ಅವರು ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಪ್ರತಿ ವರ್ಷದಂತೆ ಯುಗಾದಿ ಹಬ್ಬದ ನಂತರ ಹದಿನೈದು ದಿನಕ್ಕೆ ಅಂದರೇ ಏ.12ರಿಂದ ಪ್ರಾರಂಭವಾಗಿ ಏ.16 ಕ್ಕೆ ರಥೋತ್ಸವ ಮತ್ತು ಏ. 17ಕ್ಕೆ ಸಿಡಿ ಉತ್ಸವ ನಡೆಸಬೇಕೆಂದು ದೇವಸ್ಥಾನ ಕಮಿಟಿ ನಿರ್ಧರಿಸಿತ್ತು. ಆದರೆ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ, ತಹಸೀಲ್ದಾರ್ ಹಾಗೂ ಮುಜರಾಯಿ ಇಲಾಖೆ ಆದೇಶದಂತೆ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗುತ್ತಿದೆ. ಆದ್ದರಿಂದ ಭಕ್ತರು ಯಾವುದೇ ಕಾರಣಕ್ಕೂ ದೇವಸ್ಥಾನಕ್ಕೆ ಬಾರದೆ ಮನೆಯಲ್ಲೇ ಪೂಜೆ ಸಲ್ಲಿಸಿ ಮಹಾಮಾರಿ ಹೋಗಲಾಡಿಸಲು ಕೈ ಜೋಡಿಸಬೇಕೆಂದು ಎಂದು ಕಮಿಟಿ ಧರ್ಮದರ್ಶಿ ಈ.ಚಂದ್ರಣ್ಣ ಭಕ್ತರಲ್ಲಿ ಮನವಿ ಮಾಡಿದ್ದಾರೆ.