<p>ಹೊಸದುರ್ಗ: ‘ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ತನ್ನ ಚಿಕ್ಕಪ್ಪ ಜಯಣ್ಣ ಅವರ ಆಶ್ರಯದಲ್ಲಿ ಬೆಳೆದ ಡಿ. ಸುಧಾಕರ್ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಮುತ್ಸದ್ಧಿ ರಾಜಕಾರಣಿ’ ಎಂದು ಮಾಜಿ ಶಾಸಕ ಇಲ್ಕಲ್ ವಿಜಯ್ಕುಮಾರ್ ಅವರು ಸಚಿವ ಡಿ.ಸುಧಾಕರ್ ಅವರನ್ನು ನೆನೆದು ಭಾವುಕರಾದರು.</p>.<p>ತಾಲ್ಲೂಕು ಜೈನ ಸಮುದಾಯದ ವತಿಯಿಂದ ಪಟ್ಟಣದ ಜಿನ ಮಂದಿರದಲ್ಲಿ ಮಂಗಳವಾರ ಸಚಿವ ಡಿ. ಸುಧಾಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.</p>.<p>ಜಾತಿಭೇದ ತೊರೆದು, ಎಲ್ಲರೊಳಗೆ ಒಂದಾಗಿ ಬಾಳಿದ್ದರು. ಪ್ರತಿಯೊಬ್ಬರೂ ಗೌರವ ಕೊಡುವಂತಹ ಹಸನ್ಮುಖಿ. ಬರಗಾಲದ ಸಮಯದಲ್ಲಿ ಜಿಲ್ಲೆಯ ಎಲ್ಲಾ ಗೋಶಾಲೆಗಳಿಗೆ ಮೇವು ಒದಗಿಸಿದ್ದರು. ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು ಎಂದು ಸ್ಮರಿಸಿದರು.</p>.<p>ಸಚಿವ ಸುಧಾಕರ್ ಕೊಡುಗೈ ದಾನಿಯಾಗಿದ್ದಾರೆ. ಮನೆ ಬಾಗಿಲಿಗೆ ಬಂದವರನ್ನು ಎಂದಿಗೂ ಬರಿಗೈಯಲ್ಲಿ ಕಳಿಸುತ್ತಿರಲಿಲ್ಲ. ಯಾವುದೇ ಶುಭ ಸಮಾರಂಭ ಅಥವಾ ಧಾರ್ಮಿಕ ಕಾರ್ಯಕ್ರಮಗಳಿದ್ದರೇ ಅದರಲ್ಲಿ ಸುಧಾಕರ್ ಅವರ ಸಹಾಯವೂ ಇರುತ್ತಿತ್ತು ಎಂದು ಜೈನ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಆದಿರಾಜಯ್ಯ ತಿಳಿಸಿದರು.</p>.<p>ಜೈನ ಸಮುದಾಯದ ಉಪಾಧ್ಯಕ್ಷ ಬ್ರಹ್ಮಪಾಲ್, ಜಾನಕಲ್ ಜೈನ ಬಸದಿ ಅಧ್ಯಕ್ಷ ಧರಣೇಂದ್ರ, ಮಹಿಳಾ ಸಮಾಜದ ಅಧ್ಯಕ್ಷೆ ಚಂದ್ರಮ್ಮ, ಮುಖಂಡರಾದ ಸುಮತಿ ಕುಮಾರ್, ಇ.ವಿ. ಅಜ್ಜಪ್ಪ, ಬಿ. ನವೀನ್ ಕುಮಾರ್ ಸೇರಿದಂತೆ ಶ್ರಾವಕ ಹಾಗೂ ಶ್ರಾವಕಿಯರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-44-1025924363</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸದುರ್ಗ: ‘ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ತನ್ನ ಚಿಕ್ಕಪ್ಪ ಜಯಣ್ಣ ಅವರ ಆಶ್ರಯದಲ್ಲಿ ಬೆಳೆದ ಡಿ. ಸುಧಾಕರ್ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಮುತ್ಸದ್ಧಿ ರಾಜಕಾರಣಿ’ ಎಂದು ಮಾಜಿ ಶಾಸಕ ಇಲ್ಕಲ್ ವಿಜಯ್ಕುಮಾರ್ ಅವರು ಸಚಿವ ಡಿ.ಸುಧಾಕರ್ ಅವರನ್ನು ನೆನೆದು ಭಾವುಕರಾದರು.</p>.<p>ತಾಲ್ಲೂಕು ಜೈನ ಸಮುದಾಯದ ವತಿಯಿಂದ ಪಟ್ಟಣದ ಜಿನ ಮಂದಿರದಲ್ಲಿ ಮಂಗಳವಾರ ಸಚಿವ ಡಿ. ಸುಧಾಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.</p>.<p>ಜಾತಿಭೇದ ತೊರೆದು, ಎಲ್ಲರೊಳಗೆ ಒಂದಾಗಿ ಬಾಳಿದ್ದರು. ಪ್ರತಿಯೊಬ್ಬರೂ ಗೌರವ ಕೊಡುವಂತಹ ಹಸನ್ಮುಖಿ. ಬರಗಾಲದ ಸಮಯದಲ್ಲಿ ಜಿಲ್ಲೆಯ ಎಲ್ಲಾ ಗೋಶಾಲೆಗಳಿಗೆ ಮೇವು ಒದಗಿಸಿದ್ದರು. ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು ಎಂದು ಸ್ಮರಿಸಿದರು.</p>.<p>ಸಚಿವ ಸುಧಾಕರ್ ಕೊಡುಗೈ ದಾನಿಯಾಗಿದ್ದಾರೆ. ಮನೆ ಬಾಗಿಲಿಗೆ ಬಂದವರನ್ನು ಎಂದಿಗೂ ಬರಿಗೈಯಲ್ಲಿ ಕಳಿಸುತ್ತಿರಲಿಲ್ಲ. ಯಾವುದೇ ಶುಭ ಸಮಾರಂಭ ಅಥವಾ ಧಾರ್ಮಿಕ ಕಾರ್ಯಕ್ರಮಗಳಿದ್ದರೇ ಅದರಲ್ಲಿ ಸುಧಾಕರ್ ಅವರ ಸಹಾಯವೂ ಇರುತ್ತಿತ್ತು ಎಂದು ಜೈನ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಆದಿರಾಜಯ್ಯ ತಿಳಿಸಿದರು.</p>.<p>ಜೈನ ಸಮುದಾಯದ ಉಪಾಧ್ಯಕ್ಷ ಬ್ರಹ್ಮಪಾಲ್, ಜಾನಕಲ್ ಜೈನ ಬಸದಿ ಅಧ್ಯಕ್ಷ ಧರಣೇಂದ್ರ, ಮಹಿಳಾ ಸಮಾಜದ ಅಧ್ಯಕ್ಷೆ ಚಂದ್ರಮ್ಮ, ಮುಖಂಡರಾದ ಸುಮತಿ ಕುಮಾರ್, ಇ.ವಿ. ಅಜ್ಜಪ್ಪ, ಬಿ. ನವೀನ್ ಕುಮಾರ್ ಸೇರಿದಂತೆ ಶ್ರಾವಕ ಹಾಗೂ ಶ್ರಾವಕಿಯರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-44-1025924363</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>