ಮಾರುಕಟ್ಟೆಯಲ್ಲಿ ಕನಿಷ್ಠ ಸೌಲಭ್ಯ ಕಲ್ಪಿಸಿಲ್ಲ. ಆದರೆ ನಿತ್ಯ ಜಕಾತಿ ವಸೂಲಿಗೆ ಬರುತ್ತಾರೆ. ಬಿಸಿಲಿಗೆ ಸೊಪ್ಪು ಬಾಡುತ್ತದೆ. ಮಳೆಗಾಲದಲ್ಲಿ ರಸ್ತೆಗೆ ನೀರು ಆವರಿಸಿ, ಸೊಪ್ಪು ಕೊಳೆಯುತ್ತಿದೆ. ಬಿಡಾಡಿ ದನಗಳ ಹಾವಳಿಯೂ ಇದೆ
ಸುಜಾತಮ್ಮ, ವ್ಯಾಪಾರಿ, ಹೊಸದುರ್ಗ
ಸಗಟು ವ್ಯಾಪಾರಿಗಳಿಗೆ ಹೊಸದುರ್ಗ ಎಪಿಎಂಸಿಯಲ್ಲಿ ಸ್ಥಳ ಕಲ್ಪಿಸುವ ಬಗ್ಗೆ ಚರ್ಚಿಸಲು ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಲಾಗುತ್ತದೆ.16 ನೇ ಹಣಕಾಸು ಯೋಜನೆಯಡಿ ಈ ಬಾರಿ ಬಂಡೆ ಮಾರುಕಟ್ಟೆಯಲ್ಲಿ ಶೌಚಾಲಯ ನಿರ್ಮಿಸಲಾಗುತ್ತದೆ
ಎನ್. ನಾಗಭೂಷಣ್, ಮುಖ್ಯಾಧಿಕಾರಿ
ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆಯಿಲ್ಲದ ಕಾರಣ ನಗರದಲ್ಲಿ ತರಕಾರಿ ವ್ಯಾಪಾರಸ್ಥರ ಜತೆಗೆ ಜನರೂ ತೊಂದರೆ ಅನುಭವಿಸುವಂತಾಗಿದೆ. ಖಾಸಗಿ ಬಸ್ ನಿಲ್ದಾಣ, ತ್ಯಾಗರಾಜ ಮಾರುಕಟ್ಟೆಯಲ್ಲಿ ರಸ್ತೆಯೇ ವ್ಯಾಪಾರದ ಸ್ಥಳವಾಗಿದೆ
ಎಚ್.ಗಿರೀಶ್, ಗ್ರಾಹಕ
ವ್ಯಾಪಾರಸ್ಥರ ಸಂಖ್ಯೆಗೆ ಅನುಗುಣವಾಗಿ ಸಂತೆ ಮಾರುಕಟ್ಟೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ವ್ಯಾಪಾರಸ್ಥರಿಗೆ, ಗ್ರಾಹಕರಿಗೂ ಮೂಲ ಸೌಕರ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು
ರುದ್ರಸ್ವಾಮಿ, ನಾಯಕನಹಟ್ಟಿ
ತ್ಯಾಗರಾಜ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕೆಲ ಚಿಕ್ಕಪುಟ್ಟ ಕೆಲಸಗಳಿರುವ ಕಾರಣ ಉದ್ಘಾಟನೆ ವಿಳಂಬವಾಗಿದೆ. ಶೀಘ್ರ ಎಲ್ಲವನ್ನೂ ಪೂರ್ಣಗೊಳಿಸಿ ವ್ಯಾಪಾರಸ್ಥರಿಗೆ ಹಂಚಿಕೆ ಮಾಡಲಾಗುವುದು