ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ರಥೋತ್ಸವ ಆರಂಭವಾಯಿತು. ಸಂಪ್ರದಾಯದಂತೆ ಉತ್ಸವ ಮೂರ್ತಿಯನ್ನು ಬಂಗಾರದ ಕಿರೀಟ, ಚಿನ್ನದ ಸರಗಳು ಸೇರಿ ನಾನಾ ಆಭರಣ
ಗಳಿಂದ ಸಿಂಗರಿಸಲಾಗಿತ್ತು. ಸೇವಂತಿ, ಮಲ್ಲಿಗೆ, ಕನಕಾಂಬರ ಸೇರಿ ಹೂವಿನ ಹಾರಗಳ ಅಲಂಕಾರ ವಿಶೇಷವಾಗಿತ್ತು. ರಥಕ್ಕೆ ಮೂರು ಸುತ್ತು ಬಣ್ಣದ ಪಟಗಳನ್ನು ಅಳವಡಿಸಲಾಗಿತ್ತು. ಅಲಂಕಾರ ಮುಕ್ತಾಯಗೊಂಡ ನಂತರ ಮಹಾಮಂಗಳಾರತಿ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಒಳಮಠದಿಂದ ದಾಸೋಹ ಭವನದ ದಾರಿಯಲ್ಲಿ ರಥವು ಸಾಗಿತು. ಕರಡಿ ಮಜಲು, ನಂದಿಧ್ವಜ ಕುಣಿತ ರಥದ ಮುಂಭಾಗ ಸಾಗಿದವು.