ಆದರೆ, ಈಚೆಗೆ ಇದು ಅವನತಿಯ ಹಾದಿ ಹಿಡಿದಿದೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಈ ಹಿಂದೆ ಪೂರ್ವ ಮುಂಗಾರು ಮಳೆಗೆ ಅಗಳು ಗೋಡೆ ಕುಸಿದಿತ್ತು. ಬೃಹತ್ ಬಂಡೆಗಳ ಶಿಖರಗಳಲ್ಲಿ ಬುರುಜು, ಬತೇರಿಗಳಿವೆ. ಏಳು ಸುತ್ತಿನ ಕೋಟೆಯ ಆರಂಭದ ಎರಡು ಸುತ್ತು ಅವನತಿ ಹೊಂದಿವೆ. ರಂಗಯ್ಯನ ಬಾಗಿಲು, ಆನೆ ಬಾಗಿಲು ಪಳೆಯುಳಿಕೆಯ ರೀತಿಯಲ್ಲಿ ಕಾಣುತ್ತಿವೆ. ಬೃಹತ್ ಚಪ್ಪಡಿ ಕಲ್ಲುಗಳನ್ನು ಪೇರಿಸಿ ನಿರ್ಮಿಸಿದ ಗೋಡೆಗಳು ಮಳೆಗೆ ನೆಲಕಚ್ಚುತ್ತಿವೆ.