಗಿ ಬದುಕಿದರು’ ಎಂದರು.</p>.<p>‘ಯಾವ ಕಟ್ಟುಪಾಡಿಗೂ ಒಳಗಾಗದೇ ಎಲ್ಲಾ ಮಾರ್ಗಗಳ, ಎಲ್ಲಾ ಪಂಥಗಳ, ಎಲ್ಲಾ ವ್ಯಕ್ತಿಗಳ ಗುಣಾಂಶವನ್ನು ಮೆಚ್ಚಿದರು. ಅಷ್ಟೇ ಅಲ್ಲದೇ ಅವಗುಣಗಳನ್ನು ಖಂಡಿಸಿದರು. ಅಲ್ಲಮನ ಆ ನಿಷ್ಠುರತೆಯ ಹಿಂದೆ ವೈಚಾರಿಕತೆಯ ಪ್ರಖರತೆ ಇತ್ತು’ ಎಂದು ಹೇಳಿದರು.</p>.<p>‘ಒಬ್ಬ ಸಾಹಿತಿ ಪ್ರಭುದೇವರನ್ನು ನೋಡುವ ದೃಷ್ಟಿಕೋನಕ್ಕೂ, ಒಬ್ಬ ಸ್ವಾಮೀಜಿ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಯಾಕೆಂದರೆ ಅಲ್ಲಮ ಈ ನೆಲದ ಬಹುದೊಡ್ಡ ತತ್ವಜ್ಞಾನಿ. ಜಗತ್ತಿನ ಧರ್ಮಗಳೆಲ್ಲ ಮತಗಳಾಗಿ, ಜಾತಿಗಳಾಗಿ ವಿಜೃಂಭಿಸುತ್ತಿದ್ದ ಕಾಲಘಟ್ಟದಲ್ಲಿ ಮತವೇ ಬೇರೆ, ಧರ್ಮವೇ ಬೇರೆ ಎಂದು ಸಾಧಿಸಿ ತೋರಿಸಿದವರು ಅಲ್ಲಮ ಪ್ರಭುದೇವರು’ ಎಂದು ಸ್ಮರಿಸಿದರು.</p>.<p>‘ಅಲ್ಲಮಪ್ರಭುಗಳು ಹಲವು ಶರಣರನ್ನು ಪ್ರಭಾವಿಸಿದವರು. ಗೊಗ್ಗಯ್ಯ, ಮುಕ್ತಾಯಕ್ಕ, ಸಿದ್ದರಾಮರಿಗೆ ಕೈವಲ್ಯ ಜ್ಞಾನವನ್ನು ನೀಡಿದವರು’ ಎಂದು ನಿವೃತ್ತ ಪ್ರಾಂಶುಪಾಲ ಕೊಟ್ರೇಶ್ ತಿಳಿಸಿದರು.</p>.<p>ಬಸವ ಯಾದವಾನಂದ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಬಸವ ಮಹಾಂತ ಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ, ಭಕ್ತರಾದ ಪೈಲ್ವಾನ್ ತಿಪ್ಪೇಸ್ವಾಮಿ, ನಾಗರಾಜ್ ಸಂಗಮ್, ಆನಂದ್, ಬಸವರಾಜ ಕಟ್ಟಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260321-44-349327818</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>