<p>ಚಿತ್ರದುರ್ಗ: ‘12ನೇ ಶತಮಾನ ಇತಿಹಾಸದಲ್ಲಿ ಪ್ರಮುಖ ಕಾಲಘಟ್ಟ. 800 ವರ್ಷಗಳ ಹಿಂದೆ ಶರಣರು ಸಾಮಾಜಿಕ ಹಿತ, ಸಮಾನತೆಗೆ ಹೋರಾಟ ಮಾಡಿದ್ದರು’ ಎಂದು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಅಧಿಕಾರಿ ಡಿ.ಆರ್.ಶಿವಪ್ರಕಾಶ್ ತಿಳಿಸಿದರು.</p>.<p>ನಗರದ ಮುರುಘಾ ಮಠದಲ್ಲಿ ಬುಧವಾರ ಆಯೋಜಿಸಿದ್ದ ಯಡಿಯೂರು ತೋಂಟದ ಸಿದ್ಧಲಿಂಗ ಯತಿಗಳ ಶರಣೋತ್ಸವದಲ್ಲಿ ಮಾತನಾಡಿದರು.</p>.<p>‘ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಸಿದ್ಧರಾಮ ಸೇರಿದಂತೆ ನೂರಾರು ಶರಣರು ನಮ್ಮಂತೆಯೇ ಬದುಕಿದವರು. ಅವರ ಬದುಕಿನ ರೀತಿ, ಕೊಟ್ಟ ಕೊಡುಗೆ ಎಲ್ಲದರ ಪರಿಣಾಮವಾಗಿ ನಾವು ಅವರನ್ನು ದೈವದ ಸ್ಥಾನದಲ್ಲಿರಿಸಿದ್ದೇವೆ’ ಎಂದರು.</p>.<p>‘ಶರಣರು ಜೀವನದ ಎಲ್ಲ ಅವಸ್ಥೆಗಳನ್ನು ಕಂಡು ಅಧ್ಯಯನಶೀಲರಾಗಿ ವಚನ ಸಾಹಿತ್ಯವನ್ನು ಸೃಷ್ಟಿಸುವ ಮೂಲಕ ಬಹುದೊಡ್ಡ ಜ್ಞಾನಭಂಡಾರವನ್ನು ಜಗತ್ತಿಗೆ ಬಿಟ್ಟು ಹೋಗಿದ್ದಾರೆ. 12ನೇ ಶತಮಾನದ ವಚನ ಸಾಹಿತ್ಯ ಪ್ರಜಾ ಸಾಹಿತ್ಯವಾಗಿತ್ತು’ ಎಂದು ತಿಳಿಸಿದರು.</p>.<p>‘16ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗ ಯತಿಗಳು ಬಸವಣ್ಣನವರಂತೆ ಈ ನೆಲದಲ್ಲಿ ಹುಟ್ಟಿ ಬೆಳೆದು ಜ್ಞಾನ ಸಂಪಾದನೆಗಾಗಿ ಅಧ್ಯಯನ ನಡೆಸಿದರು. ನಂತರದಲ್ಲಿ ಬಸವೋತ್ತರ ಯುಗದ ವಚನ ಸಾಹಿತ್ಯ ಸೃಷ್ಟಿಗೆ ಕಾರಣಕರ್ತರಾದರು’ ಎಂದರು.</p>.<p>ಬಸವ ಮುರುಘೇಂದ್ರ ಸ್ವಾಮೀಜಿ, ಈಚಲನಾಗೇನಹಳ್ಳಿ ಗೋವಿಂದ ಸ್ವಾಮೀಜಿ, ಭಕ್ತರಾದ ಶ್ರೀನಿವಾಸ್, ತಿಪ್ಪೇಸ್ವಾಮಿ, ನಾಗರಾಜ ಸಂಗಂ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-44-2144221065</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರದುರ್ಗ: ‘12ನೇ ಶತಮಾನ ಇತಿಹಾಸದಲ್ಲಿ ಪ್ರಮುಖ ಕಾಲಘಟ್ಟ. 800 ವರ್ಷಗಳ ಹಿಂದೆ ಶರಣರು ಸಾಮಾಜಿಕ ಹಿತ, ಸಮಾನತೆಗೆ ಹೋರಾಟ ಮಾಡಿದ್ದರು’ ಎಂದು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಅಧಿಕಾರಿ ಡಿ.ಆರ್.ಶಿವಪ್ರಕಾಶ್ ತಿಳಿಸಿದರು.</p>.<p>ನಗರದ ಮುರುಘಾ ಮಠದಲ್ಲಿ ಬುಧವಾರ ಆಯೋಜಿಸಿದ್ದ ಯಡಿಯೂರು ತೋಂಟದ ಸಿದ್ಧಲಿಂಗ ಯತಿಗಳ ಶರಣೋತ್ಸವದಲ್ಲಿ ಮಾತನಾಡಿದರು.</p>.<p>‘ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಸಿದ್ಧರಾಮ ಸೇರಿದಂತೆ ನೂರಾರು ಶರಣರು ನಮ್ಮಂತೆಯೇ ಬದುಕಿದವರು. ಅವರ ಬದುಕಿನ ರೀತಿ, ಕೊಟ್ಟ ಕೊಡುಗೆ ಎಲ್ಲದರ ಪರಿಣಾಮವಾಗಿ ನಾವು ಅವರನ್ನು ದೈವದ ಸ್ಥಾನದಲ್ಲಿರಿಸಿದ್ದೇವೆ’ ಎಂದರು.</p>.<p>‘ಶರಣರು ಜೀವನದ ಎಲ್ಲ ಅವಸ್ಥೆಗಳನ್ನು ಕಂಡು ಅಧ್ಯಯನಶೀಲರಾಗಿ ವಚನ ಸಾಹಿತ್ಯವನ್ನು ಸೃಷ್ಟಿಸುವ ಮೂಲಕ ಬಹುದೊಡ್ಡ ಜ್ಞಾನಭಂಡಾರವನ್ನು ಜಗತ್ತಿಗೆ ಬಿಟ್ಟು ಹೋಗಿದ್ದಾರೆ. 12ನೇ ಶತಮಾನದ ವಚನ ಸಾಹಿತ್ಯ ಪ್ರಜಾ ಸಾಹಿತ್ಯವಾಗಿತ್ತು’ ಎಂದು ತಿಳಿಸಿದರು.</p>.<p>‘16ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗ ಯತಿಗಳು ಬಸವಣ್ಣನವರಂತೆ ಈ ನೆಲದಲ್ಲಿ ಹುಟ್ಟಿ ಬೆಳೆದು ಜ್ಞಾನ ಸಂಪಾದನೆಗಾಗಿ ಅಧ್ಯಯನ ನಡೆಸಿದರು. ನಂತರದಲ್ಲಿ ಬಸವೋತ್ತರ ಯುಗದ ವಚನ ಸಾಹಿತ್ಯ ಸೃಷ್ಟಿಗೆ ಕಾರಣಕರ್ತರಾದರು’ ಎಂದರು.</p>.<p>ಬಸವ ಮುರುಘೇಂದ್ರ ಸ್ವಾಮೀಜಿ, ಈಚಲನಾಗೇನಹಳ್ಳಿ ಗೋವಿಂದ ಸ್ವಾಮೀಜಿ, ಭಕ್ತರಾದ ಶ್ರೀನಿವಾಸ್, ತಿಪ್ಪೇಸ್ವಾಮಿ, ನಾಗರಾಜ ಸಂಗಂ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-44-2144221065</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>