<p><strong>ಚಿತ್ರದುರ್ಗ</strong>: ಕನ್ನಡದ ಮೊಟ್ಟಮೊದಲ ವೀರಗಲ್ಲು ಶಾಸನ, ಮೊದಲ ಛಂದಸ್ಸಿನ ಶಾಸನ, ಪದ್ಯಕಾವ್ಯ ಶಾಸನ, ಸ್ಮಾರಕ ಶಾಸನ, ಕರ್ನಾಟಕದಲ್ಲಿ ಸಿಕ್ಕಿರುವ ಮೊದಲ ತಮಿಳು ಶಾಸನ ಎಂಬೆಲ್ಲಾ ಮೊದಲುಗಳಿಗೆ ಸಾಕ್ಷಿಯಾಗಿರುವ ‘ತಮಟಕಲ್ಲು ಶಾಸನ’ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಕೃಷಿ ಭೂಮಿಯ ಬದುವಿನ ಮೇಲೆ ಬಂಧಿತವಾಗಿದೆ.</p>.<p>5ನೇ ಶತಮಾನದ ಕದಂಬರ ಕಾಲಕ್ಕೆ ಸೇರಿದ್ದು ಎನ್ನಲಾದ ಈ ಶಾಸನ ಪೂರ್ವ ಹಳಗನ್ನಡದಲ್ಲಿದೆ. ‘ಮಸಿಕಪುರ’ದ ಅಧಿಪತಿ ಗುಣಮಧುರನ ಪರಾಕ್ರಮವನ್ನು ಶಾಸನದಲ್ಲಿ ವರ್ಣಿಸಲಾಗಿದೆ. ಈ ಕಾರಣಕ್ಕೆ ಇದನ್ನು ಕನ್ನಡದ ಮೊದಲ ‘ಪ್ರಶಸ್ತಿ ಶಾಸನ’ ಎಂದೂ ಕರೆಯಲಾಗಿದೆ. ಶಾಸನವನ್ನು ಕೆತ್ತಿದ ಲಿಪಿಕಾರ ‘ಮೊದಲ್ನಾರ್ ಸಾತನ್’ ತಮಿಳಿನಲ್ಲಿ ತನ್ನ ಹೆಸರು ಕೆತ್ತಿರುವ ಕಾರಣ ಇದನ್ನು ಕನ್ನಡ ನಾಡಿನಲ್ಲಿ ಸಿಕ್ಕಿದ ಮೊದಲ ತಮಿಳು ಶಾಸನ ಎಂದೂ ಪರಿಗಣಿಸಲಾಗಿದೆ.</p>.<p>ಕನ್ನಡ ನಾಡಿನ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ಈ ಅಪರೂಪದ ಶಾಸನ ಈಗ ನಿರ್ವಹಣೆ ಇಲ್ಲದೇ ಖಾಸಗಿ ಕೃಷಿ ಭೂಮಿಯ ಮೂಲೆಯಲ್ಲಿರುವ ಬದುವಿನ ಮೇಲೆ ಸಿಲುಕಿದೆ. ನಗರದಿಂದ 8 ಕಿ.ಮೀ ದೂರದಲ್ಲಿರುವ ತಮಟಕಲ್ಲು ಗ್ರಾಮದಿಂದ ಕೊಂಚ ದೂರದಲ್ಲಿ ಈ ಶಾಸನವಿದೆ. ತಮಟಕಲ್ಲಿನಿಂದ ಗುಡ್ಡದರಂಗವ್ವನಹಳ್ಳಿ ಗ್ರಾಮಕ್ಕೆ ತೆರಳುವ ಕಾಲುದಾರಿಯಿಂದ 200 ಮೀಟರ್ ದೂರ ಸಾಗಿದರೆ ಈ ಶಾಸನ ಸಿಗುತ್ತದೆ.</p>.<p>ಕಾಲುದಾರಿಯಲ್ಲಿ ನಿಂತರೆ ಶಾಸನದ ಬಳಿ ಹೋಗುವುದು ಹೇಗೆ ಎಂಬ ಗೊಂದಲ ಕಾಡುತ್ತದೆ. ಏಕೆಂದರೆ ಅಲ್ಲಿಗೆ ತೆರಳಲು ದಾರಿಯೇ ಇಲ್ಲ. ಜಮೀನಿನ ಒಂದು ಮೂಲೆಯಲ್ಲಿ ಆಸ್ತಿ ಮಾಲೀಕರಾದ ಶಾಂತಮ್ಮ ಅವರ ಮನೆ ಇದೆ. ಇನ್ನೊಂದು ಮೂಲೆಯಲ್ಲಿ ತಮಟಕಲ್ಲು ಶಾಸನವಿದೆ. ಶಾಸನದ ಬಳಿ ಹೋಗಬೇಕಾದರೆ ಶಾಂತಮ್ಮ ಅವರ ಮನೆಯ ಹಿಂದಿನ ಜಮೀನು ಮೇಲೆಯೇ ತೆರಳಬೇಕು. ಜಮೀನಿನಲ್ಲಿ ಬೆಳೆ ಮಾಡಿದರೆ ತಮಟಕಲ್ಲು ಶಾಸನ ಸಂಪೂರ್ಣವಾಗಿ ಮುಳುಗಿ ಹೋಗುತ್ತದೆ.</p>.<p>ಆಗ ಶಾಂತಮ್ಮ ಅವರ ಮನೆ ಮುಂದಿನ ಅಡಿಕೆ ತೋಟದ ಬದುವಿನ ಮೇಲೆ ಸ್ವಲ್ಪ ದೂರ ಸಾಗಿ ಮೂಲೆಯಲ್ಲಿರುವ ಶಾಸನದ ಸ್ಥಳಕ್ಕೆ ತೆರಳಬೇಕು. ರಾಜ್ಯದ, ದೇಶದ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಶಾಸನದ ಜಾಗಕ್ಕೆ ತೆರಳಲು ಇಷ್ಟೆಲ್ಲಾ ಸರ್ಕಸ್ ಮಾಡಬೇಕಾ ಎಂಬ ಪ್ರಶ್ನೆ ನೋಡಲು ಬಂದವರಲ್ಲಿ ಮೂಡುತ್ತದೆ. ಜೊತೆಗೆ ಜಿಲ್ಲಾಡಳಿತ, ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹಿಡಿಶಾಪ ಹಾಕುವಂತೆಯೂ ಮಾಡುತ್ತದೆ.</p>.<p>‘ಶಾಸನದ ಮೇಲೆ ತಮಿಳು ಲಿಪಿಯೂ ಇರುವ ಕಾರಣ ತಮಿಳುನಾಡಿನ ಹಲವು ಇತಿಹಾಸ ಸಂಶೋಧಕರು ಇಲ್ಲಿಗೆ ಬರುತ್ತಾರೆ. ಅಲ್ಲಿಗೆ ತೆರಳಲು ದಾರಿಯೇ ಇಲ್ಲದ ಕಾರಣ ಬಹಳ ಬೇಸರ ಪಟ್ಟುಕೊಂಡು ಹೋಗುತ್ತಾರೆ’ ಎಂದು ತಮಟಕಲ್ಲು ಗ್ರಾಮಸ್ಥರು ಹೇಳುತ್ತಾರೆ.</p>.<p>ಶಾಸನ ತಜ್ಞ ಬಿ.ಎಸ್. ರೈಸ್ ಅವರು 1903ರಲ್ಲಿ ಶಾಸನವನ್ನು ಪತ್ತೆಹಚ್ಚಿದರು. ಕಪ್ಪು ಗ್ರಾನೈಟ್ನ 2 ಚಪ್ಪಡಿಗಳು ಜಮೀನಿನಲ್ಲಿ ಪತ್ತೆಯಾದವು. ಎಡಗೈಯಲ್ಲಿ ಬಿಲ್ಲು ಹಾಗೂ ಬಲಗೈಯಲ್ಲಿ ಕತ್ತಿ ಹಿಡಿದು ನಿಂತಿರುವ ಮೂವರು ವೀರರನ್ನು ಒಂದು ಕಲ್ಲಿನಲ್ಲಿ ನೋಡಬಹುದಾಗಿದೆ. ಇದರಲ್ಲಿ ಸಂಸ್ಕೃತದ 2 ಸಾಲುಗಳಿವೆ. ಇನ್ನೊಂದು ಕಲ್ಲಿನಲ್ಲಿ 4 ಸಾಲಿನ ಪೂರ್ವ ಹಳಗನ್ನಡದ ಪದ್ಯ, ಲಿಪಿಕಾರನ ಹೆಸರು ತಮಿಳಿನಲ್ಲಿದೆ.</p>.<p>ಮೊದಲ ಬಾರಿಗೆ ಓದಿಕೆ ಮಾಡಿದ ಬಿ.ಎಲ್. ರೈಸ್ ಅವರು 6 ಸಾಲಿನ ತಮಟಕಲ್ಲು ಶಾಸನವಾಗಿ ಹೊಸ ರೂಪ ನೀಡಿದರು. ಅವರು ‘ಕರ್ನಾಟಕ ಎಪಿಗ್ರಫಿ’ಯ 6ನೇ ಸಂಪುಟದಲ್ಲಿ 42 ಮತ್ತು 43ನೇ ವೀರಗಲ್ಲುಗಳಾಗಿ ದಾಖಲು ಮಾಡಿದರು. ಹಳಗನ್ನಡದ ಜೊತೆಗೆ ಸಂಸ್ಕೃತವೂ ಇದ್ದ ಕಾರಣ ಇದು ಭಾಷಾ ಅಧ್ಯಯನದ ಪ್ರಮುಖ ಆಧಾರವಾಗಿ ಗುರುತಿಸಿಕೊಂಡಿತು. ಸಾಲುಗಳು ಪ್ರಾಸರೂಪದಲ್ಲಿರುವ ಕಾರಣ ಪದ್ಯ, ಛಂದಸ್ಸು ಎಂದೂ ಗುರುತಿಸಲಾಯಿತು.</p>.<p>ಮೊದಲು ಶಾಸನವನ್ನು ಕೃಷಿ ಭೂಮಿಯಲ್ಲೇ ಇಡಲಾಗಿತ್ತು. ಹಲವು ವರ್ಷಗಳ ಕಾಲ ಅಜ್ಞಾತವಾಗಿಯೇ ಉಳಿದಿದ್ದ ಶಾಸನವನ್ನು ಈಚೆಗೆ ಬುದುವಿನ ಮೇಲೆಯೇ ಜಗುಲಿ ಮಾದರಿಯ ಕಟ್ಟಡ ನಿರ್ಮಿಸಿ ಸ್ಥಾಪಿಸಲಾಗಿದೆ. ಜೊತೆಗೆ ಸಣ್ಣ ಚಾವಣಿಯನ್ನೂ ನಿರ್ಮಿಸಲಾಗಿದೆ. ಗ್ರಾಮಸ್ಥರು ಶಾಸನ ಹಾಗೂ ಸಾರಾಂಶವುಳ್ಳ ಬೋರ್ಡ್ ಹಾಕಿದ್ದಾರೆ. ಆದರೆ ಮಳೆ, ಬಿಸಿಲಿನಿಂದಾಗಿ ಕಲ್ಲು ಸವೆಯುತ್ತಿದ್ದು ಕಲ್ಲಿನ ಕಣಗಳು ಉದುರುತ್ತಿದೆ. ಹೀಗಾಗಿ ಮುಚ್ಚಿದ ರೀತಿ ಕಟ್ಟಡ ನಿರ್ಮಿಸಿ ಶಾಸನ ಸಂರಕ್ಷಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.</p>.<div><blockquote>ಶಾಸನ ಸಂರಕ್ಷಣೆಗೆ ನಾವು ಪೀಠ, ಚಾವಣಿ ಮಾಡಿದ್ದೇವೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಲ್ಲಿಗೆ ತೆರಳಲು ರಸ್ತೆ ನಿರ್ಮಿಸಬೇಕು. ಪ್ರವಾಸೋದ್ಯಮ ಇಲಾಖೆ ಇತಿಹಾಸ ಅಳವಡಿಸಬೇಕು </blockquote><span class="attribution">ಜಿ.ಪ್ರಹ್ಲಾದ್, ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ</span></div>.<p><strong>ಹಲ್ಮಡಿ ಶಾಸನದ ರೀತಿ ಸಂರಕ್ಷಣೆ ಅವಶ್ಯ</strong></p><p>'ಇಡೀ ದೇಶದ ಐತಿಹಾಸಿಕ ಪರಂಪರೆಯ ಮೇಲೆ ಬೆಳಕು ಚೆಲ್ಲುವ ತಮಟಕಲ್ಲು ಶಾಸನವನ್ನು ಸಮರ್ಪಕವಾಗಿ ಸಂರಕ್ಷಿಸಿಲ್ಲ. ಕನ್ನಡ ಕಾವ್ಯ ಪರಂಪರೆಯ ಮೂಲ ಬೇರು ಈ ಚಿತ್ರದುರ್ಗ ಜಿಲ್ಲೆ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದ್ದರೂ ಪ್ರಾಚೀನ ಶಾಸನ ಅಜ್ಞಾತವಾಗಿರುವುದು ನೋವಿನ ಸಂಗತಿ' ಎಂದು ಇತಿಹಾಸ ಸಂಶೋಧಕ ಮಹೇಶ್ ಕುಂಚಿಗ ತಿಳಿಸಿದರು.</p><p>'ಹಲ್ಮಡಿ ಶಾಸನವನ್ನು ಬೆಂಗಳೂರಿನ ವಸ್ತು ಸಂಗ್ರಹಾಲಯದಲ್ಲಿಟ್ಟು ಸಂರಕ್ಷಿಸಲಾಗಿದೆ. ಹಲ್ಮಡಿ ಗ್ರಾಮದಲ್ಲಿ ಶಾಸನದ ಪ್ರತಿಕೃತಿಯನ್ನಷ್ಟೇ ಪ್ರದರ್ಶಿಸಲಾಗಿದೆ. ಅದೇ ಮಾದ ತಮಟಕಲ್ಲು ಶಾಸನವನ್ನೂ ಸಂರಕ್ಷಿಸಬೇಕು' ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ</strong>: ಕನ್ನಡದ ಮೊಟ್ಟಮೊದಲ ವೀರಗಲ್ಲು ಶಾಸನ, ಮೊದಲ ಛಂದಸ್ಸಿನ ಶಾಸನ, ಪದ್ಯಕಾವ್ಯ ಶಾಸನ, ಸ್ಮಾರಕ ಶಾಸನ, ಕರ್ನಾಟಕದಲ್ಲಿ ಸಿಕ್ಕಿರುವ ಮೊದಲ ತಮಿಳು ಶಾಸನ ಎಂಬೆಲ್ಲಾ ಮೊದಲುಗಳಿಗೆ ಸಾಕ್ಷಿಯಾಗಿರುವ ‘ತಮಟಕಲ್ಲು ಶಾಸನ’ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಕೃಷಿ ಭೂಮಿಯ ಬದುವಿನ ಮೇಲೆ ಬಂಧಿತವಾಗಿದೆ.</p>.<p>5ನೇ ಶತಮಾನದ ಕದಂಬರ ಕಾಲಕ್ಕೆ ಸೇರಿದ್ದು ಎನ್ನಲಾದ ಈ ಶಾಸನ ಪೂರ್ವ ಹಳಗನ್ನಡದಲ್ಲಿದೆ. ‘ಮಸಿಕಪುರ’ದ ಅಧಿಪತಿ ಗುಣಮಧುರನ ಪರಾಕ್ರಮವನ್ನು ಶಾಸನದಲ್ಲಿ ವರ್ಣಿಸಲಾಗಿದೆ. ಈ ಕಾರಣಕ್ಕೆ ಇದನ್ನು ಕನ್ನಡದ ಮೊದಲ ‘ಪ್ರಶಸ್ತಿ ಶಾಸನ’ ಎಂದೂ ಕರೆಯಲಾಗಿದೆ. ಶಾಸನವನ್ನು ಕೆತ್ತಿದ ಲಿಪಿಕಾರ ‘ಮೊದಲ್ನಾರ್ ಸಾತನ್’ ತಮಿಳಿನಲ್ಲಿ ತನ್ನ ಹೆಸರು ಕೆತ್ತಿರುವ ಕಾರಣ ಇದನ್ನು ಕನ್ನಡ ನಾಡಿನಲ್ಲಿ ಸಿಕ್ಕಿದ ಮೊದಲ ತಮಿಳು ಶಾಸನ ಎಂದೂ ಪರಿಗಣಿಸಲಾಗಿದೆ.</p>.<p>ಕನ್ನಡ ನಾಡಿನ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ಈ ಅಪರೂಪದ ಶಾಸನ ಈಗ ನಿರ್ವಹಣೆ ಇಲ್ಲದೇ ಖಾಸಗಿ ಕೃಷಿ ಭೂಮಿಯ ಮೂಲೆಯಲ್ಲಿರುವ ಬದುವಿನ ಮೇಲೆ ಸಿಲುಕಿದೆ. ನಗರದಿಂದ 8 ಕಿ.ಮೀ ದೂರದಲ್ಲಿರುವ ತಮಟಕಲ್ಲು ಗ್ರಾಮದಿಂದ ಕೊಂಚ ದೂರದಲ್ಲಿ ಈ ಶಾಸನವಿದೆ. ತಮಟಕಲ್ಲಿನಿಂದ ಗುಡ್ಡದರಂಗವ್ವನಹಳ್ಳಿ ಗ್ರಾಮಕ್ಕೆ ತೆರಳುವ ಕಾಲುದಾರಿಯಿಂದ 200 ಮೀಟರ್ ದೂರ ಸಾಗಿದರೆ ಈ ಶಾಸನ ಸಿಗುತ್ತದೆ.</p>.<p>ಕಾಲುದಾರಿಯಲ್ಲಿ ನಿಂತರೆ ಶಾಸನದ ಬಳಿ ಹೋಗುವುದು ಹೇಗೆ ಎಂಬ ಗೊಂದಲ ಕಾಡುತ್ತದೆ. ಏಕೆಂದರೆ ಅಲ್ಲಿಗೆ ತೆರಳಲು ದಾರಿಯೇ ಇಲ್ಲ. ಜಮೀನಿನ ಒಂದು ಮೂಲೆಯಲ್ಲಿ ಆಸ್ತಿ ಮಾಲೀಕರಾದ ಶಾಂತಮ್ಮ ಅವರ ಮನೆ ಇದೆ. ಇನ್ನೊಂದು ಮೂಲೆಯಲ್ಲಿ ತಮಟಕಲ್ಲು ಶಾಸನವಿದೆ. ಶಾಸನದ ಬಳಿ ಹೋಗಬೇಕಾದರೆ ಶಾಂತಮ್ಮ ಅವರ ಮನೆಯ ಹಿಂದಿನ ಜಮೀನು ಮೇಲೆಯೇ ತೆರಳಬೇಕು. ಜಮೀನಿನಲ್ಲಿ ಬೆಳೆ ಮಾಡಿದರೆ ತಮಟಕಲ್ಲು ಶಾಸನ ಸಂಪೂರ್ಣವಾಗಿ ಮುಳುಗಿ ಹೋಗುತ್ತದೆ.</p>.<p>ಆಗ ಶಾಂತಮ್ಮ ಅವರ ಮನೆ ಮುಂದಿನ ಅಡಿಕೆ ತೋಟದ ಬದುವಿನ ಮೇಲೆ ಸ್ವಲ್ಪ ದೂರ ಸಾಗಿ ಮೂಲೆಯಲ್ಲಿರುವ ಶಾಸನದ ಸ್ಥಳಕ್ಕೆ ತೆರಳಬೇಕು. ರಾಜ್ಯದ, ದೇಶದ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಶಾಸನದ ಜಾಗಕ್ಕೆ ತೆರಳಲು ಇಷ್ಟೆಲ್ಲಾ ಸರ್ಕಸ್ ಮಾಡಬೇಕಾ ಎಂಬ ಪ್ರಶ್ನೆ ನೋಡಲು ಬಂದವರಲ್ಲಿ ಮೂಡುತ್ತದೆ. ಜೊತೆಗೆ ಜಿಲ್ಲಾಡಳಿತ, ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹಿಡಿಶಾಪ ಹಾಕುವಂತೆಯೂ ಮಾಡುತ್ತದೆ.</p>.<p>‘ಶಾಸನದ ಮೇಲೆ ತಮಿಳು ಲಿಪಿಯೂ ಇರುವ ಕಾರಣ ತಮಿಳುನಾಡಿನ ಹಲವು ಇತಿಹಾಸ ಸಂಶೋಧಕರು ಇಲ್ಲಿಗೆ ಬರುತ್ತಾರೆ. ಅಲ್ಲಿಗೆ ತೆರಳಲು ದಾರಿಯೇ ಇಲ್ಲದ ಕಾರಣ ಬಹಳ ಬೇಸರ ಪಟ್ಟುಕೊಂಡು ಹೋಗುತ್ತಾರೆ’ ಎಂದು ತಮಟಕಲ್ಲು ಗ್ರಾಮಸ್ಥರು ಹೇಳುತ್ತಾರೆ.</p>.<p>ಶಾಸನ ತಜ್ಞ ಬಿ.ಎಸ್. ರೈಸ್ ಅವರು 1903ರಲ್ಲಿ ಶಾಸನವನ್ನು ಪತ್ತೆಹಚ್ಚಿದರು. ಕಪ್ಪು ಗ್ರಾನೈಟ್ನ 2 ಚಪ್ಪಡಿಗಳು ಜಮೀನಿನಲ್ಲಿ ಪತ್ತೆಯಾದವು. ಎಡಗೈಯಲ್ಲಿ ಬಿಲ್ಲು ಹಾಗೂ ಬಲಗೈಯಲ್ಲಿ ಕತ್ತಿ ಹಿಡಿದು ನಿಂತಿರುವ ಮೂವರು ವೀರರನ್ನು ಒಂದು ಕಲ್ಲಿನಲ್ಲಿ ನೋಡಬಹುದಾಗಿದೆ. ಇದರಲ್ಲಿ ಸಂಸ್ಕೃತದ 2 ಸಾಲುಗಳಿವೆ. ಇನ್ನೊಂದು ಕಲ್ಲಿನಲ್ಲಿ 4 ಸಾಲಿನ ಪೂರ್ವ ಹಳಗನ್ನಡದ ಪದ್ಯ, ಲಿಪಿಕಾರನ ಹೆಸರು ತಮಿಳಿನಲ್ಲಿದೆ.</p>.<p>ಮೊದಲ ಬಾರಿಗೆ ಓದಿಕೆ ಮಾಡಿದ ಬಿ.ಎಲ್. ರೈಸ್ ಅವರು 6 ಸಾಲಿನ ತಮಟಕಲ್ಲು ಶಾಸನವಾಗಿ ಹೊಸ ರೂಪ ನೀಡಿದರು. ಅವರು ‘ಕರ್ನಾಟಕ ಎಪಿಗ್ರಫಿ’ಯ 6ನೇ ಸಂಪುಟದಲ್ಲಿ 42 ಮತ್ತು 43ನೇ ವೀರಗಲ್ಲುಗಳಾಗಿ ದಾಖಲು ಮಾಡಿದರು. ಹಳಗನ್ನಡದ ಜೊತೆಗೆ ಸಂಸ್ಕೃತವೂ ಇದ್ದ ಕಾರಣ ಇದು ಭಾಷಾ ಅಧ್ಯಯನದ ಪ್ರಮುಖ ಆಧಾರವಾಗಿ ಗುರುತಿಸಿಕೊಂಡಿತು. ಸಾಲುಗಳು ಪ್ರಾಸರೂಪದಲ್ಲಿರುವ ಕಾರಣ ಪದ್ಯ, ಛಂದಸ್ಸು ಎಂದೂ ಗುರುತಿಸಲಾಯಿತು.</p>.<p>ಮೊದಲು ಶಾಸನವನ್ನು ಕೃಷಿ ಭೂಮಿಯಲ್ಲೇ ಇಡಲಾಗಿತ್ತು. ಹಲವು ವರ್ಷಗಳ ಕಾಲ ಅಜ್ಞಾತವಾಗಿಯೇ ಉಳಿದಿದ್ದ ಶಾಸನವನ್ನು ಈಚೆಗೆ ಬುದುವಿನ ಮೇಲೆಯೇ ಜಗುಲಿ ಮಾದರಿಯ ಕಟ್ಟಡ ನಿರ್ಮಿಸಿ ಸ್ಥಾಪಿಸಲಾಗಿದೆ. ಜೊತೆಗೆ ಸಣ್ಣ ಚಾವಣಿಯನ್ನೂ ನಿರ್ಮಿಸಲಾಗಿದೆ. ಗ್ರಾಮಸ್ಥರು ಶಾಸನ ಹಾಗೂ ಸಾರಾಂಶವುಳ್ಳ ಬೋರ್ಡ್ ಹಾಕಿದ್ದಾರೆ. ಆದರೆ ಮಳೆ, ಬಿಸಿಲಿನಿಂದಾಗಿ ಕಲ್ಲು ಸವೆಯುತ್ತಿದ್ದು ಕಲ್ಲಿನ ಕಣಗಳು ಉದುರುತ್ತಿದೆ. ಹೀಗಾಗಿ ಮುಚ್ಚಿದ ರೀತಿ ಕಟ್ಟಡ ನಿರ್ಮಿಸಿ ಶಾಸನ ಸಂರಕ್ಷಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.</p>.<div><blockquote>ಶಾಸನ ಸಂರಕ್ಷಣೆಗೆ ನಾವು ಪೀಠ, ಚಾವಣಿ ಮಾಡಿದ್ದೇವೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಲ್ಲಿಗೆ ತೆರಳಲು ರಸ್ತೆ ನಿರ್ಮಿಸಬೇಕು. ಪ್ರವಾಸೋದ್ಯಮ ಇಲಾಖೆ ಇತಿಹಾಸ ಅಳವಡಿಸಬೇಕು </blockquote><span class="attribution">ಜಿ.ಪ್ರಹ್ಲಾದ್, ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ</span></div>.<p><strong>ಹಲ್ಮಡಿ ಶಾಸನದ ರೀತಿ ಸಂರಕ್ಷಣೆ ಅವಶ್ಯ</strong></p><p>'ಇಡೀ ದೇಶದ ಐತಿಹಾಸಿಕ ಪರಂಪರೆಯ ಮೇಲೆ ಬೆಳಕು ಚೆಲ್ಲುವ ತಮಟಕಲ್ಲು ಶಾಸನವನ್ನು ಸಮರ್ಪಕವಾಗಿ ಸಂರಕ್ಷಿಸಿಲ್ಲ. ಕನ್ನಡ ಕಾವ್ಯ ಪರಂಪರೆಯ ಮೂಲ ಬೇರು ಈ ಚಿತ್ರದುರ್ಗ ಜಿಲ್ಲೆ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದ್ದರೂ ಪ್ರಾಚೀನ ಶಾಸನ ಅಜ್ಞಾತವಾಗಿರುವುದು ನೋವಿನ ಸಂಗತಿ' ಎಂದು ಇತಿಹಾಸ ಸಂಶೋಧಕ ಮಹೇಶ್ ಕುಂಚಿಗ ತಿಳಿಸಿದರು.</p><p>'ಹಲ್ಮಡಿ ಶಾಸನವನ್ನು ಬೆಂಗಳೂರಿನ ವಸ್ತು ಸಂಗ್ರಹಾಲಯದಲ್ಲಿಟ್ಟು ಸಂರಕ್ಷಿಸಲಾಗಿದೆ. ಹಲ್ಮಡಿ ಗ್ರಾಮದಲ್ಲಿ ಶಾಸನದ ಪ್ರತಿಕೃತಿಯನ್ನಷ್ಟೇ ಪ್ರದರ್ಶಿಸಲಾಗಿದೆ. ಅದೇ ಮಾದ ತಮಟಕಲ್ಲು ಶಾಸನವನ್ನೂ ಸಂರಕ್ಷಿಸಬೇಕು' ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>