<p><strong>ಚಿತ್ರದುರ್ಗ:</strong> ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಓಡಾಡುವ ಪ್ರವಾಸಿಗರಿಗೆ ಸುಸಜ್ಜಿತವಾದ ಸೌಲಭ್ಯ ಒದಗಿಸಲು ಪ್ರವಾಸೋದ್ಯಮ ಇಲಾಖೆ ನಿರ್ಮಿಸಿದ್ದ ‘ಹೆದ್ದಾರಿ ಪ್ರವಾಸಿ ಮಂದಿರ’ ಉದ್ಘಾಟನೆಯಾಗಿ 3 ವರ್ಷ ಕಳೆದಿದ್ದರೂ ಅದನ್ನು ಇನ್ನೂ ಸಾರ್ವಜನಿಕರ ಸೇವೆಗೆ ಅರ್ಪಿಸಿಲ್ಲ. ಎರಡೂವರೆ ಎಕರೆ ಪ್ರದೇಶದಲ್ಲಿ ಅರಳಿ ನಿಂತಿರುವ ಕಟ್ಟಡ ಈಗ ದೂಳು ತಿನ್ನುತ್ತಿದ್ದು ಪಾಳು ಬಂಗಲೆಯ ರೂಪ ಪಡೆದುಕೊಂಡಿದೆ.</p>.<p>ರಾಜ್ಯದ ವಿವಿಧೆಡೆ ಪ್ರವಾಸೋದ್ಯಮ ಇಲಾಖೆ ಹೆದ್ದಾರಿಯಲ್ಲಿ ಓಡಾಡುವ ಜನರಿಗಾಗಿ ಹಲವು ಸೌಲಭ್ಯ (ಹೈವೆ ಅಮಿನಿಟೀಸ್) ಒದಗಿಸಿದೆ. ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ–48 ಹಾದು ಹೋಗಿದ್ದು, ಹೆದ್ದಾರಿ ಬದಿಯಲ್ಲೇ ಈ ಪ್ರವಾಸಿ ಮಂದಿರ ನಿರ್ಮಿಸಲಾಗಿದೆ. ನಗರದಿಂದ ಹಳೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ, ಸೀಬಾರದಿಂದ ಸ್ವಲ್ಪ ದೂರದಲ್ಲಿ ಹೊಸ ಬೈಪಾಸ್ ಸಂದಿಸುವ ಸ್ಥಳದಲ್ಲಿ ಈ ಪ್ರವಾಸಿ ಮಂದಿರ ನಿರ್ಮಿಸಲಾಗಿದೆ.</p>.<p>2013–14ನೇ ಸಾಲಿನಲ್ಲಿ ₹ 8 ಕೋಟಿ ವೆಚ್ಚದೊಂದಿಗೆ ಕಟ್ಟಡ ಕಾಮಗಾರಿ ಆರಂಭವಾಯಿತು. 2018ರ ವೇಳೆಗೆ ಕಾಮಗಾರಿ ಪೂರ್ಣಗೊಂಡಿದ್ದರೂ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ 2023ರಲ್ಲಿ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆಯಾಗಿ 3 ವರ್ಷಗಳೇ ಕಳೆದಿದ್ದರೂ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಅಧಿಕಾರಿಗಳು ಸಾರ್ವಜನಿಕ ಸೇವೆಗೆ ಸಮರ್ಪಿಸಿಲ್ಲ.</p>.<p>ವಿಶಾಲ ಜಾಗದಲ್ಲಿ ವೃತ್ತಾಕಾರವಾಗಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ಹೈಟೆಕ್ ರೂಪ ನೀಡಲಾಗಿದೆ. ಕಟ್ಟಡದಲ್ಲಿ 8 ಕೊಠಡಿಗಳಿದ್ದು, ಎಲ್ಲಾ ಕೊಠಡಿಗಳಿಗೂ ಎ.ಸಿ. ಅಳವಡಿಸಲಾಗಿದೆ. ಟೀಕ್ ಮರದ ಮಂಚ, ಬ್ರಾಂಡೆಡ್ ಬೆಡ್, ಸೋಫಾ, ಪೀಠೋಪಕರಣ ಹಾಕಲಾಗಿದೆ. ಕೊಠಡಿಗಳನ್ನು ಪ್ರವಾಸಿಗರಿಗೆ ನೀಡದ ಕಾರಣ ಎಲ್ಲವೂ ದೂಳು ತಿನ್ನುತ್ತಿವೆ. ಪ್ರತಿ ಕೊಠಡಿಯಲ್ಲೂ ಜೇಡರ ಹುಳುಗಳು ಬಲೆ ಕಟ್ಟಿಕೊಂಡಿದ್ದು, ಸುಸಜ್ಜಿತ ಸೌಲಭ್ಯ ಮಣ್ಣು ಪಾಲಾಗುತ್ತಿದೆ.</p>.<p>ಕೊಠಡಿಯೊಳಗೆ ಕಾಲಿಟ್ಟರೆ ದೂಳು ಶ್ವಾಸಕೋಶಕ್ಕೆ ತಾಗುತ್ತದೆ. ಒಳಗಿನ ಪರಿಕರಗಳು ತುಕ್ಕು ಹಿಡಿಯುತ್ತಿವೆ. ಕಿಟಕಿಗಳೆಲ್ಲವೂ ಜಡತ್ವಗೊಂಡಿದ್ದು, ಸರಿಸಲು ಸಾಧ್ಯವಾಗದಷ್ಟು ಸೆಟೆದು ನಿಂತಿವೆ. ಕಟ್ಟಡದ ಸುತ್ತಲೂ ಅಳವಡಿಸಲಾಗಿರುವ ಸಿ.ಸಿ.ಟಿ.ವಿ. ಕ್ಯಾಮೆರಾಗಳು ಕೂಡ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿವೆ. ಭವನ ನೋಡಿಕೊಳ್ಳಲು ಇಬ್ಬರು ಕಾವಲುಗಾರರನ್ನು ನೇಮಿಸಲಾಗಿದೆ.</p>.<p>ಕಟ್ಟಡದ ಇನ್ನೊಂದು ಬದಿಯಲ್ಲಿ ವಿಶಾಲವಾದ ರೆಸ್ಟೋರೆಂಟ್ಗೆ ಅವಕಾಶವಾಗುವಂತೆ ಕೊಠಡಿ ಕಟ್ಟಲಾಗಿದೆ. ತೊಟ್ಟಿ ಮನೆಯ ಆಕಾರದಲ್ಲಿ ನಿರ್ಮಿಸಲಾಗಿರುವ ರೆಸ್ಟೋರೆಂಟ್ಗೆ ವಿಶೇಷ ರೂಪ ನೀಡಲಾಗಿದೆ. ಗ್ಲಾಸ್ನಿಂದ ಆವೃತವಾಗಿರುವ ಗೋಡೆಗಳು ದೂಳು ತಿನ್ನುತ್ತಿವೆ. ಅಡುಗೆ ಮನೆ, ಕಾರಿಡಾರ್ಗಳೆಲ್ಲವೂ ಸುಂದರವಾಗಿದ್ದರೂ ಅದು ಯಾರಿಗೂ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದೆ.</p>.<p>ಪಕ್ಕದಲ್ಲೇ ಹವಾನಿಯಂತ್ರಿತ ಹೋಟೆಲ್ ಕೊಠಡಿಯೊಂದು ಇದ್ದು, ಅಲ್ಲಿ 30ಕ್ಕೂ ಹೆಚ್ಚು ಸೋಫಾಗಳನ್ನು ಇಡಲಾಗಿದೆ. ಕವರ್ ತೆರೆಯದ ಸ್ಥಿತಿಯಲ್ಲಿರುವ ಸೋಫಾಗಳು ಕೂಡ ಹಾಳಾಗುತ್ತಿದ್ದು ಇಲಿ, ಹೆಗ್ಗಣಗಳು ಸೇರಿಕೊಳ್ಳುವ ಅಪಾಯ ಸೃಷ್ಟಿಯಾಗಿದೆ.</p>.<p>ಕಲ್ಲಿನಕೋಟೆ, ಚಂದ್ರವಳ್ಳಿ ಸೇರಿದಂತೆ ನಗರದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ನಿತ್ಯ ನೂರಾರು ಪ್ರವಾಸಿಗರು ಚಿತ್ರದುರ್ಗಕ್ಕೆ ಬರುತ್ತಾರೆ. ನಗರದಲ್ಲಿ ಸುಸಜ್ಜಿತವಾದ ಹೋಟೆಲ್ ಸೌಲಭ್ಯವಿಲ್ಲ ಎಂಬ ಕೊರಗು ಮೊದಲಿನಿಂದಲೂ ಇದೆ. ರಜಾ ದಿನಗಳಲ್ಲಿ ಪ್ರವಾಸಿಗರಿಗೆ ಹೋಟೆಲ್ ಸಿಗದೇ ಪರದಾಡುತ್ತಾರೆ. ಕೆಲವರು ದಾವಣಗೆರೆಗೆ ತೆರಳಿ ವಾಸ್ತವ್ಯ ಹೂಡುತ್ತಾರೆ. ಸರ್ಕಾರವೇ ಸುಸಜ್ಜಿತವಾಗಿ ನಿರ್ಮಾಣ ಮಾಡಿರುವ ಪ್ರವಾಸಿ ಮಂದಿರವನ್ನು ತೆರೆಯದಿರುವುದು ವಿಪರ್ಯಾಸ ಎಂದು ಸ್ಥಳೀಯರು ಹೇಳುತ್ತಾರೆ.</p>.<p>ಕೊಠಡಿಗಳು ಹಾಗೂ ರೆಸ್ಟೋರೆಂಟ್ ಸುತ್ತಲೂ ಪ್ರವಾಸಿಗರಿಗೆ ವಾಯುವಿಹಾರಕ್ಕೆ ಪಾತ್ ನಿರ್ಮಿಸಲಾಗಿದೆ. ಆದರೆ, ಬಳಕೆಯಾಗದ ಕಾರಣ ಮಾರ್ಗದ ಎರಡೂ ಕಡೆ ಗಿಡಗಂಟಿಗಳು ಬೆಳೆದು ನಿಂತಿದೆ. ವಾಹನಗಳ ನಿಲುಗಡೆಗೆ ಸುಸಜ್ಜಿತ ತಂಗುದಾಣವನ್ನೂ ರೂಪಿಸಲಾಗಿದೆ. ಕಟ್ಟಡದ ಮುಂದೆ ಹೂದೋಟವೂ ಇದೆ. ಆದರೆ, ನಿರ್ವಹಣೆ ಕೊರತೆಯಿಂದ ಗಿಡಗಳು ಒಣಗುತ್ತಿವೆ.</p>.<p>‘ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕಟ್ಟಡದ ಉಸ್ತುವಾರಿ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ)ಕ್ಕೆ ನೀಡಿ ಕೈತೊಳೆದುಕೊಂಡಿದೆ. ನಿಗಮದ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಸುಸಜ್ಜಿತ ಕಟ್ಟಡವನ್ನು ಭೂತಬಂಗಲೆಯನ್ನಾಗಿ ಮಾಡಿದ್ದಾರೆ’ ಎಂದು ಕರವೇ ಮುಖಂಡ ಎಚ್.ಸಿ.ಶಶಿಕುಮಾರ್ ದೂರಿದರು.</p>.<div><blockquote>ಪ್ರವಾಸೋದ್ಯಮ ಇಲಾಖೆ ಈಗಾಗಲೇ ಕಟ್ಟಡವನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಿದೆ. ನಿಗಮದ ಅಧಿಕಾರಿಗಳು ಸಾರ್ವಜನಿಕ ಸೇವೆಗೆ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು </blockquote><span class="attribution">ಮಂಜುನಾಥ್ ರೆಡ್ಡಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ</span></div>.<p><strong>ಹೋಟೆಲ್ನವರ ಲಾಬಿ ಕಾರಣ ?</strong></p><p>'ಹೆದ್ದಾರಿ ಬದಿಯಲ್ಲಿರುವ ಖಾಸಗಿ ಹೋಟೆಲ್, ರೆಸ್ಟೋರೆಂಟ್ಗಳ ಲಾಬಿಯಿಂದಾಗಿ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಂದಿರ ಸಾರ್ವಜನಿಕ ಸೇವೆಗೆ ತೆರೆದುಕೊಂಡಿಲ್ಲ. ಹೆದ್ದಾರಿಯ ಎರಡೂ ಕಡೆ ಪ್ರಭಾವಿ ವ್ಯಕ್ತಿಗಳು ಐಷಾರಾಮಿ ಸೌಲಭ್ಯಗಳುಳ್ಳ ಹೋಟೆಲ್ ತೆರೆದಿದ್ದಾರೆ. ಪ್ರವಾಸಿ ಮಂದಿರ ತೆರೆದರೆ ಹೋಟೆಲ್ ವ್ಯವಹಾರಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅಧಿಕಾರಿಗಳಿಗೆ ಆಮಿಷವೊಡ್ಡಿ, ಒತ್ತಡ ತಂದು ಸಾರ್ವಜನಿಕರ ಸೇವೆಗೆ ಒಪ್ಪಿಸುವುದನ್ನು ಮುಂದೂಡಿಸುತ್ತಲೇ ಬಂದಿದ್ದಾರೆ' ಎಂದು ಸ್ಥಳೀಯರು ಆರೋಪಿಸುತ್ತಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-44-832353617</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಓಡಾಡುವ ಪ್ರವಾಸಿಗರಿಗೆ ಸುಸಜ್ಜಿತವಾದ ಸೌಲಭ್ಯ ಒದಗಿಸಲು ಪ್ರವಾಸೋದ್ಯಮ ಇಲಾಖೆ ನಿರ್ಮಿಸಿದ್ದ ‘ಹೆದ್ದಾರಿ ಪ್ರವಾಸಿ ಮಂದಿರ’ ಉದ್ಘಾಟನೆಯಾಗಿ 3 ವರ್ಷ ಕಳೆದಿದ್ದರೂ ಅದನ್ನು ಇನ್ನೂ ಸಾರ್ವಜನಿಕರ ಸೇವೆಗೆ ಅರ್ಪಿಸಿಲ್ಲ. ಎರಡೂವರೆ ಎಕರೆ ಪ್ರದೇಶದಲ್ಲಿ ಅರಳಿ ನಿಂತಿರುವ ಕಟ್ಟಡ ಈಗ ದೂಳು ತಿನ್ನುತ್ತಿದ್ದು ಪಾಳು ಬಂಗಲೆಯ ರೂಪ ಪಡೆದುಕೊಂಡಿದೆ.</p>.<p>ರಾಜ್ಯದ ವಿವಿಧೆಡೆ ಪ್ರವಾಸೋದ್ಯಮ ಇಲಾಖೆ ಹೆದ್ದಾರಿಯಲ್ಲಿ ಓಡಾಡುವ ಜನರಿಗಾಗಿ ಹಲವು ಸೌಲಭ್ಯ (ಹೈವೆ ಅಮಿನಿಟೀಸ್) ಒದಗಿಸಿದೆ. ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ–48 ಹಾದು ಹೋಗಿದ್ದು, ಹೆದ್ದಾರಿ ಬದಿಯಲ್ಲೇ ಈ ಪ್ರವಾಸಿ ಮಂದಿರ ನಿರ್ಮಿಸಲಾಗಿದೆ. ನಗರದಿಂದ ಹಳೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ, ಸೀಬಾರದಿಂದ ಸ್ವಲ್ಪ ದೂರದಲ್ಲಿ ಹೊಸ ಬೈಪಾಸ್ ಸಂದಿಸುವ ಸ್ಥಳದಲ್ಲಿ ಈ ಪ್ರವಾಸಿ ಮಂದಿರ ನಿರ್ಮಿಸಲಾಗಿದೆ.</p>.<p>2013–14ನೇ ಸಾಲಿನಲ್ಲಿ ₹ 8 ಕೋಟಿ ವೆಚ್ಚದೊಂದಿಗೆ ಕಟ್ಟಡ ಕಾಮಗಾರಿ ಆರಂಭವಾಯಿತು. 2018ರ ವೇಳೆಗೆ ಕಾಮಗಾರಿ ಪೂರ್ಣಗೊಂಡಿದ್ದರೂ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ 2023ರಲ್ಲಿ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆಯಾಗಿ 3 ವರ್ಷಗಳೇ ಕಳೆದಿದ್ದರೂ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಅಧಿಕಾರಿಗಳು ಸಾರ್ವಜನಿಕ ಸೇವೆಗೆ ಸಮರ್ಪಿಸಿಲ್ಲ.</p>.<p>ವಿಶಾಲ ಜಾಗದಲ್ಲಿ ವೃತ್ತಾಕಾರವಾಗಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ಹೈಟೆಕ್ ರೂಪ ನೀಡಲಾಗಿದೆ. ಕಟ್ಟಡದಲ್ಲಿ 8 ಕೊಠಡಿಗಳಿದ್ದು, ಎಲ್ಲಾ ಕೊಠಡಿಗಳಿಗೂ ಎ.ಸಿ. ಅಳವಡಿಸಲಾಗಿದೆ. ಟೀಕ್ ಮರದ ಮಂಚ, ಬ್ರಾಂಡೆಡ್ ಬೆಡ್, ಸೋಫಾ, ಪೀಠೋಪಕರಣ ಹಾಕಲಾಗಿದೆ. ಕೊಠಡಿಗಳನ್ನು ಪ್ರವಾಸಿಗರಿಗೆ ನೀಡದ ಕಾರಣ ಎಲ್ಲವೂ ದೂಳು ತಿನ್ನುತ್ತಿವೆ. ಪ್ರತಿ ಕೊಠಡಿಯಲ್ಲೂ ಜೇಡರ ಹುಳುಗಳು ಬಲೆ ಕಟ್ಟಿಕೊಂಡಿದ್ದು, ಸುಸಜ್ಜಿತ ಸೌಲಭ್ಯ ಮಣ್ಣು ಪಾಲಾಗುತ್ತಿದೆ.</p>.<p>ಕೊಠಡಿಯೊಳಗೆ ಕಾಲಿಟ್ಟರೆ ದೂಳು ಶ್ವಾಸಕೋಶಕ್ಕೆ ತಾಗುತ್ತದೆ. ಒಳಗಿನ ಪರಿಕರಗಳು ತುಕ್ಕು ಹಿಡಿಯುತ್ತಿವೆ. ಕಿಟಕಿಗಳೆಲ್ಲವೂ ಜಡತ್ವಗೊಂಡಿದ್ದು, ಸರಿಸಲು ಸಾಧ್ಯವಾಗದಷ್ಟು ಸೆಟೆದು ನಿಂತಿವೆ. ಕಟ್ಟಡದ ಸುತ್ತಲೂ ಅಳವಡಿಸಲಾಗಿರುವ ಸಿ.ಸಿ.ಟಿ.ವಿ. ಕ್ಯಾಮೆರಾಗಳು ಕೂಡ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿವೆ. ಭವನ ನೋಡಿಕೊಳ್ಳಲು ಇಬ್ಬರು ಕಾವಲುಗಾರರನ್ನು ನೇಮಿಸಲಾಗಿದೆ.</p>.<p>ಕಟ್ಟಡದ ಇನ್ನೊಂದು ಬದಿಯಲ್ಲಿ ವಿಶಾಲವಾದ ರೆಸ್ಟೋರೆಂಟ್ಗೆ ಅವಕಾಶವಾಗುವಂತೆ ಕೊಠಡಿ ಕಟ್ಟಲಾಗಿದೆ. ತೊಟ್ಟಿ ಮನೆಯ ಆಕಾರದಲ್ಲಿ ನಿರ್ಮಿಸಲಾಗಿರುವ ರೆಸ್ಟೋರೆಂಟ್ಗೆ ವಿಶೇಷ ರೂಪ ನೀಡಲಾಗಿದೆ. ಗ್ಲಾಸ್ನಿಂದ ಆವೃತವಾಗಿರುವ ಗೋಡೆಗಳು ದೂಳು ತಿನ್ನುತ್ತಿವೆ. ಅಡುಗೆ ಮನೆ, ಕಾರಿಡಾರ್ಗಳೆಲ್ಲವೂ ಸುಂದರವಾಗಿದ್ದರೂ ಅದು ಯಾರಿಗೂ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದೆ.</p>.<p>ಪಕ್ಕದಲ್ಲೇ ಹವಾನಿಯಂತ್ರಿತ ಹೋಟೆಲ್ ಕೊಠಡಿಯೊಂದು ಇದ್ದು, ಅಲ್ಲಿ 30ಕ್ಕೂ ಹೆಚ್ಚು ಸೋಫಾಗಳನ್ನು ಇಡಲಾಗಿದೆ. ಕವರ್ ತೆರೆಯದ ಸ್ಥಿತಿಯಲ್ಲಿರುವ ಸೋಫಾಗಳು ಕೂಡ ಹಾಳಾಗುತ್ತಿದ್ದು ಇಲಿ, ಹೆಗ್ಗಣಗಳು ಸೇರಿಕೊಳ್ಳುವ ಅಪಾಯ ಸೃಷ್ಟಿಯಾಗಿದೆ.</p>.<p>ಕಲ್ಲಿನಕೋಟೆ, ಚಂದ್ರವಳ್ಳಿ ಸೇರಿದಂತೆ ನಗರದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ನಿತ್ಯ ನೂರಾರು ಪ್ರವಾಸಿಗರು ಚಿತ್ರದುರ್ಗಕ್ಕೆ ಬರುತ್ತಾರೆ. ನಗರದಲ್ಲಿ ಸುಸಜ್ಜಿತವಾದ ಹೋಟೆಲ್ ಸೌಲಭ್ಯವಿಲ್ಲ ಎಂಬ ಕೊರಗು ಮೊದಲಿನಿಂದಲೂ ಇದೆ. ರಜಾ ದಿನಗಳಲ್ಲಿ ಪ್ರವಾಸಿಗರಿಗೆ ಹೋಟೆಲ್ ಸಿಗದೇ ಪರದಾಡುತ್ತಾರೆ. ಕೆಲವರು ದಾವಣಗೆರೆಗೆ ತೆರಳಿ ವಾಸ್ತವ್ಯ ಹೂಡುತ್ತಾರೆ. ಸರ್ಕಾರವೇ ಸುಸಜ್ಜಿತವಾಗಿ ನಿರ್ಮಾಣ ಮಾಡಿರುವ ಪ್ರವಾಸಿ ಮಂದಿರವನ್ನು ತೆರೆಯದಿರುವುದು ವಿಪರ್ಯಾಸ ಎಂದು ಸ್ಥಳೀಯರು ಹೇಳುತ್ತಾರೆ.</p>.<p>ಕೊಠಡಿಗಳು ಹಾಗೂ ರೆಸ್ಟೋರೆಂಟ್ ಸುತ್ತಲೂ ಪ್ರವಾಸಿಗರಿಗೆ ವಾಯುವಿಹಾರಕ್ಕೆ ಪಾತ್ ನಿರ್ಮಿಸಲಾಗಿದೆ. ಆದರೆ, ಬಳಕೆಯಾಗದ ಕಾರಣ ಮಾರ್ಗದ ಎರಡೂ ಕಡೆ ಗಿಡಗಂಟಿಗಳು ಬೆಳೆದು ನಿಂತಿದೆ. ವಾಹನಗಳ ನಿಲುಗಡೆಗೆ ಸುಸಜ್ಜಿತ ತಂಗುದಾಣವನ್ನೂ ರೂಪಿಸಲಾಗಿದೆ. ಕಟ್ಟಡದ ಮುಂದೆ ಹೂದೋಟವೂ ಇದೆ. ಆದರೆ, ನಿರ್ವಹಣೆ ಕೊರತೆಯಿಂದ ಗಿಡಗಳು ಒಣಗುತ್ತಿವೆ.</p>.<p>‘ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕಟ್ಟಡದ ಉಸ್ತುವಾರಿ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ)ಕ್ಕೆ ನೀಡಿ ಕೈತೊಳೆದುಕೊಂಡಿದೆ. ನಿಗಮದ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಸುಸಜ್ಜಿತ ಕಟ್ಟಡವನ್ನು ಭೂತಬಂಗಲೆಯನ್ನಾಗಿ ಮಾಡಿದ್ದಾರೆ’ ಎಂದು ಕರವೇ ಮುಖಂಡ ಎಚ್.ಸಿ.ಶಶಿಕುಮಾರ್ ದೂರಿದರು.</p>.<div><blockquote>ಪ್ರವಾಸೋದ್ಯಮ ಇಲಾಖೆ ಈಗಾಗಲೇ ಕಟ್ಟಡವನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಿದೆ. ನಿಗಮದ ಅಧಿಕಾರಿಗಳು ಸಾರ್ವಜನಿಕ ಸೇವೆಗೆ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು </blockquote><span class="attribution">ಮಂಜುನಾಥ್ ರೆಡ್ಡಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ</span></div>.<p><strong>ಹೋಟೆಲ್ನವರ ಲಾಬಿ ಕಾರಣ ?</strong></p><p>'ಹೆದ್ದಾರಿ ಬದಿಯಲ್ಲಿರುವ ಖಾಸಗಿ ಹೋಟೆಲ್, ರೆಸ್ಟೋರೆಂಟ್ಗಳ ಲಾಬಿಯಿಂದಾಗಿ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಂದಿರ ಸಾರ್ವಜನಿಕ ಸೇವೆಗೆ ತೆರೆದುಕೊಂಡಿಲ್ಲ. ಹೆದ್ದಾರಿಯ ಎರಡೂ ಕಡೆ ಪ್ರಭಾವಿ ವ್ಯಕ್ತಿಗಳು ಐಷಾರಾಮಿ ಸೌಲಭ್ಯಗಳುಳ್ಳ ಹೋಟೆಲ್ ತೆರೆದಿದ್ದಾರೆ. ಪ್ರವಾಸಿ ಮಂದಿರ ತೆರೆದರೆ ಹೋಟೆಲ್ ವ್ಯವಹಾರಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅಧಿಕಾರಿಗಳಿಗೆ ಆಮಿಷವೊಡ್ಡಿ, ಒತ್ತಡ ತಂದು ಸಾರ್ವಜನಿಕರ ಸೇವೆಗೆ ಒಪ್ಪಿಸುವುದನ್ನು ಮುಂದೂಡಿಸುತ್ತಲೇ ಬಂದಿದ್ದಾರೆ' ಎಂದು ಸ್ಥಳೀಯರು ಆರೋಪಿಸುತ್ತಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260529-44-832353617</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>