<p><strong>ಚಿತ್ರದುರ್ಗ:</strong> ‘ಬಿಜೆಪಿ ಕೆಲವೇ ಪ್ರದೇಶಗಳಿಗೆ ಸೀಮಿತ ಎಂಬ ಆರೋಪಗಳಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ತನ್ನ ಅಮೋಘ ನಾಯಕತ್ವದ ಮೂಲಕ ಬಿಜೆಪಿ ಇಡೀ ಭಾರತಕ್ಕೆ ಸೇರಿದ ಪಕ್ಷ ಎಂದು ಸಾಬೀತು ಮಾಡಿ ತೋರಿಸಿದರು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.</p>.<p>ಮೋದಿಯವರು ಕಳುಹಿಸಿದ ಸಂದೇಶದ ಸಾರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಓದಿದರು.</p>.<p><strong>ಮೋದಿ ಸಂದೇಶ:</strong> ‘ಯಡಿಯೂರಪ್ಪ ಅವರು ಸದಾ ವಿನಮ್ರತೆ, ಸಹಾನುಭೂತಿ ಮತ್ತು ಕಠಿಣ ಪರಿಶ್ರಮದ ವ್ಯಕ್ತಿ. ಅವರ ಸಾಮಾಜಿಕ ಸೇವೆಯ 50 ವರ್ಷಗಳ ಪಯಣವು ಬದ್ಧತೆ, ಸಂಘರ್ಷ, ತ್ಯಾಗ ಮತ್ತು ಜನರಿಗಾಗಿ ಸಮರ್ಪಣೆಯ ಕಥೆ.</p>.<p>‘ಯಡಿಯೂರಪ್ಪ ಅವರನ್ನು ಸಂಘರ್ಷ ಮತ್ತು ಯಶಸ್ಸಿನ ಎರಡೂ ಸಂದರ್ಭದಲ್ಲಿ ನೋಡಿದ್ದೇನೆ. ಪ್ರತಿ ಸಂದರ್ಭದಲ್ಲಿಯೂ ಅವರು ಕರ್ನಾಟಕದ ಜನರಿಗೆ ಮತ್ತು ಪಕ್ಷದ ಸಿದ್ಧಾಂತಕ್ಕೆ ಅಚಲ ಬದ್ಧತೆಯನ್ನು ಹೊಂದಿದ್ದರು. ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದ ಪ್ರವರ್ತಕರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-51-62440445</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ‘ಬಿಜೆಪಿ ಕೆಲವೇ ಪ್ರದೇಶಗಳಿಗೆ ಸೀಮಿತ ಎಂಬ ಆರೋಪಗಳಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ತನ್ನ ಅಮೋಘ ನಾಯಕತ್ವದ ಮೂಲಕ ಬಿಜೆಪಿ ಇಡೀ ಭಾರತಕ್ಕೆ ಸೇರಿದ ಪಕ್ಷ ಎಂದು ಸಾಬೀತು ಮಾಡಿ ತೋರಿಸಿದರು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.</p>.<p>ಮೋದಿಯವರು ಕಳುಹಿಸಿದ ಸಂದೇಶದ ಸಾರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಓದಿದರು.</p>.<p><strong>ಮೋದಿ ಸಂದೇಶ:</strong> ‘ಯಡಿಯೂರಪ್ಪ ಅವರು ಸದಾ ವಿನಮ್ರತೆ, ಸಹಾನುಭೂತಿ ಮತ್ತು ಕಠಿಣ ಪರಿಶ್ರಮದ ವ್ಯಕ್ತಿ. ಅವರ ಸಾಮಾಜಿಕ ಸೇವೆಯ 50 ವರ್ಷಗಳ ಪಯಣವು ಬದ್ಧತೆ, ಸಂಘರ್ಷ, ತ್ಯಾಗ ಮತ್ತು ಜನರಿಗಾಗಿ ಸಮರ್ಪಣೆಯ ಕಥೆ.</p>.<p>‘ಯಡಿಯೂರಪ್ಪ ಅವರನ್ನು ಸಂಘರ್ಷ ಮತ್ತು ಯಶಸ್ಸಿನ ಎರಡೂ ಸಂದರ್ಭದಲ್ಲಿ ನೋಡಿದ್ದೇನೆ. ಪ್ರತಿ ಸಂದರ್ಭದಲ್ಲಿಯೂ ಅವರು ಕರ್ನಾಟಕದ ಜನರಿಗೆ ಮತ್ತು ಪಕ್ಷದ ಸಿದ್ಧಾಂತಕ್ಕೆ ಅಚಲ ಬದ್ಧತೆಯನ್ನು ಹೊಂದಿದ್ದರು. ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದ ಪ್ರವರ್ತಕರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-51-62440445</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>