<p>ಚಿತ್ರದುರ್ಗ: ‘ಬಿ.ಡಿ ರಸ್ತೆ ವಿಸ್ತರಣೆ ಕತೆ ಏನಾಯ್ತು ಸಚಿವರೇ?...</p>.<p>ಕೋಟೆನಗರಿಯ ನಾಗರಿಕರು ಈಗ ಕೇಳುತ್ತಿರುವ ಪ್ರಶ್ನೆ ಇದು. ನಗರದ ಹೃದಯ ಭಾಗದಲ್ಲಿ ಹಾದುಹೋಗಿರುವ ಬಿ.ಡಿ ರಸ್ತೆ ವಿಸ್ತರಣೆ ಮಾತುಗಳು ಈಗ ತಣ್ಣಗಾಗಿವೆ. ‘ರಸ್ತೆ ವಿಸ್ತರಣೆ ಶತಃಸಿದ್ಧ’ ಎಂದು ಘೋಷಣೆ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮೌನಕ್ಕೆ ಶರಣಾಗಿದ್ದಾರೆ. ಇದರಿಂದಾಗಿ ವಾಹನ ಸವಾರರ ಗೋಳು ಹೇಳತೀರದಾಗಿದೆ.</p>.<p>ಚಳ್ಳಕೆರೆ ಗೇಟ್ನಿಂದ ಕನಕ ವೃತ್ತದವರೆಗೆ 2 ಹಂತದಲ್ಲಿ ರಸ್ತೆ ವಿಸ್ತರಣೆ ಮಾಡುವುದಾಗಿ ಜಿಲ್ಲಾಡಳಿತ ಘೋಷಣೆ ಮಾಡಿತ್ತು. ಸರ್ಕಾರದ ಅನುಮತಿಗಾಗಿ ಪ್ರಸ್ತಾವವನ್ನೂ ಸಲ್ಲಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಕೆ.ಸಿ.ವೀರೇಂದ್ರ ಅವರೂ ರಸ್ತೆ ವಿಸ್ತರಣೆ ಅನಿವಾರ್ಯ ಎಂದಿದ್ದರು. ವರ್ಷ ತುಂಬುತ್ತಿದ್ದರೂ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಆಗದಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.</p>.<p>ರಸ್ತೆ ವಿಸ್ತರಣೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ತುಟಿ ಬಿಚ್ಚದ ಕಾರಣ ಜನರಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಜಿಲ್ಲಾಡಳಿತ ನಿಯಮಾನುಸಾರ ರಸ್ತೆ ವಿಸ್ತರಣೆ ಮಾಡಲಿದೆಯೇ? ವರ್ತಕರ ಲಾಬಿಗೆ ಮಣಿದು ಯೋಜನೆಯನ್ನು ಮೂಲೆಗೆ ಎಸೆಯುವುದೇ? ನಾವು ಸಮಸ್ಯೆಗಳ ನಡುವೆಯೇ ಓಡಾಡಬೇಕಾಬಹುದೇ? ಹೀಗೆ ನಾನಾ ಪ್ರಶ್ನೆಗಳು ಜನರ ಮನಸ್ಸಲ್ಲಿ ಮೂಡುತ್ತಿವೆ. ಈ ಕಾರಣದಿಂದಾಗಿ ರಸ್ತೆ ವಿಸ್ತರಣೆ ಕತೆ ಎಲ್ಲಿಗೆ ಬಂತು ಎಂದು ಸಾರ್ವಜನಿಕರು ಈಗ ಸಚಿವರು ಹಾಗೂ ಅಧಿಕಾರಿಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ.</p>.<p>ಬಿ.ಡಿ.ರಸ್ತೆ ವಿಸ್ತರಣೆಯಾಗಬೇಕು ಎಂಬುದು ಹಲವು ವರ್ಷಗಳ ಕನಸು. ದಶಕಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ–48 ಇದೇ ಮಾರ್ಗದಲ್ಲಿ ಹಾದು ಹೋಗಿತ್ತು. ಆಗ ವಾಹನಗಳ ಓಡಾಟ ಕಡಿಮೆ ಇದ್ದ ಕಾರಣ ಜನರಿಗೆ ತೊಂದರೆಯಾಗಿರಲಿಲ್ಲ. ಈಗ ವಾಹನಗಳು ನಗರದ ಹೊರವಲಯದಲ್ಲಿರುವ ಬೈಪಾಸ್ನಲ್ಲಿ ಓಡಾಡುತ್ತಿದ್ದರೂ ನಗರದೊಳಗೆ ವಾಹನ ದಟ್ಟಣೆ ಹೆಚ್ಚಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹೈರಾಣಾಗಿದ್ದಾರೆ. ಹೀಗಾಗಿ ಬಿ.ಡಿ ರಸ್ತೆ ವಿಸ್ತರಣೆ ಅನಿವಾರ್ಯ ಎಂಬ ಕೂಗು ಕೇಳಿ ಬರುತ್ತಿದೆ.</p>.<p>ಪ್ರವಾಸಿ ಮಂದಿರ ವೃತ್ತದಿಂದ ಗಾಂಧಿ ವೃತ್ತದವರೆಗೆ ಮೊದಲ ಹಂತ, ಗಾಂಧಿ ವೃತ್ತದಿಂದ ಕನಕ ವೃತ್ತದವರೆಗೆ ಎರಡನೇ ಹಂತದಲ್ಲಿ ರಸ್ತೆ ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಅಳತೆ ಮಾಡಿ ಗುರುತುಗಳನ್ನೂ ಮಾಡಲಾಗಿತ್ತು. ರಸ್ತೆಯ ಮಧ್ಯ ಭಾಗದಿಂದ 25 ಮೀಟರ್ ವಿಸ್ತರಿಸುವ ಉದ್ದೇಶ ಯೋಜನೆಯದ್ದಾಗಿತ್ತು. ತೆರವಿಗೆ ಈ ವ್ಯಾಪ್ತಿಯಲ್ಲಿರುವ 400ಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳ ಪಟ್ಟಿಯನ್ನೂ ಸಿದ್ಧಗೊಳಿಸಲಾಗಿತ್ತು.</p>.<p>ರಸ್ತೆ ವಿಸ್ತರಣೆ ಮಾಡುವುದು ಶತಃಸಿದ್ಧವಾಗಿದ್ದರೂ ನಗರಸಭೆಯು ಹೊಸ ಕಟ್ಟಡಗಳ ನಿರ್ಮಾಣಕ್ಕೆ ಹೇಗೆ ಅನುಮತಿ ನೀಡುತ್ತಿದೆ ಎಂಬ ಪ್ರಶ್ನೆ ಸ್ಥಳೀಯರಲ್ಲಿದೆ. ಜೊತೆಗೆ ಕಟ್ಟಡಗಳಿಗೆ ಇ–ಸ್ವತ್ತು, ಮಳಿಗೆಗಳಿಗೆ ವ್ಯಾಪಾರ ಪರವಾನಗಿ ಹೇಗೆ ಸಿಗುತ್ತಿವೆ ಎಂಬ ಅನುಮಾನಗಳೂ ಕಾಡುತ್ತಿವೆ. ಹಣದ ಆಮಿಷ, ಪ್ರಭಾವಿಗಳ ಒತ್ತಡಕ್ಕೆ ಮಣಿಯುತ್ತಿರುವ ನಗರಸಭೆ ಅಧಿಕಾರಿಗಳು ನಿಯಮ ಮೀರಿ ವಾಣಿಜ್ಯ ಪರವಾನಗಿ ನೀಡುತ್ತಿದ್ದಾರೆ ಎಂದೂ ಸ್ಥಳೀಯರು ಆರೋಪಿಸುತ್ತಾರೆ.</p>.<p>‘ರಸ್ತೆ ವಿಸ್ತರಣೆಯಾಗುವವರೆಗೂ ಯಾವುದೇ ಹೊಸ ಕಟ್ಟಡ ನಿರ್ಮಿಸುವಂತಿಲ್ಲ, ತೆರವುಗೊಳಿಸುವಂತಿಲ್ಲ. ವಾಣಿಜ್ಯ ಮಳಿಗೆಗಳಿಗೆ ಲೈಸೆನ್ಸ್ ನೀಡುವಂತಿಲ್ಲ ಎಂಬ ನಿಯಮವಿದೆ. ಆದರೆ, ಅಧಿಕಾರಿಗಳು ನಿಯಮ ಮೀರಿ ಪ್ರಭಾವಿಗಳಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟಿದ್ದಾರೆ. ರಸ್ತೆ ನಿಜವಾಗಿ ವಿಸ್ತರಣೆಯಾದರೆ ಮುಂದೆ ಪರಿಹಾರ ವಿತರಣೆ ವೇಳೆ ಇದರಿಂದ ತೊಡಕಾಗಲಿದೆ’ ಎಂದು ವಕೀಲ ಸಿ.ಮಂಜುನಾಥ್ ಹೇಳುತ್ತಾರೆ.</p>.<p>‘ರಸ್ತೆ ವಿಸ್ತರಣೆ ಯೋಜನೆ ಮುನ್ನೆಲೆಗೆ ಬಂದ ನಂತರವೂ ವರ್ತಕರು ನಿಯಮ ಮೀರಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಹಲವು ವಾಣಿಜ್ಯ ಕಟ್ಟಡಗಳು 25 ಮೀಟರ್ ವ್ಯಾಪ್ತಿಯಲ್ಲಿಯೇ ತಲೆ ಎತ್ತಿವೆ. ಪ್ರತಿಷ್ಠಿತ ಕಂಪನಿಗಳ ಹಲವು ಮಳಿಗೆಗಳು ಆರಂಭಗೊಂಡಿವೆ. ಪ್ರಮುಖ ಹೋಟೆಲ್ ಹಾಗೂ ಸ್ವೀಟ್ ಅಂಗಡಿಯೊಂದು ರಸ್ತೆಗೆ ಹೊಂದಿಕೊಂಡಂತೆಯೇ ಇದೆ. ಹೀಗಾಗಿ ರಸ್ತೆ ವಿಸ್ತರಣೆ ಎಂಬುದು ಮಾತಿಗೆ ಹಾಗೂ ಕಾಗದಕ್ಕಷ್ಟೇ ಸೀಮಿತ. ವಾಸ್ತವದಲ್ಲಿ ಅದರ ವಿಸ್ತರಣೆ ಅಸಾಧ್ಯ’ ಎಂದು ಸಾರ್ವಜನಿಕರು ಹೇಳುತ್ತಾರೆ.</p>.<p>‘ನಗರವು ದಿನೇ ದಿನೆ ಬೆಳವಣಿಗೆ ಆಗುತ್ತಿದೆ. ಚಿತ್ರದುರ್ಗ ನಗರಸಭೆಯನ್ನು ಮೇಲ್ದರ್ಜೆಗೇರಿಸಲು ಈಗಾಗಲೇ ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ. ನಗರದ ಮೂಲಕ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿದ್ದು, ಜಿಲ್ಲೆಯಲ್ಲಿ ಸಂಭವಿಸುವ ಅಪಘಾತಗಳ ಸಂಖ್ಯೆಯೂ ಹೆಚ್ಚಿದೆ. ಇತ್ತೀಚೆಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದಷ್ಟು ಬೇಗ ಬಿ.ಡಿ ರಸ್ತೆ ವಿಸ್ತರಣೆ ಮಾಡಲಾಗುವುದು’ ಎಂದು ವರ್ಷದ ಹಿಂದೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಹೇಳಿದ್ದರು. ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.</p>.<p><strong>ಫುಟ್ಪಾತ್ ಆವರಿಸಿದ ಅಂಗಡಿಗಳು</strong></p><p>ಬಿ.ಡಿ.ರಸ್ತೆಯಲ್ಲಿ ಅಂಗಡಿ ಮಾಲೀಕರು ತಮ್ಮ ವ್ಯಾಪಾರ, ವಹಿವಾಟನ್ನು ಫುಟ್ಪಾತ್ಗೂ ವಿಸ್ತರಣೆ ಮಾಡಿಕೊಂಡಿದ್ದು ಪಾದಚಾರಿಗಳ ಓಡಾಟಕ್ಕೆ, ವಾಹನ ನಿಲುಗಡೆಗೆ ತೀವ್ರ ತೊಂದರೆ ಉಂಟಾಗಿದೆ. ದಾರಿ ಹೋಕರು ಅಪಾಯದ ನಡುವೆಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.</p><p>ರಸ್ತೆಯ ಎರಡೂ ಕಡೆ ಅಂಗಡಿ ಮಾಲೀಕರು ಫುಟ್ಪಾತ್ ಒತ್ತುವರಿ ಮಾಡಿಕೊಂಡು ತಮ್ಮ ಚಟುವಟಿಕೆ ನಡೆಸುತ್ತಿದ್ದಾರೆ. ಪ್ಲಾಸ್ಟಿಕ್, ಪಾತ್ರೆ ಅಂಗಡಿಯವರು ತಮ್ಮ ವಸ್ತುಗಳನ್ನು ಫುಟ್ಪಾತ್ಗಳಲ್ಲೇ ಇಟ್ಟು ಮಾರಾಟ ಮಾಡುತ್ತಿದ್ದಾರೆ. ಅಂಗಡಿ ಮುಂದೆ ಪ್ರತ್ಯೇಕವಾಗಿ ಒಂದೆರಡು ಮೆಟ್ಟಿಲುಗಳನ್ನು ನಿರ್ಮಾಣ ಮಾಡಿಕೊಂಡು ಅಲ್ಲಿ ವಸ್ತುಗಳನ್ನು ಇಟ್ಟುಕೊಂಡು ಮಾರುತ್ತಿದ್ದಾರೆ.</p><p>ರಸ್ತೆಯಲ್ಲಿ ಹೆಚ್ಚು ಮೊಬೈಲ್ ಅಂಗಡಿಗಳಿದ್ದು, ಮಾಲೀಕರು ಅಂಗಡಿಗಳ ಜಾಹೀರಾತು ಫಲಕಗಳನ್ನು ಫುಟ್ಪಾತ್ನಲ್ಲೇ ಇಟ್ಟಿದ್ದಾರೆ. ಫುಟ್ವೇರ್ ಅಂಗಡಿ ಮಾಲೀಕರು ಅಂಗಡಿ ಬಾಗಿಲು ತೆರೆಯುತ್ತಿದ್ದಂತೆ ಚಪ್ಪಲಿ ಶೋಕೇಸ್ಗಳನ್ನು ಪಾದಚಾರಿ ಮಾರ್ಗದಲ್ಲೇ ಇಡುತ್ತಾರೆ. ಕಿರಾಣಿ ಅಂಗಡಿ ಮಾಲೀಕರು ಕೂಡ ಫುಟ್ಪಾತ್ನಲ್ಲಿ ಅಕ್ಕಿಚೀಲ, ಉಪ್ಪಿನ ಮೂಟೆಗಳನ್ನಿಟ್ಟು ಮಾರಾಟ ಮಾಡುತ್ತಿದ್ದು, ಜನರ ಓಡಾಟಕ್ಕೆ ಅಡ್ಡಿಯುಂಟಾಗಿದೆ.</p>.<p><strong>ಅನಧಿಕೃತ ಕಟ್ಟಡಗಳ ಹಾವಳಿ</strong></p><p>ಬಿ.ಡಿ.ರಸ್ತೆಯುದ್ದಕ್ಕೂ ಅನಧಿಕೃತ ಕಟ್ಟಡಗಳ ಹಾವಳಿ ವಿಪರೀತವಾಗಿದೆ. ಗಾಂಧಿ ವೃತ್ತದಿಂದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ತೆರಳುವ ಹಳೇ ಮಾರ್ಗದ ಮಸೀದಿ ಅಕ್ಕಪಕ್ಕದಲ್ಲಿ ಅನಧಿಕೃತ ಕಟ್ಟಡಗಳು ತಲೆ ಎತ್ತಿವೆ. ಮಸೀದಿಗೆ ಹೊಂದಿಕೊಂಡಂತೆ ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ನಗರಸಭೆ ಈವರೆಗೂ ಈ ಕಟ್ಟಡಗಳ ಕಾನೂನು ಮಾನ್ಯತೆ ಬಗ್ಗೆ ಪರಿಶೀಲನೆ ನಡೆಸಿಲ್ಲ. ನಗರಸಭೆಯಿಂದ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂಬ ಆರೋಪವೂ ಇದೆ. ರಸ್ತೆಯ ಮೇಲೆಯೇ ಕಟ್ಟಡ ನಿರ್ಮಿಸಿರುವ ಕಾರಣ ವಾಹನ ಓಡಾಟಕ್ಕೆ ತೀವ್ರ ತೊಂದರೆ ಇದೆ.</p><p>ವಕ್ಫ್ ಸಂಘಟನೆಯ ಮುಸ್ಲಿಂ ಹಾಸ್ಟೆಲ್ ಕಟ್ಟಡದ ಮುಂದೆ ರಸ್ತೆಗೆ ಹೊಂದಿಕೊಂಡಂತೆ ಅಂಗಡಿ ನಿರ್ಮಿಸಲಾಗಿದ್ದು, ಹೊಳಲ್ಕೆರೆ ರಸ್ತೆ ಕಿರಿದಾಗಿದೆ. ಬಿ.ಡಿ.ರಸ್ತೆಯುದ್ದಕ್ಕೂ ಮಠಗಳಿಗೆ ಮಂಜೂರು ಮಾಡಲಾದ ಜಾಗದಲ್ಲಿ ಖಾಸಗಿ ಕಟ್ಟಡ ನಿರ್ಮಿಸಿ ಬಾಡಿಗೆಗೆ ನೀಡಲಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗೆ ನೀಡಲಾಗಿದ್ದ ಜಾಗದಲ್ಲಿ ಪ್ರಮುಖ ಬೇಕರಿ ಹಾಗೂ ಹೋಟೆಲ್ ತಲೆ ಎತ್ತಿವೆ.</p><p>‘ಅನಧಿಕೃತ ಕಟ್ಟಡಗಳ ಹಾವಳಿ ತಡೆಯಲು ಬಿ.ಡಿ.ರಸ್ತೆ ವಿಸ್ತರಣೆಯೇ ಪರಿಹಾರವಾಗಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ವಿಚಾರದಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕು. ವರ್ತಕರ ಲಾಬಿಗೆ ಜಿಲ್ಲಾಡಳಿತ ಮಣಿಯಬಾರದು’ ಎಂದು ಹಿರಿಯ ನಾಗರಿಕರಾದ ಎಸ್.ಮಹೇಶ್ವರಪ್ಪ ಹೇಳಿದ್ದಾರೆ.</p>.<div><blockquote>ಬಿ.ಡಿ.ರಸ್ತೆ ವಿಸ್ತರಣೆಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ಸಿಕ್ಕ ನಂತರವೇ ರಸ್ತೆ ವಿಸ್ತರಣೆಗೆ ಕ್ರಮ ವಹಿಸಲಾಗುವುದು </blockquote><span class="attribution">ಎಸ್.ಲಕ್ಷ್ಮಿ, ನಗರಸಭೆ ಪೌರಾಯುಕ್ತೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರದುರ್ಗ: ‘ಬಿ.ಡಿ ರಸ್ತೆ ವಿಸ್ತರಣೆ ಕತೆ ಏನಾಯ್ತು ಸಚಿವರೇ?...</p>.<p>ಕೋಟೆನಗರಿಯ ನಾಗರಿಕರು ಈಗ ಕೇಳುತ್ತಿರುವ ಪ್ರಶ್ನೆ ಇದು. ನಗರದ ಹೃದಯ ಭಾಗದಲ್ಲಿ ಹಾದುಹೋಗಿರುವ ಬಿ.ಡಿ ರಸ್ತೆ ವಿಸ್ತರಣೆ ಮಾತುಗಳು ಈಗ ತಣ್ಣಗಾಗಿವೆ. ‘ರಸ್ತೆ ವಿಸ್ತರಣೆ ಶತಃಸಿದ್ಧ’ ಎಂದು ಘೋಷಣೆ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮೌನಕ್ಕೆ ಶರಣಾಗಿದ್ದಾರೆ. ಇದರಿಂದಾಗಿ ವಾಹನ ಸವಾರರ ಗೋಳು ಹೇಳತೀರದಾಗಿದೆ.</p>.<p>ಚಳ್ಳಕೆರೆ ಗೇಟ್ನಿಂದ ಕನಕ ವೃತ್ತದವರೆಗೆ 2 ಹಂತದಲ್ಲಿ ರಸ್ತೆ ವಿಸ್ತರಣೆ ಮಾಡುವುದಾಗಿ ಜಿಲ್ಲಾಡಳಿತ ಘೋಷಣೆ ಮಾಡಿತ್ತು. ಸರ್ಕಾರದ ಅನುಮತಿಗಾಗಿ ಪ್ರಸ್ತಾವವನ್ನೂ ಸಲ್ಲಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಕೆ.ಸಿ.ವೀರೇಂದ್ರ ಅವರೂ ರಸ್ತೆ ವಿಸ್ತರಣೆ ಅನಿವಾರ್ಯ ಎಂದಿದ್ದರು. ವರ್ಷ ತುಂಬುತ್ತಿದ್ದರೂ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಆಗದಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.</p>.<p>ರಸ್ತೆ ವಿಸ್ತರಣೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ತುಟಿ ಬಿಚ್ಚದ ಕಾರಣ ಜನರಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಜಿಲ್ಲಾಡಳಿತ ನಿಯಮಾನುಸಾರ ರಸ್ತೆ ವಿಸ್ತರಣೆ ಮಾಡಲಿದೆಯೇ? ವರ್ತಕರ ಲಾಬಿಗೆ ಮಣಿದು ಯೋಜನೆಯನ್ನು ಮೂಲೆಗೆ ಎಸೆಯುವುದೇ? ನಾವು ಸಮಸ್ಯೆಗಳ ನಡುವೆಯೇ ಓಡಾಡಬೇಕಾಬಹುದೇ? ಹೀಗೆ ನಾನಾ ಪ್ರಶ್ನೆಗಳು ಜನರ ಮನಸ್ಸಲ್ಲಿ ಮೂಡುತ್ತಿವೆ. ಈ ಕಾರಣದಿಂದಾಗಿ ರಸ್ತೆ ವಿಸ್ತರಣೆ ಕತೆ ಎಲ್ಲಿಗೆ ಬಂತು ಎಂದು ಸಾರ್ವಜನಿಕರು ಈಗ ಸಚಿವರು ಹಾಗೂ ಅಧಿಕಾರಿಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ.</p>.<p>ಬಿ.ಡಿ.ರಸ್ತೆ ವಿಸ್ತರಣೆಯಾಗಬೇಕು ಎಂಬುದು ಹಲವು ವರ್ಷಗಳ ಕನಸು. ದಶಕಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ–48 ಇದೇ ಮಾರ್ಗದಲ್ಲಿ ಹಾದು ಹೋಗಿತ್ತು. ಆಗ ವಾಹನಗಳ ಓಡಾಟ ಕಡಿಮೆ ಇದ್ದ ಕಾರಣ ಜನರಿಗೆ ತೊಂದರೆಯಾಗಿರಲಿಲ್ಲ. ಈಗ ವಾಹನಗಳು ನಗರದ ಹೊರವಲಯದಲ್ಲಿರುವ ಬೈಪಾಸ್ನಲ್ಲಿ ಓಡಾಡುತ್ತಿದ್ದರೂ ನಗರದೊಳಗೆ ವಾಹನ ದಟ್ಟಣೆ ಹೆಚ್ಚಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹೈರಾಣಾಗಿದ್ದಾರೆ. ಹೀಗಾಗಿ ಬಿ.ಡಿ ರಸ್ತೆ ವಿಸ್ತರಣೆ ಅನಿವಾರ್ಯ ಎಂಬ ಕೂಗು ಕೇಳಿ ಬರುತ್ತಿದೆ.</p>.<p>ಪ್ರವಾಸಿ ಮಂದಿರ ವೃತ್ತದಿಂದ ಗಾಂಧಿ ವೃತ್ತದವರೆಗೆ ಮೊದಲ ಹಂತ, ಗಾಂಧಿ ವೃತ್ತದಿಂದ ಕನಕ ವೃತ್ತದವರೆಗೆ ಎರಡನೇ ಹಂತದಲ್ಲಿ ರಸ್ತೆ ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಅಳತೆ ಮಾಡಿ ಗುರುತುಗಳನ್ನೂ ಮಾಡಲಾಗಿತ್ತು. ರಸ್ತೆಯ ಮಧ್ಯ ಭಾಗದಿಂದ 25 ಮೀಟರ್ ವಿಸ್ತರಿಸುವ ಉದ್ದೇಶ ಯೋಜನೆಯದ್ದಾಗಿತ್ತು. ತೆರವಿಗೆ ಈ ವ್ಯಾಪ್ತಿಯಲ್ಲಿರುವ 400ಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳ ಪಟ್ಟಿಯನ್ನೂ ಸಿದ್ಧಗೊಳಿಸಲಾಗಿತ್ತು.</p>.<p>ರಸ್ತೆ ವಿಸ್ತರಣೆ ಮಾಡುವುದು ಶತಃಸಿದ್ಧವಾಗಿದ್ದರೂ ನಗರಸಭೆಯು ಹೊಸ ಕಟ್ಟಡಗಳ ನಿರ್ಮಾಣಕ್ಕೆ ಹೇಗೆ ಅನುಮತಿ ನೀಡುತ್ತಿದೆ ಎಂಬ ಪ್ರಶ್ನೆ ಸ್ಥಳೀಯರಲ್ಲಿದೆ. ಜೊತೆಗೆ ಕಟ್ಟಡಗಳಿಗೆ ಇ–ಸ್ವತ್ತು, ಮಳಿಗೆಗಳಿಗೆ ವ್ಯಾಪಾರ ಪರವಾನಗಿ ಹೇಗೆ ಸಿಗುತ್ತಿವೆ ಎಂಬ ಅನುಮಾನಗಳೂ ಕಾಡುತ್ತಿವೆ. ಹಣದ ಆಮಿಷ, ಪ್ರಭಾವಿಗಳ ಒತ್ತಡಕ್ಕೆ ಮಣಿಯುತ್ತಿರುವ ನಗರಸಭೆ ಅಧಿಕಾರಿಗಳು ನಿಯಮ ಮೀರಿ ವಾಣಿಜ್ಯ ಪರವಾನಗಿ ನೀಡುತ್ತಿದ್ದಾರೆ ಎಂದೂ ಸ್ಥಳೀಯರು ಆರೋಪಿಸುತ್ತಾರೆ.</p>.<p>‘ರಸ್ತೆ ವಿಸ್ತರಣೆಯಾಗುವವರೆಗೂ ಯಾವುದೇ ಹೊಸ ಕಟ್ಟಡ ನಿರ್ಮಿಸುವಂತಿಲ್ಲ, ತೆರವುಗೊಳಿಸುವಂತಿಲ್ಲ. ವಾಣಿಜ್ಯ ಮಳಿಗೆಗಳಿಗೆ ಲೈಸೆನ್ಸ್ ನೀಡುವಂತಿಲ್ಲ ಎಂಬ ನಿಯಮವಿದೆ. ಆದರೆ, ಅಧಿಕಾರಿಗಳು ನಿಯಮ ಮೀರಿ ಪ್ರಭಾವಿಗಳಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟಿದ್ದಾರೆ. ರಸ್ತೆ ನಿಜವಾಗಿ ವಿಸ್ತರಣೆಯಾದರೆ ಮುಂದೆ ಪರಿಹಾರ ವಿತರಣೆ ವೇಳೆ ಇದರಿಂದ ತೊಡಕಾಗಲಿದೆ’ ಎಂದು ವಕೀಲ ಸಿ.ಮಂಜುನಾಥ್ ಹೇಳುತ್ತಾರೆ.</p>.<p>‘ರಸ್ತೆ ವಿಸ್ತರಣೆ ಯೋಜನೆ ಮುನ್ನೆಲೆಗೆ ಬಂದ ನಂತರವೂ ವರ್ತಕರು ನಿಯಮ ಮೀರಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಹಲವು ವಾಣಿಜ್ಯ ಕಟ್ಟಡಗಳು 25 ಮೀಟರ್ ವ್ಯಾಪ್ತಿಯಲ್ಲಿಯೇ ತಲೆ ಎತ್ತಿವೆ. ಪ್ರತಿಷ್ಠಿತ ಕಂಪನಿಗಳ ಹಲವು ಮಳಿಗೆಗಳು ಆರಂಭಗೊಂಡಿವೆ. ಪ್ರಮುಖ ಹೋಟೆಲ್ ಹಾಗೂ ಸ್ವೀಟ್ ಅಂಗಡಿಯೊಂದು ರಸ್ತೆಗೆ ಹೊಂದಿಕೊಂಡಂತೆಯೇ ಇದೆ. ಹೀಗಾಗಿ ರಸ್ತೆ ವಿಸ್ತರಣೆ ಎಂಬುದು ಮಾತಿಗೆ ಹಾಗೂ ಕಾಗದಕ್ಕಷ್ಟೇ ಸೀಮಿತ. ವಾಸ್ತವದಲ್ಲಿ ಅದರ ವಿಸ್ತರಣೆ ಅಸಾಧ್ಯ’ ಎಂದು ಸಾರ್ವಜನಿಕರು ಹೇಳುತ್ತಾರೆ.</p>.<p>‘ನಗರವು ದಿನೇ ದಿನೆ ಬೆಳವಣಿಗೆ ಆಗುತ್ತಿದೆ. ಚಿತ್ರದುರ್ಗ ನಗರಸಭೆಯನ್ನು ಮೇಲ್ದರ್ಜೆಗೇರಿಸಲು ಈಗಾಗಲೇ ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ. ನಗರದ ಮೂಲಕ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿದ್ದು, ಜಿಲ್ಲೆಯಲ್ಲಿ ಸಂಭವಿಸುವ ಅಪಘಾತಗಳ ಸಂಖ್ಯೆಯೂ ಹೆಚ್ಚಿದೆ. ಇತ್ತೀಚೆಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದಷ್ಟು ಬೇಗ ಬಿ.ಡಿ ರಸ್ತೆ ವಿಸ್ತರಣೆ ಮಾಡಲಾಗುವುದು’ ಎಂದು ವರ್ಷದ ಹಿಂದೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಹೇಳಿದ್ದರು. ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.</p>.<p><strong>ಫುಟ್ಪಾತ್ ಆವರಿಸಿದ ಅಂಗಡಿಗಳು</strong></p><p>ಬಿ.ಡಿ.ರಸ್ತೆಯಲ್ಲಿ ಅಂಗಡಿ ಮಾಲೀಕರು ತಮ್ಮ ವ್ಯಾಪಾರ, ವಹಿವಾಟನ್ನು ಫುಟ್ಪಾತ್ಗೂ ವಿಸ್ತರಣೆ ಮಾಡಿಕೊಂಡಿದ್ದು ಪಾದಚಾರಿಗಳ ಓಡಾಟಕ್ಕೆ, ವಾಹನ ನಿಲುಗಡೆಗೆ ತೀವ್ರ ತೊಂದರೆ ಉಂಟಾಗಿದೆ. ದಾರಿ ಹೋಕರು ಅಪಾಯದ ನಡುವೆಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.</p><p>ರಸ್ತೆಯ ಎರಡೂ ಕಡೆ ಅಂಗಡಿ ಮಾಲೀಕರು ಫುಟ್ಪಾತ್ ಒತ್ತುವರಿ ಮಾಡಿಕೊಂಡು ತಮ್ಮ ಚಟುವಟಿಕೆ ನಡೆಸುತ್ತಿದ್ದಾರೆ. ಪ್ಲಾಸ್ಟಿಕ್, ಪಾತ್ರೆ ಅಂಗಡಿಯವರು ತಮ್ಮ ವಸ್ತುಗಳನ್ನು ಫುಟ್ಪಾತ್ಗಳಲ್ಲೇ ಇಟ್ಟು ಮಾರಾಟ ಮಾಡುತ್ತಿದ್ದಾರೆ. ಅಂಗಡಿ ಮುಂದೆ ಪ್ರತ್ಯೇಕವಾಗಿ ಒಂದೆರಡು ಮೆಟ್ಟಿಲುಗಳನ್ನು ನಿರ್ಮಾಣ ಮಾಡಿಕೊಂಡು ಅಲ್ಲಿ ವಸ್ತುಗಳನ್ನು ಇಟ್ಟುಕೊಂಡು ಮಾರುತ್ತಿದ್ದಾರೆ.</p><p>ರಸ್ತೆಯಲ್ಲಿ ಹೆಚ್ಚು ಮೊಬೈಲ್ ಅಂಗಡಿಗಳಿದ್ದು, ಮಾಲೀಕರು ಅಂಗಡಿಗಳ ಜಾಹೀರಾತು ಫಲಕಗಳನ್ನು ಫುಟ್ಪಾತ್ನಲ್ಲೇ ಇಟ್ಟಿದ್ದಾರೆ. ಫುಟ್ವೇರ್ ಅಂಗಡಿ ಮಾಲೀಕರು ಅಂಗಡಿ ಬಾಗಿಲು ತೆರೆಯುತ್ತಿದ್ದಂತೆ ಚಪ್ಪಲಿ ಶೋಕೇಸ್ಗಳನ್ನು ಪಾದಚಾರಿ ಮಾರ್ಗದಲ್ಲೇ ಇಡುತ್ತಾರೆ. ಕಿರಾಣಿ ಅಂಗಡಿ ಮಾಲೀಕರು ಕೂಡ ಫುಟ್ಪಾತ್ನಲ್ಲಿ ಅಕ್ಕಿಚೀಲ, ಉಪ್ಪಿನ ಮೂಟೆಗಳನ್ನಿಟ್ಟು ಮಾರಾಟ ಮಾಡುತ್ತಿದ್ದು, ಜನರ ಓಡಾಟಕ್ಕೆ ಅಡ್ಡಿಯುಂಟಾಗಿದೆ.</p>.<p><strong>ಅನಧಿಕೃತ ಕಟ್ಟಡಗಳ ಹಾವಳಿ</strong></p><p>ಬಿ.ಡಿ.ರಸ್ತೆಯುದ್ದಕ್ಕೂ ಅನಧಿಕೃತ ಕಟ್ಟಡಗಳ ಹಾವಳಿ ವಿಪರೀತವಾಗಿದೆ. ಗಾಂಧಿ ವೃತ್ತದಿಂದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ತೆರಳುವ ಹಳೇ ಮಾರ್ಗದ ಮಸೀದಿ ಅಕ್ಕಪಕ್ಕದಲ್ಲಿ ಅನಧಿಕೃತ ಕಟ್ಟಡಗಳು ತಲೆ ಎತ್ತಿವೆ. ಮಸೀದಿಗೆ ಹೊಂದಿಕೊಂಡಂತೆ ವಾಣಿಜ್ಯ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ನಗರಸಭೆ ಈವರೆಗೂ ಈ ಕಟ್ಟಡಗಳ ಕಾನೂನು ಮಾನ್ಯತೆ ಬಗ್ಗೆ ಪರಿಶೀಲನೆ ನಡೆಸಿಲ್ಲ. ನಗರಸಭೆಯಿಂದ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂಬ ಆರೋಪವೂ ಇದೆ. ರಸ್ತೆಯ ಮೇಲೆಯೇ ಕಟ್ಟಡ ನಿರ್ಮಿಸಿರುವ ಕಾರಣ ವಾಹನ ಓಡಾಟಕ್ಕೆ ತೀವ್ರ ತೊಂದರೆ ಇದೆ.</p><p>ವಕ್ಫ್ ಸಂಘಟನೆಯ ಮುಸ್ಲಿಂ ಹಾಸ್ಟೆಲ್ ಕಟ್ಟಡದ ಮುಂದೆ ರಸ್ತೆಗೆ ಹೊಂದಿಕೊಂಡಂತೆ ಅಂಗಡಿ ನಿರ್ಮಿಸಲಾಗಿದ್ದು, ಹೊಳಲ್ಕೆರೆ ರಸ್ತೆ ಕಿರಿದಾಗಿದೆ. ಬಿ.ಡಿ.ರಸ್ತೆಯುದ್ದಕ್ಕೂ ಮಠಗಳಿಗೆ ಮಂಜೂರು ಮಾಡಲಾದ ಜಾಗದಲ್ಲಿ ಖಾಸಗಿ ಕಟ್ಟಡ ನಿರ್ಮಿಸಿ ಬಾಡಿಗೆಗೆ ನೀಡಲಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗೆ ನೀಡಲಾಗಿದ್ದ ಜಾಗದಲ್ಲಿ ಪ್ರಮುಖ ಬೇಕರಿ ಹಾಗೂ ಹೋಟೆಲ್ ತಲೆ ಎತ್ತಿವೆ.</p><p>‘ಅನಧಿಕೃತ ಕಟ್ಟಡಗಳ ಹಾವಳಿ ತಡೆಯಲು ಬಿ.ಡಿ.ರಸ್ತೆ ವಿಸ್ತರಣೆಯೇ ಪರಿಹಾರವಾಗಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ವಿಚಾರದಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕು. ವರ್ತಕರ ಲಾಬಿಗೆ ಜಿಲ್ಲಾಡಳಿತ ಮಣಿಯಬಾರದು’ ಎಂದು ಹಿರಿಯ ನಾಗರಿಕರಾದ ಎಸ್.ಮಹೇಶ್ವರಪ್ಪ ಹೇಳಿದ್ದಾರೆ.</p>.<div><blockquote>ಬಿ.ಡಿ.ರಸ್ತೆ ವಿಸ್ತರಣೆಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ಸಿಕ್ಕ ನಂತರವೇ ರಸ್ತೆ ವಿಸ್ತರಣೆಗೆ ಕ್ರಮ ವಹಿಸಲಾಗುವುದು </blockquote><span class="attribution">ಎಸ್.ಲಕ್ಷ್ಮಿ, ನಗರಸಭೆ ಪೌರಾಯುಕ್ತೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>