<p><strong>ಚಿತ್ರದುರ್ಗ:</strong> ರಾಜ್ಯ, ಹೊರರಾಜ್ಯಗಳ ಸದ್ಭಕ್ತರ ಆರಾಧ್ಯ ದೇವಿಯಾಗಿರುವ ತಾಲ್ಲೂಕಿನ ಹಿರೇಗುಂಟನೂರು ಗ್ರಾಮದ ಶ್ರೀ ದ್ಯಾಮಲಾಂಬಾ ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.</p>.<p>ಏ. 5ರಿಂದ ಏ.11ರ ವರೆಗೆ ಜಾತ್ರೋತ್ಸವ ನಡೆಯಲಿದ್ದು ದ್ಯಾಮಲಾಂಬಾ ದೇವಸ್ಥಾನ ಅಭಿವೃದ್ಧಿ ಸಮಿತಿ ಟ್ರಸ್ಟ್ ಪದಾಧಿಕಾರಿಗಳು ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಜಾತ್ರೋತ್ಸವದ ನಂತರ ದ್ಯಾಮಲಾಂಬಾ ಅಮ್ಮನವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೂ ಟ್ರಸ್ಟ್ ಸಿದ್ಧತೆ ಮಾಡಿಕೊಂಡಿದ್ದು, ಈ ಬಾರಿಯ ಜಾತ್ರೋತ್ಸವ ಪ್ರಾಮುಖ್ಯತೆ ಪಡೆದುಕೊಂಡಿದೆ.</p>.<p>‘ಅರೆಮಲೆನಾಡು ವಾತಾವಣರದ ಹಿರೇಗುಂಟನೂರು ಗ್ರಾಮದಲ್ಲಿ ನೆಲೆ ನಿಂತಿರುವ ದ್ಯಾಮಲಾಂಬಾ ಅಮ್ಮನವರು ಮನದ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ’ ಎಂಬುದು ಭಕ್ತರ ಬಲವಾದ ನಂಬಿಕೆಯಾಗಿದೆ. ಮಂಗಳವಾರ, ಶುಕ್ರವಾರ ವಿಶೇಷ ಪೂಜೆ ಪುನಸ್ಕಾರ, ಅನ್ನಸಂತರ್ಪಣೆ ನಿರಂತರವಾಗಿ ನಡೆಯುತ್ತಿವೆ. ಹಬ್ಬ– ಹರಿದಿನಗಳಲ್ಲಿ ದೇವಾಲಯಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ.</p>.<p>ದಿನದಿಂದ ದಿನಕ್ಕೆ ಭಕ್ತಗಣ ಹೆಚ್ಚುತ್ತಲೇ ಇರುವ ಕಾರಣ ಈಗಿರುವ ದೇವಾಲಯ ಚಿಕ್ಕದಾಗಿದ್ದು ಧಾರ್ಮಿಕ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತಿದೆ. ಸದ್ಭಕ್ತರ ಅಪೇಕ್ಷೆಯಂತೆ ಅಭಿವೃದ್ಧಿ ಸಮಿತಿ ಟ್ರಸ್ಟ್ ದೇವಾಲಯ ಜೀರ್ಣೋದ್ಧಾರಕ್ಕೆ ನಿರ್ಣಯಿಸಿದೆ. ದೇವಾಲಯವು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಕಾರಣ ದೇವಾಲಯ ಜೀರ್ಣೋದ್ಧಾರಕ್ಕೆ ಇಲಾಖೆಯ ಆಯುಕ್ತರ ಅನುಮತಿ ಬೇಕಿದೆ. ಈಗಾಗಲೇ ಜಿಲ್ಲಾಧಿಕಾರಿಗಳು, ಇಲಾಖೆಯ ಅಧಿಕಾರಿಗಳ ಜೊತೆ ಹಲವು ಸುತ್ತಿನ ಸಭೆಗಳು ನಡೆದಿದ್ದು ಅನುಮತಿ ಪಡೆಯುವ ಪ್ರಯತ್ನ ಪ್ರಗತಿಯಲ್ಲಿದೆ. ಅನುಮತಿ ಸಿಕ್ಕ ಕೂಡಲೇ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.</p>.<p>ದೇವಾಲಯದ ನೀಲನಕ್ಷೆ ಸಿದ್ಧಗೊಂಡಿದ್ದು ಭಕ್ತರ ಸಹಾಯದಿಂದಲೇ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಂದರವಾದ ರಾಜಗೋಪುರ, ಅಮ್ಮನವರ ಸನ್ನಿದಿಯ ಸುತ್ತಲೂ ಪವಳಿ ನಿರ್ಮಾಣದ ಯೋಜನೆ ಸಿದ್ಧವಾಗಿದೆ. ಹಿರಿಯರು ಕಟ್ಟಿರುವ ಐತಿಹಾಸಿಕ ದೇಗುಲದ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಗರ್ಭಗುಡಿ ಇರುವಲ್ಲಿಯೇ ಹೊಸ ರೂಪ ಕೊಡಲು ನಿರ್ಣಯಿಸಲಾಗಿದೆ.</p>.<p>ಹಿರೇಗುಂಟನೂರು ಗ್ರಾಮದಲ್ಲಿ ದ್ಯಾಮಲಾಂಬಾ ಅಮ್ಮನವರು ನೆಲೆನಿಲ್ಲಲು ಐತಿಹಾಸಿಕ ಹಿನ್ನೆಲೆ ಇದೆ. 15ನೇ ಶತಮಾನದಲ್ಲಿ ದಿಲ್ಲಿಯಿಂದ ದಕ್ಷಿಣ ಭಾಗಕ್ಕೆ ಸಾದು ಒಕ್ಕಲು ಮನೆತನದವರು ತಮ್ಮ ಕುಟುಂಬ, ದೇವರುಗಳೊಂದಿಗೆ ವಲಸೆ ಬಂದರು. ದಕ್ಷಿಣದ ವಿಜಯನಗರದ ಆನೆಗುಂದಿ ಪ್ರದೇಶದಲ್ಲಿ ಬೀಡುಬಿಟ್ಟಾಗ ಶ್ರೀಕೃಷ್ಣದೇವರಾಯನು ಅವರಿಗೆ ದಕ್ಷಿಣ ಭಾಗದಲ್ಲಿ ಗ್ರಾಮ ನಿರ್ಮಿಸಿಕೊಳ್ಳಲು ಅನುವು ಮಾಡಿಕೊಟ್ಟರು, ಶಾನುಭೋಗ ಕಾಯಕವನ್ನೂ ಕೊಟ್ಟರು. ಅವರ ಕನಸಿನಲ್ಲಿ ಬಂದ ಅಮ್ಮನವರು ದೇವಾಲಯ ಕಟ್ಟುಕೊಡುವಂತೆ ಕೇಳಿಕೊಂಡರು. ನಂತರ ದೇವಿಗೆ ದ್ಯಾಮವ್ವ ಎಂದು ಹೆಸರಿಟ್ಟು ಪೂಜೆ ಆರಂಭಿಸಿದರು. ಅಂದಿನಿಂದಲೂ ಅಮ್ಮ ದ್ಯಾಮಲಾಂಬಾ ಹೆಸರಿನಿಂದ ಭಕ್ತರನ್ನು ಹರಸುತ್ತಾ ಬರುತ್ತಿದ್ದಾಳೆ, ಭಕ್ತರ ಮನದ ಇಚ್ಛೆಗಳನ್ನು ಪೂರೈಸುತ್ತಿದ್ದಾಳೆ ಎಂಬ ನಂಬಿಕೆ ಮೂಡಿದೆ.</p>.<p>ಜಾನಪದ ಸಾಹಿತ್ಯದಲ್ಲಿ ದ್ಯಾಮಲಾಂಬಾ ದೇವಿಯ ಉಲ್ಲೇಖ ಇರುವುದನ್ನೂ ಕಾಣಬಹುದಾಗಿದೆ. ಕರ್ನಾಟಕದ, ತಮಿಳುನಾಡು, ಆಂಧ್ರಪ್ರದೇಶದ ಭಕ್ತರೂ ಈ ದೇವಿ ಆರಾಧಕರಾಗಿದ್ದಾರೆ. ‘ಬಿಸಿಲು ಬೀಳದ ಬಾವಿ, ಹೆಸರಿಲ್ಲದ ಮರ’ ಎಂಬುದು ದೇವಾಲಯದ ವಿಶೇಷತೆಯಾಗಿದೆ. ಬಿಸಿಲು ಬೀಳದ ಬಾವಿ ದೇವಾಲಯದ ಆವರಣದಲ್ಲಿ ಈಗಲೂ ಇದೆ. ಹೆಸರೇ ಇಲ್ಲದ ಮರ ಹಲವು ವರ್ಷಗಳವರೆಗೂ ದೇಗುಲದ ಆವರಣದಲ್ಲಿತ್ತು. 1998ರ ನಂತರ ಮರ ಒಣಗಿತು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ. ದೇವಾಲಯದ ಪ್ರವೇಶದ್ವಾರದ ಎಡಭಾಗದಲ್ಲಿ ವೀರಭದ್ರೇಶ್ವರ ಸ್ವಾಮಿ ಗುಡಿಯಿದ್ದು, ಇಲ್ಲಿ ಪ್ರತಿ ನವರಾತ್ರಿಯಲ್ಲಿ ಕೆಂಡಾರ್ಚನೆ ವೈಭವಯುತವಾಗಿ ನಡೆಯುತ್ತದೆ.</p>.<p>ದ್ಯಾಮಲಾಂಬಾ ದೇವಸ್ಥಾನ ಅಭಿವೃದ್ಧಿ ಸಮಿತಿ ಟ್ರಸ್ಟ್ ವತಿಯಿಂದ ದೇವಾಲಯದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿವೆ. ಟ್ರಸ್ಟ್ನ ಈಗಿನ ಅಧ್ಯಕ್ಷರು, ಲೆಕ್ಕ ಪರಿಶೋಧಕರು, ಪ್ರಗತಿಪರ ರೈತರೂ ಆದ ಈ.ಚಂದ್ರಣ್ಣ ಅವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಅಮ್ಮನವರ ಸನ್ನಿದಿಯಲ್ಲಿ ದಾಸೋಹ ಭವನವನ್ನು ನಿರ್ಮಿಸಲಾಗಿದೆ.</p>.<p>ಭಕ್ತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿರುವ ಕಾರಣ ದೇವಾಲಯದ ಆವರಣದಲ್ಲಿ ಭಕ್ತರಿಗಾಗಿ ಯಾತ್ರಿ ನಿವಾಸವನ್ನೂ ನಿರ್ಮಿಸಲಾಗಿದೆ. ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರಿಗೂ ದ್ಯಾಮಲಾಂಬಾ ಅಮ್ಮ ಮನೆ ದೇವರಾಗಿದ್ದು ಅವರೂ ದೇವಾಲಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮುಂದೆ ಜೀರ್ಣೋದ್ಧಾರ ಕಾಮಗಾರಿಗೂ ಅವರ ಸಹಕಾರ ಇರಲಿದೆ ಎಂದು ಸಮಿತಿಯವರು ಹೇಳಿದರು.</p>.<p>‘ದೇಗುಲ ಜೀರ್ಣೋದ್ಧಾರಕ್ಕೆ ಈಗಾಗಲೇ ದ್ಯಾಮಲಾಂಬಾ ಅಮ್ಮನವರಿಂದ ಅಪ್ಪಣೆ ಸಿಕ್ಕಿದೆ. ಅಮ್ಮನ ಅಪ್ಪಣೆ ಇಲ್ಲದೇ ನಾವು ಒಂದು ಹೆಜ್ಜೆಯನ್ನೂ ಇಡುವುದಿಲ್ಲ. ಅಮ್ಮನ ಅಪ್ಪಣೆ, ಭಕ್ತರ ಅಭಿಪ್ರಾಯದೊಂದಿಗೆ ಜೀರ್ಣೋದ್ಧಾರ ಕೆಲಸ ಆರಂಭಗೊಳ್ಳಲಿದೆ. ಮುಜರಾಯಿ ಇಲಾಖೆ ಅನುಮತಿ ಸಿಕ್ಕ ಕೂಡಲೇ ಮುಂದಿನ ಕೆಲಸ ಆರಂಭಿಸುತ್ತೇವೆ’ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದರು.</p>.<div><blockquote>ದ್ಯಾಮಲಾಂಬಾ ಅಮ್ಮನ ಭಕ್ತರ ಅಪೇಕ್ಷೆಯಂತೆ ದೇವಾಲಯದ ಜೀರ್ಣೋದ್ದಾರ ನಡೆಸಲಿದ್ದೇವೆ. ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಸಕಲ ಸೌಲಭ್ಯಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. </blockquote><span class="attribution">ಈ.ಚಂದ್ರಣ್ಣ, ಟ್ರಸ್ಟ್ ಅಧ್ಯಕ್ಷ</span></div>.<p><strong>ಏ.9ಕ್ಕೆ ದ್ಯಾಮಲಾಂಬಾ ರಥೋತ್ಸವ</strong></p><p>ಏಪ್ರಿಲ್ 5ರಂದು ಕಲ್ಯಾಣೋತ್ಸವದ ಮೂಲಕ ದ್ಯಾಮಲಾಂಬಾ ಜಾತ್ರೋತ್ಸವ ಆರಂಭಗೊಳ್ಳಲಿದೆ. ಏ. 6ರಂದು ನವಿಲು ಉತ್ಸವ, ಎ.7ರಂದು ಅಶೋತ್ಸವ, ಎ. 8ರಂದು ಮೀಸಲು ಪೂಜೆ, ಏ.9ರಂದು ಭವ್ಯ ರಥೋತ್ಸವ ನಡೆಯಲಿದೆ. ಏ.10ರಂದು ಸಂಜೆ 5 ಗಂಟೆಗೆ ಸಿಡಿ ಪೂಜಾ ಕಾರ್ಯಕ್ರಮ ನಡೆಯಲಿದೆ. ನಂತರ ದೇವಿನ ಹೂವಿನ ಪಲ್ಲಕ್ಕಿ ಉತ್ಸವ ಜರುಗಲಿದೆ. ಏ.11ರಂದು ಅವಭ್ರತೋತ್ಸವದ ಮೂಲಕ ದ್ಯಾಮಲಾಂಬಾ ಅಮ್ಮನ್ನ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ.</p><p>ಜಾತ್ರೋತ್ಸವ, ಅನ್ನಸಂತರ್ಪಣೆ ಹಾಗೂ ದೇವಾಲಯ ಜೀರ್ಣೋದ್ದಾರಕ್ಕೆ ಭಕ್ತರು ದೇಣಿಗೆ ಅರ್ಪಿಸುವಂತೆ ದೇವಸ್ಥಾನ ಅಭಿವೃದ್ಧಿ ನಮಿತಿ ಟ್ರಸ್ಟ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ರಾಜ್ಯ, ಹೊರರಾಜ್ಯಗಳ ಸದ್ಭಕ್ತರ ಆರಾಧ್ಯ ದೇವಿಯಾಗಿರುವ ತಾಲ್ಲೂಕಿನ ಹಿರೇಗುಂಟನೂರು ಗ್ರಾಮದ ಶ್ರೀ ದ್ಯಾಮಲಾಂಬಾ ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.</p>.<p>ಏ. 5ರಿಂದ ಏ.11ರ ವರೆಗೆ ಜಾತ್ರೋತ್ಸವ ನಡೆಯಲಿದ್ದು ದ್ಯಾಮಲಾಂಬಾ ದೇವಸ್ಥಾನ ಅಭಿವೃದ್ಧಿ ಸಮಿತಿ ಟ್ರಸ್ಟ್ ಪದಾಧಿಕಾರಿಗಳು ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಜಾತ್ರೋತ್ಸವದ ನಂತರ ದ್ಯಾಮಲಾಂಬಾ ಅಮ್ಮನವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೂ ಟ್ರಸ್ಟ್ ಸಿದ್ಧತೆ ಮಾಡಿಕೊಂಡಿದ್ದು, ಈ ಬಾರಿಯ ಜಾತ್ರೋತ್ಸವ ಪ್ರಾಮುಖ್ಯತೆ ಪಡೆದುಕೊಂಡಿದೆ.</p>.<p>‘ಅರೆಮಲೆನಾಡು ವಾತಾವಣರದ ಹಿರೇಗುಂಟನೂರು ಗ್ರಾಮದಲ್ಲಿ ನೆಲೆ ನಿಂತಿರುವ ದ್ಯಾಮಲಾಂಬಾ ಅಮ್ಮನವರು ಮನದ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ’ ಎಂಬುದು ಭಕ್ತರ ಬಲವಾದ ನಂಬಿಕೆಯಾಗಿದೆ. ಮಂಗಳವಾರ, ಶುಕ್ರವಾರ ವಿಶೇಷ ಪೂಜೆ ಪುನಸ್ಕಾರ, ಅನ್ನಸಂತರ್ಪಣೆ ನಿರಂತರವಾಗಿ ನಡೆಯುತ್ತಿವೆ. ಹಬ್ಬ– ಹರಿದಿನಗಳಲ್ಲಿ ದೇವಾಲಯಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ.</p>.<p>ದಿನದಿಂದ ದಿನಕ್ಕೆ ಭಕ್ತಗಣ ಹೆಚ್ಚುತ್ತಲೇ ಇರುವ ಕಾರಣ ಈಗಿರುವ ದೇವಾಲಯ ಚಿಕ್ಕದಾಗಿದ್ದು ಧಾರ್ಮಿಕ ಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತಿದೆ. ಸದ್ಭಕ್ತರ ಅಪೇಕ್ಷೆಯಂತೆ ಅಭಿವೃದ್ಧಿ ಸಮಿತಿ ಟ್ರಸ್ಟ್ ದೇವಾಲಯ ಜೀರ್ಣೋದ್ಧಾರಕ್ಕೆ ನಿರ್ಣಯಿಸಿದೆ. ದೇವಾಲಯವು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಕಾರಣ ದೇವಾಲಯ ಜೀರ್ಣೋದ್ಧಾರಕ್ಕೆ ಇಲಾಖೆಯ ಆಯುಕ್ತರ ಅನುಮತಿ ಬೇಕಿದೆ. ಈಗಾಗಲೇ ಜಿಲ್ಲಾಧಿಕಾರಿಗಳು, ಇಲಾಖೆಯ ಅಧಿಕಾರಿಗಳ ಜೊತೆ ಹಲವು ಸುತ್ತಿನ ಸಭೆಗಳು ನಡೆದಿದ್ದು ಅನುಮತಿ ಪಡೆಯುವ ಪ್ರಯತ್ನ ಪ್ರಗತಿಯಲ್ಲಿದೆ. ಅನುಮತಿ ಸಿಕ್ಕ ಕೂಡಲೇ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.</p>.<p>ದೇವಾಲಯದ ನೀಲನಕ್ಷೆ ಸಿದ್ಧಗೊಂಡಿದ್ದು ಭಕ್ತರ ಸಹಾಯದಿಂದಲೇ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಂದರವಾದ ರಾಜಗೋಪುರ, ಅಮ್ಮನವರ ಸನ್ನಿದಿಯ ಸುತ್ತಲೂ ಪವಳಿ ನಿರ್ಮಾಣದ ಯೋಜನೆ ಸಿದ್ಧವಾಗಿದೆ. ಹಿರಿಯರು ಕಟ್ಟಿರುವ ಐತಿಹಾಸಿಕ ದೇಗುಲದ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಗರ್ಭಗುಡಿ ಇರುವಲ್ಲಿಯೇ ಹೊಸ ರೂಪ ಕೊಡಲು ನಿರ್ಣಯಿಸಲಾಗಿದೆ.</p>.<p>ಹಿರೇಗುಂಟನೂರು ಗ್ರಾಮದಲ್ಲಿ ದ್ಯಾಮಲಾಂಬಾ ಅಮ್ಮನವರು ನೆಲೆನಿಲ್ಲಲು ಐತಿಹಾಸಿಕ ಹಿನ್ನೆಲೆ ಇದೆ. 15ನೇ ಶತಮಾನದಲ್ಲಿ ದಿಲ್ಲಿಯಿಂದ ದಕ್ಷಿಣ ಭಾಗಕ್ಕೆ ಸಾದು ಒಕ್ಕಲು ಮನೆತನದವರು ತಮ್ಮ ಕುಟುಂಬ, ದೇವರುಗಳೊಂದಿಗೆ ವಲಸೆ ಬಂದರು. ದಕ್ಷಿಣದ ವಿಜಯನಗರದ ಆನೆಗುಂದಿ ಪ್ರದೇಶದಲ್ಲಿ ಬೀಡುಬಿಟ್ಟಾಗ ಶ್ರೀಕೃಷ್ಣದೇವರಾಯನು ಅವರಿಗೆ ದಕ್ಷಿಣ ಭಾಗದಲ್ಲಿ ಗ್ರಾಮ ನಿರ್ಮಿಸಿಕೊಳ್ಳಲು ಅನುವು ಮಾಡಿಕೊಟ್ಟರು, ಶಾನುಭೋಗ ಕಾಯಕವನ್ನೂ ಕೊಟ್ಟರು. ಅವರ ಕನಸಿನಲ್ಲಿ ಬಂದ ಅಮ್ಮನವರು ದೇವಾಲಯ ಕಟ್ಟುಕೊಡುವಂತೆ ಕೇಳಿಕೊಂಡರು. ನಂತರ ದೇವಿಗೆ ದ್ಯಾಮವ್ವ ಎಂದು ಹೆಸರಿಟ್ಟು ಪೂಜೆ ಆರಂಭಿಸಿದರು. ಅಂದಿನಿಂದಲೂ ಅಮ್ಮ ದ್ಯಾಮಲಾಂಬಾ ಹೆಸರಿನಿಂದ ಭಕ್ತರನ್ನು ಹರಸುತ್ತಾ ಬರುತ್ತಿದ್ದಾಳೆ, ಭಕ್ತರ ಮನದ ಇಚ್ಛೆಗಳನ್ನು ಪೂರೈಸುತ್ತಿದ್ದಾಳೆ ಎಂಬ ನಂಬಿಕೆ ಮೂಡಿದೆ.</p>.<p>ಜಾನಪದ ಸಾಹಿತ್ಯದಲ್ಲಿ ದ್ಯಾಮಲಾಂಬಾ ದೇವಿಯ ಉಲ್ಲೇಖ ಇರುವುದನ್ನೂ ಕಾಣಬಹುದಾಗಿದೆ. ಕರ್ನಾಟಕದ, ತಮಿಳುನಾಡು, ಆಂಧ್ರಪ್ರದೇಶದ ಭಕ್ತರೂ ಈ ದೇವಿ ಆರಾಧಕರಾಗಿದ್ದಾರೆ. ‘ಬಿಸಿಲು ಬೀಳದ ಬಾವಿ, ಹೆಸರಿಲ್ಲದ ಮರ’ ಎಂಬುದು ದೇವಾಲಯದ ವಿಶೇಷತೆಯಾಗಿದೆ. ಬಿಸಿಲು ಬೀಳದ ಬಾವಿ ದೇವಾಲಯದ ಆವರಣದಲ್ಲಿ ಈಗಲೂ ಇದೆ. ಹೆಸರೇ ಇಲ್ಲದ ಮರ ಹಲವು ವರ್ಷಗಳವರೆಗೂ ದೇಗುಲದ ಆವರಣದಲ್ಲಿತ್ತು. 1998ರ ನಂತರ ಮರ ಒಣಗಿತು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ. ದೇವಾಲಯದ ಪ್ರವೇಶದ್ವಾರದ ಎಡಭಾಗದಲ್ಲಿ ವೀರಭದ್ರೇಶ್ವರ ಸ್ವಾಮಿ ಗುಡಿಯಿದ್ದು, ಇಲ್ಲಿ ಪ್ರತಿ ನವರಾತ್ರಿಯಲ್ಲಿ ಕೆಂಡಾರ್ಚನೆ ವೈಭವಯುತವಾಗಿ ನಡೆಯುತ್ತದೆ.</p>.<p>ದ್ಯಾಮಲಾಂಬಾ ದೇವಸ್ಥಾನ ಅಭಿವೃದ್ಧಿ ಸಮಿತಿ ಟ್ರಸ್ಟ್ ವತಿಯಿಂದ ದೇವಾಲಯದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿವೆ. ಟ್ರಸ್ಟ್ನ ಈಗಿನ ಅಧ್ಯಕ್ಷರು, ಲೆಕ್ಕ ಪರಿಶೋಧಕರು, ಪ್ರಗತಿಪರ ರೈತರೂ ಆದ ಈ.ಚಂದ್ರಣ್ಣ ಅವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಅಮ್ಮನವರ ಸನ್ನಿದಿಯಲ್ಲಿ ದಾಸೋಹ ಭವನವನ್ನು ನಿರ್ಮಿಸಲಾಗಿದೆ.</p>.<p>ಭಕ್ತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿರುವ ಕಾರಣ ದೇವಾಲಯದ ಆವರಣದಲ್ಲಿ ಭಕ್ತರಿಗಾಗಿ ಯಾತ್ರಿ ನಿವಾಸವನ್ನೂ ನಿರ್ಮಿಸಲಾಗಿದೆ. ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರಿಗೂ ದ್ಯಾಮಲಾಂಬಾ ಅಮ್ಮ ಮನೆ ದೇವರಾಗಿದ್ದು ಅವರೂ ದೇವಾಲಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮುಂದೆ ಜೀರ್ಣೋದ್ಧಾರ ಕಾಮಗಾರಿಗೂ ಅವರ ಸಹಕಾರ ಇರಲಿದೆ ಎಂದು ಸಮಿತಿಯವರು ಹೇಳಿದರು.</p>.<p>‘ದೇಗುಲ ಜೀರ್ಣೋದ್ಧಾರಕ್ಕೆ ಈಗಾಗಲೇ ದ್ಯಾಮಲಾಂಬಾ ಅಮ್ಮನವರಿಂದ ಅಪ್ಪಣೆ ಸಿಕ್ಕಿದೆ. ಅಮ್ಮನ ಅಪ್ಪಣೆ ಇಲ್ಲದೇ ನಾವು ಒಂದು ಹೆಜ್ಜೆಯನ್ನೂ ಇಡುವುದಿಲ್ಲ. ಅಮ್ಮನ ಅಪ್ಪಣೆ, ಭಕ್ತರ ಅಭಿಪ್ರಾಯದೊಂದಿಗೆ ಜೀರ್ಣೋದ್ಧಾರ ಕೆಲಸ ಆರಂಭಗೊಳ್ಳಲಿದೆ. ಮುಜರಾಯಿ ಇಲಾಖೆ ಅನುಮತಿ ಸಿಕ್ಕ ಕೂಡಲೇ ಮುಂದಿನ ಕೆಲಸ ಆರಂಭಿಸುತ್ತೇವೆ’ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದರು.</p>.<div><blockquote>ದ್ಯಾಮಲಾಂಬಾ ಅಮ್ಮನ ಭಕ್ತರ ಅಪೇಕ್ಷೆಯಂತೆ ದೇವಾಲಯದ ಜೀರ್ಣೋದ್ದಾರ ನಡೆಸಲಿದ್ದೇವೆ. ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಸಕಲ ಸೌಲಭ್ಯಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. </blockquote><span class="attribution">ಈ.ಚಂದ್ರಣ್ಣ, ಟ್ರಸ್ಟ್ ಅಧ್ಯಕ್ಷ</span></div>.<p><strong>ಏ.9ಕ್ಕೆ ದ್ಯಾಮಲಾಂಬಾ ರಥೋತ್ಸವ</strong></p><p>ಏಪ್ರಿಲ್ 5ರಂದು ಕಲ್ಯಾಣೋತ್ಸವದ ಮೂಲಕ ದ್ಯಾಮಲಾಂಬಾ ಜಾತ್ರೋತ್ಸವ ಆರಂಭಗೊಳ್ಳಲಿದೆ. ಏ. 6ರಂದು ನವಿಲು ಉತ್ಸವ, ಎ.7ರಂದು ಅಶೋತ್ಸವ, ಎ. 8ರಂದು ಮೀಸಲು ಪೂಜೆ, ಏ.9ರಂದು ಭವ್ಯ ರಥೋತ್ಸವ ನಡೆಯಲಿದೆ. ಏ.10ರಂದು ಸಂಜೆ 5 ಗಂಟೆಗೆ ಸಿಡಿ ಪೂಜಾ ಕಾರ್ಯಕ್ರಮ ನಡೆಯಲಿದೆ. ನಂತರ ದೇವಿನ ಹೂವಿನ ಪಲ್ಲಕ್ಕಿ ಉತ್ಸವ ಜರುಗಲಿದೆ. ಏ.11ರಂದು ಅವಭ್ರತೋತ್ಸವದ ಮೂಲಕ ದ್ಯಾಮಲಾಂಬಾ ಅಮ್ಮನ್ನ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ.</p><p>ಜಾತ್ರೋತ್ಸವ, ಅನ್ನಸಂತರ್ಪಣೆ ಹಾಗೂ ದೇವಾಲಯ ಜೀರ್ಣೋದ್ದಾರಕ್ಕೆ ಭಕ್ತರು ದೇಣಿಗೆ ಅರ್ಪಿಸುವಂತೆ ದೇವಸ್ಥಾನ ಅಭಿವೃದ್ಧಿ ನಮಿತಿ ಟ್ರಸ್ಟ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>