<p><strong>ಚಿತ್ರದುರ್ಗ</strong>: ತುರುವನೂರು ರಸ್ತೆಯಲ್ಲಿರುವ ರೇಷ್ಮೆಇಲಾಖೆಯ ಪಾಳು ಬಿದ್ದ ಕಟ್ಟಡಗಳಲ್ಲಿ ಕಿಡಿಗೇಡಿಗಳ ಹಾವಳಿ ವಿಪರೀತವಾಗಿದ್ದು, ಪಕ್ಕದಲ್ಲೇ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂರು ಮಹಿಳಾ ಹಾಸ್ಟೆಲ್ನ ನೂರಾರು ವಿದ್ಯಾರ್ಥಿನಿಯರಿಗೆ ಭೀತಿ ಎದುರಾಗಿದೆ.</p>.<p>ರೇಷ್ಮೆ ಇಲಾಖೆಗೆ ಸೇರಿದ ಕಚೇರಿ ಸ್ಥಳಾಂತರಿಸಿ ದಶಕಗಳೇ ಕಳೆದಿವೆ. ಈಗ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು, ಭೂತ ಬಂಗಲೆಯಂತೆ ಕಾಣುತ್ತವೆ. ಸದಾ ಬಾಗಿಲು ತೆರೆದ ಸ್ಥಿತಿಯಲ್ಲಿರುವ ಈ ಕಟ್ಟಡಗಳು ಅನೈತಿಕ ಚಟುವಟಿಕೆಯ ತಾಣವಾಗಿದೆ. ಎಲ್ಲೆಂದರಲ್ಲಿ ಮದ್ಯದ ಬಾಟೆಲ್ಗಳು ಬಿದ್ದು ಚೆಲ್ಲಾಡುತ್ತಿದ್ದು, ಕಿಡಿಗೇಡಿಗಳ ಹಾವಳಿಗೆ ಭಯದ ವಾತಾವರಣ ನಿರ್ಮಾಣವಾಗಿದೆ.</p>.<p>ಪಾಳು ಕಟ್ಟಡಗಳ ಪಕ್ಕದಲ್ಲೇ ಬಿಸಿಎಂ ಹಾಸ್ಟೆಲ್ಗಳ ವಿದ್ಯಾರ್ಥಿನಿಯರು ಓಡಾಡುವ ಕಾರಣ ಅವರಿಗೆ ಕಿಡಿಗೇಡಿಗಳ ಭಯ ಕಾಡುತ್ತದೆ. ಸಂಜೆಯಾಗುತ್ತಿದ್ದಂತೆ ಕುಡಿದ ಅಮಲಿನಲ್ಲಿ ಓಡಾಡುವವರನ್ನು ಕಂಡು ಭೀತಿಗೆ ಒಳಗಾಗುತ್ತಿದ್ದಾರೆ. ರಾತ್ರಿಯ ವೇಳೆ ಆ ಭಾಗದಲ್ಲಿ ಬೆಳಕಿನ ವ್ಯವಸ್ಥೆಯೂ ಸರಿಯಾಗಿ ಇಲ್ಲದ ಕಾರಣ 3 ಹಾಸ್ಟೆಲ್ಗಳ 750 ವಿದ್ಯಾರ್ಥಿನಿಯರು ಭಯದಲ್ಲೇ ಇರಬೇಕಾದ ಪರಿಸ್ಥಿತಿ ಇದೆ.</p>.<p>ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಬಾಲಕಿಯರ ವೃತ್ತಿಪರ ವಿದ್ಯಾರ್ಥಿನಿಲಯ, ಅಲೆಮಾರಿ– ಅರೆ ಅಲೆಮಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳು ಅಲ್ಲಿವೆ. ಜಿ ಪ್ಲಸ್ 2 ಮಾದರಿಯಲ್ಲಿ ಸುಸಜ್ಜಿತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಮೂರು ಕಟ್ಟಡಗಳಿಗೂ ಕಾಂಪೌಂಡ್ ಇಲ್ಲದ ಕಾರಣ ವಿದ್ಯಾರ್ಥಿನಿಯರಿಗೆ ಸಮೀಪದ ಪಾಳು ಕಟ್ಟಡಗಳ ಭಯ ಕಾಡುತ್ತದೆ.</p>.<p>ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿರುವ ವಿದ್ಯಾರ್ಥಿನಿಯರು ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳನ್ನು ಕಲಿಯುತ್ತಿದ್ದಾರೆ. ತುರುವನೂರು ರಸ್ತೆಯಲ್ಲಿರುವ ಮೈಸ್ಪೇಸ್ ಹೋಟೆಲ್ ಮುಂಭಾಗದ ಪ್ರವೇಶದ್ವಾರದಿಂದ ವಿದ್ಯಾರ್ಥಿನಿಯರು ಹಾಸ್ಟೆಲ್ಗಳಿಗೆ ಪ್ರವೇಶ ಪಡೆಯುತ್ತಾರೆ. ಪ್ರವೇಶದ್ವಾರದಲ್ಲೇ ಪಾಳು ಕಟ್ಟಡಗಳಿರುವ ಕಾರಣ ವಿದ್ಯಾರ್ಥಿನಿಯರು ಭಯಪಡುತ್ತಿದ್ದಾರೆ.</p>.<p>ಕಿಡಿಗೇಡಿಗಳು ಮುಖ್ಯ ಪ್ರವೇಶದ್ವಾರದಿಂದ ಪಾಳು ಕಟ್ಟಡಗಳಿಗೆ ಬರುವುದಿಲ್ಲ. ಅವರು ಪಕ್ಕದಲ್ಲಿರುವ ವೆಂಕಟೇಶ್ವರ ದೇವಾಲಯದ ಮೈದಾನದ ಕಡೆಯ ಕಾಂಪೌಂಡ್ ಹಾರಿ ಕಟ್ಟಡಗಳಿಗೆ ಪ್ರವೇಶಿಸುತ್ತಾರೆ. ಮೊಬೈಲ್ ಬೆಳಕಿನಲ್ಲಿ ಮದ್ಯ ಸೇವನೆ ಮಾಡುತ್ತಾರೆ. ಮದ್ಯದ ಅಮಲಿನಲ್ಲಿ ಬೆಳಿಗ್ಗೆವರೆಗೂ ಅಲ್ಲಿಯೇ ಮಲಗಿರುತ್ತಾರೆ. ಕಿಡಿಗೇಡಿಗಳನ್ನು ಮುಂಜಾನೆ ವಾಕಿಂಗ್ಗೆ ಬರುವ ಜನರು ಕೂಡ ಗಮನಿಸಿದ್ದಾರೆ.</p>.<p>‘ಸಂಜೆಯಾದ ನಂತರ ಪಾಳುಕಟ್ಟಡಗಳ ಪಕ್ಕದಲ್ಲಿ ಓಡಾಡಲು ಭಯವಾಗುತ್ತದೆ. ಹಾಸ್ಟೆಲ್ ಸಿಬ್ಬಂದಿ ಕೂಡ ನಮಗೆ ಈ ಕುರಿತು ಎಚ್ಚರಿಕೆ ನೀಡುತ್ತಾರೆ. ಭೂತ ಬಂಗಲೆಯಂತಿರುವ ಕಟ್ಟಡಗಳನ್ನು ತೆರವುಗೊಳಿಸಿದರೆ ನಮಗೆ ಯಾವ ಭಯವೂ ಇರುವುದಿಲ್ಲ’ ಎಂದು ವಿದ್ಯಾರ್ಥಿನಿಯರೊಬ್ಬರು ತಿಳಿಸಿದರು.</p>.<p>ತುರುವನೂರು ರಸ್ತೆಯಿಂದ ಹಾಸ್ಟೆಲ್ವರೆಗೆ ದೀಪ ಅಳವಡಿಸದ ಕಾರಣ ವಿದ್ಯಾರ್ಥಿನಿಯರು ಕತ್ತಲಲ್ಲೇ ಓಡಾಡಬೇಕಾದ ಪರಿಸ್ಥಿತಿ ಇದೆ. ಪ್ರಾಯೋಗಿಕ ತರಗತಿಗಳು ತಡವಾದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಕತ್ತಲಾದ ನಂತರ ಹಾಸ್ಟೆಲ್ಗೆ ಬರುತ್ತಾರೆ. ಅವರು ಕೈಯಲ್ಲಿ ಜೀವ ಹಿಡಿದು ಓಡಾಡಬೇಕಾದ ಸ್ಥಿತಿ ಇದೆ. ಮಳೆ ಬರುವಾಗ ಹಾಸ್ಟೆಲ್ ಆವರಣದಲ್ಲಿ ತಾಂತ್ರಿಕ ತೊಂದರೆಯಿಂದ ವಿದ್ಯುತ್ ವ್ಯತ್ಯಯವಾಗುತ್ತಿದ್ದು ವಿದ್ಯಾರ್ಥಿನಿಯರು ಭಯದಲ್ಲೇ ಕಾಲಕಳೆಯುವಂತಾಗಿದೆ ಎಂದು ಅವರು ಹೇಳಿದರು.</p>.<p>ಕಟ್ಟಡ ತೆರವಿಗೆ ಯೋಜನೆ ಸಿದ್ಧ</p><p>‘ಹಾಸ್ಟೆಲ್ ಆವರಣದಲ್ಲಿರುವ ರೇಷ್ಮೆ ಇಲಾಖೆಯ ಶಿಥಿಲ ಕಟ್ಟಡಗಳನ್ನು ಲೋಕೋಪಯೊಗಿ ಇಲಾಖೆ ತೆರವುಗೊಳಿಸಲಿದೆ. ಈಗಾಗಲೇ ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪಾಳು ಕಟ್ಟಡ ತೆರವುಗೊಂಡ ನಂತರ ಹೊಸ ಹಾಸ್ಟೆಲ್ ಕಟ್ಟಡ ನಿರ್ಮಿಸಲಾಗುವುದು. ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆಯಾಗದಂತೆ ಭದ್ರತೆ ನೀಡಲಾಗಿದೆ. ಟಿ.ಸಿ. ಸುಟ್ಟ ಕಾರಣ ವಿದ್ಯುತ್ ಸಮಸ್ಯೆಯಾಗಿತ್ತು. ಈಗ ಸರಿಪಡಿಸಲಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ತುರುವನೂರು ರಸ್ತೆಯಲ್ಲಿರುವ ರೇಷ್ಮೆಇಲಾಖೆಯ ಪಾಳು ಬಿದ್ದ ಕಟ್ಟಡಗಳಲ್ಲಿ ಕಿಡಿಗೇಡಿಗಳ ಹಾವಳಿ ವಿಪರೀತವಾಗಿದ್ದು, ಪಕ್ಕದಲ್ಲೇ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂರು ಮಹಿಳಾ ಹಾಸ್ಟೆಲ್ನ ನೂರಾರು ವಿದ್ಯಾರ್ಥಿನಿಯರಿಗೆ ಭೀತಿ ಎದುರಾಗಿದೆ.</p>.<p>ರೇಷ್ಮೆ ಇಲಾಖೆಗೆ ಸೇರಿದ ಕಚೇರಿ ಸ್ಥಳಾಂತರಿಸಿ ದಶಕಗಳೇ ಕಳೆದಿವೆ. ಈಗ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು, ಭೂತ ಬಂಗಲೆಯಂತೆ ಕಾಣುತ್ತವೆ. ಸದಾ ಬಾಗಿಲು ತೆರೆದ ಸ್ಥಿತಿಯಲ್ಲಿರುವ ಈ ಕಟ್ಟಡಗಳು ಅನೈತಿಕ ಚಟುವಟಿಕೆಯ ತಾಣವಾಗಿದೆ. ಎಲ್ಲೆಂದರಲ್ಲಿ ಮದ್ಯದ ಬಾಟೆಲ್ಗಳು ಬಿದ್ದು ಚೆಲ್ಲಾಡುತ್ತಿದ್ದು, ಕಿಡಿಗೇಡಿಗಳ ಹಾವಳಿಗೆ ಭಯದ ವಾತಾವರಣ ನಿರ್ಮಾಣವಾಗಿದೆ.</p>.<p>ಪಾಳು ಕಟ್ಟಡಗಳ ಪಕ್ಕದಲ್ಲೇ ಬಿಸಿಎಂ ಹಾಸ್ಟೆಲ್ಗಳ ವಿದ್ಯಾರ್ಥಿನಿಯರು ಓಡಾಡುವ ಕಾರಣ ಅವರಿಗೆ ಕಿಡಿಗೇಡಿಗಳ ಭಯ ಕಾಡುತ್ತದೆ. ಸಂಜೆಯಾಗುತ್ತಿದ್ದಂತೆ ಕುಡಿದ ಅಮಲಿನಲ್ಲಿ ಓಡಾಡುವವರನ್ನು ಕಂಡು ಭೀತಿಗೆ ಒಳಗಾಗುತ್ತಿದ್ದಾರೆ. ರಾತ್ರಿಯ ವೇಳೆ ಆ ಭಾಗದಲ್ಲಿ ಬೆಳಕಿನ ವ್ಯವಸ್ಥೆಯೂ ಸರಿಯಾಗಿ ಇಲ್ಲದ ಕಾರಣ 3 ಹಾಸ್ಟೆಲ್ಗಳ 750 ವಿದ್ಯಾರ್ಥಿನಿಯರು ಭಯದಲ್ಲೇ ಇರಬೇಕಾದ ಪರಿಸ್ಥಿತಿ ಇದೆ.</p>.<p>ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಬಾಲಕಿಯರ ವೃತ್ತಿಪರ ವಿದ್ಯಾರ್ಥಿನಿಲಯ, ಅಲೆಮಾರಿ– ಅರೆ ಅಲೆಮಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳು ಅಲ್ಲಿವೆ. ಜಿ ಪ್ಲಸ್ 2 ಮಾದರಿಯಲ್ಲಿ ಸುಸಜ್ಜಿತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಮೂರು ಕಟ್ಟಡಗಳಿಗೂ ಕಾಂಪೌಂಡ್ ಇಲ್ಲದ ಕಾರಣ ವಿದ್ಯಾರ್ಥಿನಿಯರಿಗೆ ಸಮೀಪದ ಪಾಳು ಕಟ್ಟಡಗಳ ಭಯ ಕಾಡುತ್ತದೆ.</p>.<p>ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿರುವ ವಿದ್ಯಾರ್ಥಿನಿಯರು ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳನ್ನು ಕಲಿಯುತ್ತಿದ್ದಾರೆ. ತುರುವನೂರು ರಸ್ತೆಯಲ್ಲಿರುವ ಮೈಸ್ಪೇಸ್ ಹೋಟೆಲ್ ಮುಂಭಾಗದ ಪ್ರವೇಶದ್ವಾರದಿಂದ ವಿದ್ಯಾರ್ಥಿನಿಯರು ಹಾಸ್ಟೆಲ್ಗಳಿಗೆ ಪ್ರವೇಶ ಪಡೆಯುತ್ತಾರೆ. ಪ್ರವೇಶದ್ವಾರದಲ್ಲೇ ಪಾಳು ಕಟ್ಟಡಗಳಿರುವ ಕಾರಣ ವಿದ್ಯಾರ್ಥಿನಿಯರು ಭಯಪಡುತ್ತಿದ್ದಾರೆ.</p>.<p>ಕಿಡಿಗೇಡಿಗಳು ಮುಖ್ಯ ಪ್ರವೇಶದ್ವಾರದಿಂದ ಪಾಳು ಕಟ್ಟಡಗಳಿಗೆ ಬರುವುದಿಲ್ಲ. ಅವರು ಪಕ್ಕದಲ್ಲಿರುವ ವೆಂಕಟೇಶ್ವರ ದೇವಾಲಯದ ಮೈದಾನದ ಕಡೆಯ ಕಾಂಪೌಂಡ್ ಹಾರಿ ಕಟ್ಟಡಗಳಿಗೆ ಪ್ರವೇಶಿಸುತ್ತಾರೆ. ಮೊಬೈಲ್ ಬೆಳಕಿನಲ್ಲಿ ಮದ್ಯ ಸೇವನೆ ಮಾಡುತ್ತಾರೆ. ಮದ್ಯದ ಅಮಲಿನಲ್ಲಿ ಬೆಳಿಗ್ಗೆವರೆಗೂ ಅಲ್ಲಿಯೇ ಮಲಗಿರುತ್ತಾರೆ. ಕಿಡಿಗೇಡಿಗಳನ್ನು ಮುಂಜಾನೆ ವಾಕಿಂಗ್ಗೆ ಬರುವ ಜನರು ಕೂಡ ಗಮನಿಸಿದ್ದಾರೆ.</p>.<p>‘ಸಂಜೆಯಾದ ನಂತರ ಪಾಳುಕಟ್ಟಡಗಳ ಪಕ್ಕದಲ್ಲಿ ಓಡಾಡಲು ಭಯವಾಗುತ್ತದೆ. ಹಾಸ್ಟೆಲ್ ಸಿಬ್ಬಂದಿ ಕೂಡ ನಮಗೆ ಈ ಕುರಿತು ಎಚ್ಚರಿಕೆ ನೀಡುತ್ತಾರೆ. ಭೂತ ಬಂಗಲೆಯಂತಿರುವ ಕಟ್ಟಡಗಳನ್ನು ತೆರವುಗೊಳಿಸಿದರೆ ನಮಗೆ ಯಾವ ಭಯವೂ ಇರುವುದಿಲ್ಲ’ ಎಂದು ವಿದ್ಯಾರ್ಥಿನಿಯರೊಬ್ಬರು ತಿಳಿಸಿದರು.</p>.<p>ತುರುವನೂರು ರಸ್ತೆಯಿಂದ ಹಾಸ್ಟೆಲ್ವರೆಗೆ ದೀಪ ಅಳವಡಿಸದ ಕಾರಣ ವಿದ್ಯಾರ್ಥಿನಿಯರು ಕತ್ತಲಲ್ಲೇ ಓಡಾಡಬೇಕಾದ ಪರಿಸ್ಥಿತಿ ಇದೆ. ಪ್ರಾಯೋಗಿಕ ತರಗತಿಗಳು ತಡವಾದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಕತ್ತಲಾದ ನಂತರ ಹಾಸ್ಟೆಲ್ಗೆ ಬರುತ್ತಾರೆ. ಅವರು ಕೈಯಲ್ಲಿ ಜೀವ ಹಿಡಿದು ಓಡಾಡಬೇಕಾದ ಸ್ಥಿತಿ ಇದೆ. ಮಳೆ ಬರುವಾಗ ಹಾಸ್ಟೆಲ್ ಆವರಣದಲ್ಲಿ ತಾಂತ್ರಿಕ ತೊಂದರೆಯಿಂದ ವಿದ್ಯುತ್ ವ್ಯತ್ಯಯವಾಗುತ್ತಿದ್ದು ವಿದ್ಯಾರ್ಥಿನಿಯರು ಭಯದಲ್ಲೇ ಕಾಲಕಳೆಯುವಂತಾಗಿದೆ ಎಂದು ಅವರು ಹೇಳಿದರು.</p>.<p>ಕಟ್ಟಡ ತೆರವಿಗೆ ಯೋಜನೆ ಸಿದ್ಧ</p><p>‘ಹಾಸ್ಟೆಲ್ ಆವರಣದಲ್ಲಿರುವ ರೇಷ್ಮೆ ಇಲಾಖೆಯ ಶಿಥಿಲ ಕಟ್ಟಡಗಳನ್ನು ಲೋಕೋಪಯೊಗಿ ಇಲಾಖೆ ತೆರವುಗೊಳಿಸಲಿದೆ. ಈಗಾಗಲೇ ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪಾಳು ಕಟ್ಟಡ ತೆರವುಗೊಂಡ ನಂತರ ಹೊಸ ಹಾಸ್ಟೆಲ್ ಕಟ್ಟಡ ನಿರ್ಮಿಸಲಾಗುವುದು. ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆಯಾಗದಂತೆ ಭದ್ರತೆ ನೀಡಲಾಗಿದೆ. ಟಿ.ಸಿ. ಸುಟ್ಟ ಕಾರಣ ವಿದ್ಯುತ್ ಸಮಸ್ಯೆಯಾಗಿತ್ತು. ಈಗ ಸರಿಪಡಿಸಲಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>