<p><strong>ಚಿತ್ರದುರ್ಗ:</strong> ಕಲ್ಲಿನಕೋಟೆಯ ತಟದಲ್ಲಿರುವ ಐತಿಹಾಸಿಕ ತಿಮ್ಮಣ್ಣನಾಯಕನ ಕೆರೆಯಲ್ಲಿ ಜೀವಜಲ ಖಾಲಿಯಾಗುತ್ತಿದ್ದು, ಅಲ್ಲಿದ್ದ ನೂರಾರು ಮೀನುಗಳ ಮಾರಣಹೋಮವಾಗಿದೆ. ನಿತ್ಯ ಮುಂಜಾನೆ, ಸಂಜೆ ವಿಹಾರಕ್ಕೆ ತೆರಳುತ್ತಿರುವ ಸಾರ್ವಜನಿಕರು ಮೀನುಗಳು ಸಾಯುತ್ತಿರುವುದನ್ನು ಕಂಡು ಮರುಗುತ್ತಿದ್ದಾರೆ.</p>.<p>ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರುತ್ತಿದ್ದು, ಕೆರೆಯ ಒಡಲಲ್ಲಿದ್ದ ಅಲ್ಪಪ್ರಮಾಣದ ನೀರು ಪಾತಾಳಕ್ಕೆ ಇಳಿಯುತ್ತಿದೆ. ಕೆರೆಯೊಳಗಿನ ಸಣ್ಣ ಪುಟ್ಟ ಗುಂಡಿಯೊಳಗಿದ್ದ ನೀರು ಇಂಗಿ ಹೋಗುತ್ತಿದೆ. ನೀರು ಕಡಿಮೆಯಾಗುತ್ತಿದ್ದಂತೆ ಮೀನುಗಳು ಜೀವ ಚೆಲ್ಲುತ್ತಿವೆ. ಕೆರೆಯ ನಡುವೆ ಅವು ಮಣ್ಣಾಗಿರುವ ದೃಶ್ಯಗಳು ವಾಯುವಿಹಾರಿಗಳ ಮನ ಕಲಕುವಂತೆ ಮಾಡಿದೆ. ಇನ್ನೊಂದು ವಾರ ಮಳೆರಾಯ ಕೃಪೆ ತೋರಿಸದಿದ್ದರೆ ಅಳಿದುಳಿದ ಮೀನುಗಳೂ ಸಾಯುತ್ತವೆ ಎಂಬುದು ಸ್ಥಳೀಯರ ಆತಂಕ.</p>.<p>ನಾಯಕ ವಂಶದ ಮೊದಲ ಪಾಳೇಗಾರ ಮತ್ತಿ ತಿಮ್ಮಣ್ಣ ನಾಯಕ, ಕಲ್ಲಿನಕೋಟೆ ಹಾಗೂ ಜೋಗಿಮಟ್ಟಿ ಬೆಟ್ಟಗಳ ನಡುವಿನ ಆಯಕಟ್ಟಿನ ಜಾಗದಲ್ಲಿ ಈ ಕೆರೆ ಕಟ್ಟಿಸಿದ್ದಾರೆ. 1984ರವರೆಗೂ ಈ ಕೆರೆಯ ನೀರು ಕೋಟೆನಗರಿಯ ಜನರ ಕುಡಿಯುವ ನೀರಿನ ಆಸರೆಯಾಗಿತ್ತು. ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ಸ್ಥಳೀಯ ಮೀನುಗಾರರು ಅಲ್ಲಿ ಮೀನು ಸಾಕಣೆ ಮಾಡುತ್ತಿದ್ದರು. ತಿಮ್ಮಣ್ಣನಾಯಕನ ಕೆರೆ ಮೀನಿನ ರುಚಿ ದುರ್ಗದ ಜನರಿಗೆ ವಿಶೇಷ ಅಭಿರುಚಿ ತಂದುಕೊಟ್ಟಿತ್ತು.</p>.<p>ಜೋಗಿಮಟ್ಟಿ ವನ್ಯಜೀವಿ ಧಾಮ ಘೋಷಣೆಯಾದ ನಂತರ ಮತ್ತಿ ತಿಮ್ಮಣ್ಣ ನಾಯಕನ ಕೆರೆಯನ್ನು ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿತು. ಕೆರೆ ತುಂಬಿಸಲು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಬೇಸಿಗೆಯಲ್ಲಿ ಒಣಗುತ್ತಾ ಬಂತು. ನಂತರ ಇಲ್ಲಿ ಮೀನು ಸಾಕಣೆ ಸಂಪೂರ್ಣ ನಿಂತು ಹೋಯಿತು.</p>.<p>‘ಕೆರೆ ಅರಣ್ಯ ಇಲಾಖೆ ಪಾಲಾದರೂ ಕೆಲವರು ಅನಧಿಕೃತವಾಗಿ ಮೀನು ಮರಿ ಬಿಟ್ಟು, ಯಾರಿಗೂ ತಿಳಿಯದಂತೆ ಮೀನು ಹಿಡಿಯುತ್ತಿದ್ದರು. ಅನಧಿಕೃತವಾಗಿ ಮೀನು ಮರಿ ಬಿಟ್ಟ ಪರಿಣಾಮ ಈಗ ನೀರಿಲ್ಲದೇ ಸಾಯುವಂತಹ ಪರಿಸ್ಥಿತಿ ಬಂದಿದೆ. ಯಾವುದಾದರೊಂದು ಮೂಲದಿಂದ ಕೆರೆಗೆ ನೀರು ಬರುವಂತೆ ಮಾಡಬೇಕು’ ಎಂದು ಸ್ಥಳೀಯ ಮೀನುಗಾರ ಸಂಘಟನೆಯ ಸದಸ್ಯರೊಬ್ಬರ ಆಗ್ರಹವಾಗಿದೆ.</p>.<p><strong>ಜಲಾನಯನ ಬಂದ್:</strong> ‘ನಾಯಕ ಅರಸರ ಕಾಲದಿಂದಲೂ ಬೆಟ್ಟಗಳ ಮೇಲಿಂದ ಹರಿದು ಬರುವ ನೀರು ಹಳ್ಳ, ತೊರೆಗಳ ಮೂಲಕ ತಿಮ್ಮಣ್ಣನಾಯಕನ ಕೆರೆಗೆ ಸೇರುವಂತೆ ಸಂಪರ್ಕ ಕಲ್ಪಿಸಲಾಗಿತ್ತು. ಭೀಕರ ಬರ ಬಂದರೂ ನೀರು ಬತ್ತುತ್ತಿರಲಿಲ್ಲ. ಆದರೆ, ಈಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಚೆಕ್ ಡ್ಯಾಂ ನಿರ್ಮಾಣದ ಹೆಸರಿನಲ್ಲಿ ಅರಣ್ಯ ವ್ಯಾಪ್ತಿಯಲ್ಲಿದ್ದ ಹಳ್ಳಗಳ ನೀರನ್ನು ಹಿಡಿದಿಟ್ಟ ಪರಿಣಾಮ ನೀರು ಹರಿದು ಬಾರದಂತಾಗಿದೆ. ಹೀಗಾಗಿ ಬೇಸಿಗೆಯಲ್ಲಿ ಕೆರೆಯಲ್ಲಿ ನೀರು ಖಾಲಿಯಾಗಿ ಮೀನುಗಳು ಸಾಯುತ್ತಿವೆ’ ಎಂದು ಸ್ಥಳೀಯರು ಹೇಳುತ್ತಾರೆ.</p>.<p>‘ಕೆರೆಯಿಂದ ನಗರಕ್ಕೆ ನೀರು ಪೂರೈಸಲು ಇದ್ದ ತೂಬಿಗೆ ಹಿತ್ತಾಳೆಯ ವಾಲ್ವ್ ಅಳವಡಿಸಲಾಗಿತ್ತು. ನಾಯಕರ ಕಾಲದಲ್ಲಿ ಅಳವಡಿಸಿದ್ದ ವಾಲ್ವ್ಗಳು ಇತ್ತೀಚಿನವರೆಗೂ ಸುಸ್ಥಿತಿಯಲ್ಲಿದ್ದವು. ಕೋಟೆಯ ಪಾದಗುಡಿ ಬಳಿಯ ಫಿಲ್ಟರ್ ಹೌಸ್ಗೆ ಬರುತ್ತಿದ್ದ ನೀರು ನಂತರ ನಗರಕ್ಕೆ ಸರಬರಾಜಾಗುತ್ತಿತ್ತು. ಈಗ ಕೆರೆ ಖಾಲಿಯಾಗಿದ್ದು ದುರ್ಗದ ಜನರಿಗೆ ನೀರಿನ ಕೊರತೆಯಾಗಿದೆ’ ಎಂದು ಹಿರಿಯ ನಾಗರಿಕರಾದ ಎಸ್.ಪರಮೇಶ್ವರಪ್ಪ ತಿಳಿಸಿದರು.</p>.<div><blockquote>ಬಿಸಿಲು ಹೆಚ್ಚುತ್ತಿರುವ ಕಾರಣ ಮೀನುಗಳಿಗೆ ಅಪಾಯ ಎದುರಾಗಿದೆ. ತಿಮ್ಮಣ್ಣನಾಯಕನ ಕೆರೆಯಲ್ಲಿ ಮೀನುಗಳ ಸಂರಕ್ಷಣೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಟಿ.ವೆಂಕಟೇಶ್, ಜಿಲ್ಲಾಧಿಕಾರಿ</blockquote><span class="attribution"></span></div>.<p><strong>ಭದ್ರಾ ನೀರು ಹರಿಸಬಹುದೇ?</strong></p><p>ನೂರು ಹೆಕ್ಟೇರ್ ವಿಶಾಲ ಪ್ರದೇಶದಲ್ಲಿರುವ ಐತಿಹಾಸಿಕ ತಿಮ್ಮಣ್ಣನಾಯಕನ ಕೆರೆ ಉಳಿಸಿಕೊಳ್ಳಲು ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗೆ ನೀರು ತುಂಬಿಸಬಹುದೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.</p><p>‘ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಇದ್ದರೆ ಭದ್ರಾ ಕಾಲುವೆ ನೀರನ್ನು ತಿಮ್ಮಣ್ಣನಾಯಕನ ಕೆರೆಗೂ ತಿರುಗಿಸಬಹುದು. ಆದರೆ ಸರ್ಕಾರಗಳ ನಿರಾಸಕ್ತಿಯಿಂದಾಗಿ ಇಲ್ಲಿಯವರೆಗೂ ಜಿಲ್ಲೆಗೆ ಭದ್ರಾ ನೀರು ಹರಿದು ಬಂದಿಲ್ಲ’ ಎಂದು ಹೋರಾಟಗಾರ ಜೆ.ಯಾದವರೆಡ್ಡಿ ಹೇಳಿದರು.</p><p>‘ತಿಮ್ಮಣ್ಣನಾಯಕನ ಕೆರೆಯ ಬಳಿಯೇ ಇರುವ ದೊಡ್ಡಣ್ಣನಾಯಕನ ಕೆರೆಯನ್ನು ಜೀರ್ಣೋದ್ಧಾರ ಮಾಡಿದರೆ ತಿಮ್ಮಣ್ಣನಾಯಕನ ಕೆರೆಗೆ ಜೀವಜಲ ತುಂಬಿಸಬಹುದು. ದೊಡ್ಡಣ್ಣನಾಯಕನ ಕೆರೆಗೆ<br>ಕಾಯಕಲ್ಪ ನೀಡಲು ಅರಣ್ಯ ಇಲಾಖೆ ಯೋಜನೆ ರೂಪಿಸಬೇಕು’ ಎಂದು ಜಲತಜ್ಞ ದೇವರಾಜ ರೆಡ್ಡಿ ಒತ್ತಾಯಿಸಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ಕಲ್ಲಿನಕೋಟೆಯ ತಟದಲ್ಲಿರುವ ಐತಿಹಾಸಿಕ ತಿಮ್ಮಣ್ಣನಾಯಕನ ಕೆರೆಯಲ್ಲಿ ಜೀವಜಲ ಖಾಲಿಯಾಗುತ್ತಿದ್ದು, ಅಲ್ಲಿದ್ದ ನೂರಾರು ಮೀನುಗಳ ಮಾರಣಹೋಮವಾಗಿದೆ. ನಿತ್ಯ ಮುಂಜಾನೆ, ಸಂಜೆ ವಿಹಾರಕ್ಕೆ ತೆರಳುತ್ತಿರುವ ಸಾರ್ವಜನಿಕರು ಮೀನುಗಳು ಸಾಯುತ್ತಿರುವುದನ್ನು ಕಂಡು ಮರುಗುತ್ತಿದ್ದಾರೆ.</p>.<p>ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರುತ್ತಿದ್ದು, ಕೆರೆಯ ಒಡಲಲ್ಲಿದ್ದ ಅಲ್ಪಪ್ರಮಾಣದ ನೀರು ಪಾತಾಳಕ್ಕೆ ಇಳಿಯುತ್ತಿದೆ. ಕೆರೆಯೊಳಗಿನ ಸಣ್ಣ ಪುಟ್ಟ ಗುಂಡಿಯೊಳಗಿದ್ದ ನೀರು ಇಂಗಿ ಹೋಗುತ್ತಿದೆ. ನೀರು ಕಡಿಮೆಯಾಗುತ್ತಿದ್ದಂತೆ ಮೀನುಗಳು ಜೀವ ಚೆಲ್ಲುತ್ತಿವೆ. ಕೆರೆಯ ನಡುವೆ ಅವು ಮಣ್ಣಾಗಿರುವ ದೃಶ್ಯಗಳು ವಾಯುವಿಹಾರಿಗಳ ಮನ ಕಲಕುವಂತೆ ಮಾಡಿದೆ. ಇನ್ನೊಂದು ವಾರ ಮಳೆರಾಯ ಕೃಪೆ ತೋರಿಸದಿದ್ದರೆ ಅಳಿದುಳಿದ ಮೀನುಗಳೂ ಸಾಯುತ್ತವೆ ಎಂಬುದು ಸ್ಥಳೀಯರ ಆತಂಕ.</p>.<p>ನಾಯಕ ವಂಶದ ಮೊದಲ ಪಾಳೇಗಾರ ಮತ್ತಿ ತಿಮ್ಮಣ್ಣ ನಾಯಕ, ಕಲ್ಲಿನಕೋಟೆ ಹಾಗೂ ಜೋಗಿಮಟ್ಟಿ ಬೆಟ್ಟಗಳ ನಡುವಿನ ಆಯಕಟ್ಟಿನ ಜಾಗದಲ್ಲಿ ಈ ಕೆರೆ ಕಟ್ಟಿಸಿದ್ದಾರೆ. 1984ರವರೆಗೂ ಈ ಕೆರೆಯ ನೀರು ಕೋಟೆನಗರಿಯ ಜನರ ಕುಡಿಯುವ ನೀರಿನ ಆಸರೆಯಾಗಿತ್ತು. ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ಸ್ಥಳೀಯ ಮೀನುಗಾರರು ಅಲ್ಲಿ ಮೀನು ಸಾಕಣೆ ಮಾಡುತ್ತಿದ್ದರು. ತಿಮ್ಮಣ್ಣನಾಯಕನ ಕೆರೆ ಮೀನಿನ ರುಚಿ ದುರ್ಗದ ಜನರಿಗೆ ವಿಶೇಷ ಅಭಿರುಚಿ ತಂದುಕೊಟ್ಟಿತ್ತು.</p>.<p>ಜೋಗಿಮಟ್ಟಿ ವನ್ಯಜೀವಿ ಧಾಮ ಘೋಷಣೆಯಾದ ನಂತರ ಮತ್ತಿ ತಿಮ್ಮಣ್ಣ ನಾಯಕನ ಕೆರೆಯನ್ನು ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿತು. ಕೆರೆ ತುಂಬಿಸಲು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಬೇಸಿಗೆಯಲ್ಲಿ ಒಣಗುತ್ತಾ ಬಂತು. ನಂತರ ಇಲ್ಲಿ ಮೀನು ಸಾಕಣೆ ಸಂಪೂರ್ಣ ನಿಂತು ಹೋಯಿತು.</p>.<p>‘ಕೆರೆ ಅರಣ್ಯ ಇಲಾಖೆ ಪಾಲಾದರೂ ಕೆಲವರು ಅನಧಿಕೃತವಾಗಿ ಮೀನು ಮರಿ ಬಿಟ್ಟು, ಯಾರಿಗೂ ತಿಳಿಯದಂತೆ ಮೀನು ಹಿಡಿಯುತ್ತಿದ್ದರು. ಅನಧಿಕೃತವಾಗಿ ಮೀನು ಮರಿ ಬಿಟ್ಟ ಪರಿಣಾಮ ಈಗ ನೀರಿಲ್ಲದೇ ಸಾಯುವಂತಹ ಪರಿಸ್ಥಿತಿ ಬಂದಿದೆ. ಯಾವುದಾದರೊಂದು ಮೂಲದಿಂದ ಕೆರೆಗೆ ನೀರು ಬರುವಂತೆ ಮಾಡಬೇಕು’ ಎಂದು ಸ್ಥಳೀಯ ಮೀನುಗಾರ ಸಂಘಟನೆಯ ಸದಸ್ಯರೊಬ್ಬರ ಆಗ್ರಹವಾಗಿದೆ.</p>.<p><strong>ಜಲಾನಯನ ಬಂದ್:</strong> ‘ನಾಯಕ ಅರಸರ ಕಾಲದಿಂದಲೂ ಬೆಟ್ಟಗಳ ಮೇಲಿಂದ ಹರಿದು ಬರುವ ನೀರು ಹಳ್ಳ, ತೊರೆಗಳ ಮೂಲಕ ತಿಮ್ಮಣ್ಣನಾಯಕನ ಕೆರೆಗೆ ಸೇರುವಂತೆ ಸಂಪರ್ಕ ಕಲ್ಪಿಸಲಾಗಿತ್ತು. ಭೀಕರ ಬರ ಬಂದರೂ ನೀರು ಬತ್ತುತ್ತಿರಲಿಲ್ಲ. ಆದರೆ, ಈಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಚೆಕ್ ಡ್ಯಾಂ ನಿರ್ಮಾಣದ ಹೆಸರಿನಲ್ಲಿ ಅರಣ್ಯ ವ್ಯಾಪ್ತಿಯಲ್ಲಿದ್ದ ಹಳ್ಳಗಳ ನೀರನ್ನು ಹಿಡಿದಿಟ್ಟ ಪರಿಣಾಮ ನೀರು ಹರಿದು ಬಾರದಂತಾಗಿದೆ. ಹೀಗಾಗಿ ಬೇಸಿಗೆಯಲ್ಲಿ ಕೆರೆಯಲ್ಲಿ ನೀರು ಖಾಲಿಯಾಗಿ ಮೀನುಗಳು ಸಾಯುತ್ತಿವೆ’ ಎಂದು ಸ್ಥಳೀಯರು ಹೇಳುತ್ತಾರೆ.</p>.<p>‘ಕೆರೆಯಿಂದ ನಗರಕ್ಕೆ ನೀರು ಪೂರೈಸಲು ಇದ್ದ ತೂಬಿಗೆ ಹಿತ್ತಾಳೆಯ ವಾಲ್ವ್ ಅಳವಡಿಸಲಾಗಿತ್ತು. ನಾಯಕರ ಕಾಲದಲ್ಲಿ ಅಳವಡಿಸಿದ್ದ ವಾಲ್ವ್ಗಳು ಇತ್ತೀಚಿನವರೆಗೂ ಸುಸ್ಥಿತಿಯಲ್ಲಿದ್ದವು. ಕೋಟೆಯ ಪಾದಗುಡಿ ಬಳಿಯ ಫಿಲ್ಟರ್ ಹೌಸ್ಗೆ ಬರುತ್ತಿದ್ದ ನೀರು ನಂತರ ನಗರಕ್ಕೆ ಸರಬರಾಜಾಗುತ್ತಿತ್ತು. ಈಗ ಕೆರೆ ಖಾಲಿಯಾಗಿದ್ದು ದುರ್ಗದ ಜನರಿಗೆ ನೀರಿನ ಕೊರತೆಯಾಗಿದೆ’ ಎಂದು ಹಿರಿಯ ನಾಗರಿಕರಾದ ಎಸ್.ಪರಮೇಶ್ವರಪ್ಪ ತಿಳಿಸಿದರು.</p>.<div><blockquote>ಬಿಸಿಲು ಹೆಚ್ಚುತ್ತಿರುವ ಕಾರಣ ಮೀನುಗಳಿಗೆ ಅಪಾಯ ಎದುರಾಗಿದೆ. ತಿಮ್ಮಣ್ಣನಾಯಕನ ಕೆರೆಯಲ್ಲಿ ಮೀನುಗಳ ಸಂರಕ್ಷಣೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಟಿ.ವೆಂಕಟೇಶ್, ಜಿಲ್ಲಾಧಿಕಾರಿ</blockquote><span class="attribution"></span></div>.<p><strong>ಭದ್ರಾ ನೀರು ಹರಿಸಬಹುದೇ?</strong></p><p>ನೂರು ಹೆಕ್ಟೇರ್ ವಿಶಾಲ ಪ್ರದೇಶದಲ್ಲಿರುವ ಐತಿಹಾಸಿಕ ತಿಮ್ಮಣ್ಣನಾಯಕನ ಕೆರೆ ಉಳಿಸಿಕೊಳ್ಳಲು ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗೆ ನೀರು ತುಂಬಿಸಬಹುದೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.</p><p>‘ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಇದ್ದರೆ ಭದ್ರಾ ಕಾಲುವೆ ನೀರನ್ನು ತಿಮ್ಮಣ್ಣನಾಯಕನ ಕೆರೆಗೂ ತಿರುಗಿಸಬಹುದು. ಆದರೆ ಸರ್ಕಾರಗಳ ನಿರಾಸಕ್ತಿಯಿಂದಾಗಿ ಇಲ್ಲಿಯವರೆಗೂ ಜಿಲ್ಲೆಗೆ ಭದ್ರಾ ನೀರು ಹರಿದು ಬಂದಿಲ್ಲ’ ಎಂದು ಹೋರಾಟಗಾರ ಜೆ.ಯಾದವರೆಡ್ಡಿ ಹೇಳಿದರು.</p><p>‘ತಿಮ್ಮಣ್ಣನಾಯಕನ ಕೆರೆಯ ಬಳಿಯೇ ಇರುವ ದೊಡ್ಡಣ್ಣನಾಯಕನ ಕೆರೆಯನ್ನು ಜೀರ್ಣೋದ್ಧಾರ ಮಾಡಿದರೆ ತಿಮ್ಮಣ್ಣನಾಯಕನ ಕೆರೆಗೆ ಜೀವಜಲ ತುಂಬಿಸಬಹುದು. ದೊಡ್ಡಣ್ಣನಾಯಕನ ಕೆರೆಗೆ<br>ಕಾಯಕಲ್ಪ ನೀಡಲು ಅರಣ್ಯ ಇಲಾಖೆ ಯೋಜನೆ ರೂಪಿಸಬೇಕು’ ಎಂದು ಜಲತಜ್ಞ ದೇವರಾಜ ರೆಡ್ಡಿ ಒತ್ತಾಯಿಸಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>