<p><strong>ಚಿತ್ರದುರ್ಗ:</strong> ನೂತನ ಸಂವತ್ಸರ ಆರಂಭದ ‘ಯುಗಾದಿ’ ಹಬ್ಬವನ್ನು ಸ್ವಾಗತಿಸಲು ಕೋಟೆನಾಡಿನ ಜನರು ಸಕಲ ಸಿದ್ಧತೆ ನಡೆಸಿದ್ದಾರೆ. ಹಬ್ಬದ ಖರೀದಿ ಭರಾಟೆ ಕಳೆದೊಂದು ವಾರದಿಂದ ನಡೆಯುತ್ತಿದ್ದು ಮಳೆಯ ಆತಂಕದಲ್ಲಿ ಬುಧವಾರ ಕೊಂಚ ಬಿರುಸಾಯಿತು.</p>.<p>ಬೆಳಿಗ್ಗೆ ವಾಹನಗಳನ್ನು ಸ್ವಚ್ಛಗೊಳಿಸಿ ಮನೆಗಳಲ್ಲಿ ಯುಗಾದಿ ಅಮಾವಾಸ್ಯೆ ಪೂಜೆ ಮುಗಿಸಿದ ಜನರು ಮಾರುಕಟ್ಟೆಗೆ ಲಗ್ಗೆ ಹಾಕಿದರು. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಅಲ್ಪಸ್ವಲ್ಪ ಮಳೆಯಾಗುತ್ತಿದ್ದು ತಾಪಮಾನದಲ್ಲಿ ಇಳಿಕೆಯಾಗಿದೆ. ಬುಧವಾರ ಸಂಜೆ ಸುರಿದ ಅಲ್ಪ ಮಳೆಯಿಂದ ಹಬ್ಬದ ವ್ಯಾಪಾರ ವಹಿವಾಟು ಒಂದಿಷ್ಟು ಅಸ್ತವ್ಯಸ್ತವಾಯಿತು.</p>.<p>ಮಧ್ಯಾಹ್ನ 12ರ ವೇಳೆಗೆ ನಗರದ ಗಾಂಧಿ ವೃತ್ತ, ಮೆದೇಹಳ್ಳಿ ರಸ್ತೆ, ಆನೆ ಬಾಗಿಲು, ಸಂತೆಹೊಂಡದ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂದಿತು. ರಸ್ತೆಗಳಷ್ಟೇ ಅಲ್ಲದೆ, ಪಾದಚಾರಿ ಮಾರ್ಗಗಳು ಸಹ ಜನರಿಂದ ತುಂಬಿದ್ದವು. ಲಕ್ಷ್ಮೀ ಬಜಾರ್, ಹಳೇ ರೂಪವಾಣಿ ಚಿತ್ರಮಂದಿರದ ರಸ್ತೆ, ವಾಸವಿ ಮಹಲ್, ಬಿಡಿ ರಸ್ತೆಯ ಬಟ್ಟೆ ಅಂಗಡಿಗಳಲ್ಲಿ ಖರೀದಿ ಜೋರಾಗಿ ಸಾಗಿತು.</p>.<p>ಕುಟುಂಬ ಸಮೇತರಾಗಿ ಮಾರುಕಟ್ಟೆಗೆ ಬಂದಿದ್ದ ಗ್ರಾಮೀಣರು ಮನೆಯ ಚಿಕ್ಕ ಮಗುವಿನಿಂದ ಹಿರಿಯವರೆಗೂ ಬಟ್ಟೆ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಾವಿನ ತೋರಣ, ಬೇವಿನ ಸೊಪ್ಪು, ಉಡುದಾರ, ಹೂವು, ಹಣ್ಣು, ಬಾಳೆ ಎಲೆ, ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸಿದರು.</p>.<p>ಹೂವು, ಹಣ್ಣಿನ ಬೆಲೆ ಮಾತ್ರ ಗಗನಕ್ಕೇರಿತ್ತು. ಬಳೆ ಸೇರಿದಂತೆ ಮಹಿಳೆಯರ ಅಲಂಕಾರಿಕ ವಸ್ತುಗಳ ಖರೀದಿ ಜೋರಾಗಿತ್ತು. ರಂಗೋಲಿ, ಬಣ್ಣದ ಪುಡಿ ಮಾರಾಟ ಜೋರಾಗಿಯೇ ನಡೆಯಿತು. </p>.<p>ಬಹುತೇಕ ಬಟ್ಟೆ ಅಂಗಡಿಗಳು ಜನರಿಂದ ತುಂಬಿದ್ದವು. ಇದರ ನಡುವೆ ರಸ್ತೆ ಬದಿ ಬಟ್ಟೆ ವ್ಯಾಪಾರ ಕಂಡು ಬಂದಿತು. ಬಿ.ಡಿ. ರಸ್ತೆ, ವಾಸವಿ ಮಹಲ್ ರಸ್ತೆ, ಲಕ್ಷ್ಮಿ ಬಜಾರ್ ಮಾರ್ಗದ ಇಕ್ಕೆಲಗಳಲ್ಲೂ ಸಿದ್ಧ ಉಡುಪುಗಳ ವ್ಯಾಪಾರ ಜೋರಾಗಿಯೇ ನಡೆಯಿತು. ಯುವ ಸಮುದಾಯದಿಂದ ಜೀನ್ಸ್ ಪ್ಯಾಂಟ್, ರೆಡಿಮೇಡ್ ಶರ್ಟ್, ಟೀ ಶರ್ಟ್ಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿತು. ರಾತ್ರಿ 10 ಗಂಟೆ ಸಮೀಪಿಸಿದರೂ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ಸಾಗಿತ್ತು.</p>.<p>ಗಾಂಧಿ ವೃತ್ತದ ಸುತ್ತಲೂ ವ್ಯಾಪಾರ ವಹಿವಾಟು ನಡೆದ ಕಾರಣ ಎಸ್ಬಿಐ ವೃತ್ತದವರೆಗೂ ವಾಹನ ದಟ್ಟಣೆ ಹೆಚ್ಚಾಗಿತ್ತು. ಈ ರಸ್ತೆಯ ಮಾರ್ಗದುದ್ದಕ್ಕೂ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಉಂಟಾಯಿತು. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ತೀವ್ರ ಸಮಸ್ಯೆ ಎದುರಿಸಿದರು.</p>.<h2> ದೇಗುಲಗಳಲ್ಲಿ ಸಕಲ ಸಿದ್ಧತೆ </h2><p>ಯುಗಾದಿಯನ್ನು ವಿಶೇಷವಾಗಿ ಸ್ವಾಗತಿಸಲು ನಗರದ ದೇವಸ್ಥಾನಗಳಲ್ಲಿ ಸಿದ್ಧತೆ ನಡೆಸಲಾಗಿದೆ. ಬಹುತೇಕ ದೇಗುಲಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ದೇವರ ದರ್ಶನ ಪಡೆಯಲು ಎಲ್ಲಿಯೂ ಸಮಸ್ಯೆ ಆಗದಂತೆ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಮುಂಜಾನೆಯಿಂದಲೇ ಅಭಿಷೇಕ ಅರ್ಚನೆ ಸೇರಿದಂತೆ ವಿಶೇಷ ಪೂಜೆಗಳು ನೆರವೇರಲಿವೆ. ನಗರದ ನೀಲಕಂಠೇಶ್ವರ ದೇವಸ್ಥಾನ ಉತ್ಸವಾಂಬ ದೇವಸ್ಥಾನ ಮೇಲುದುರ್ಗದ ಏಕನಾಥೇಶ್ವರಿ ಗಣಪತಿ ಹಿಡಂಬೇಶ್ವರ ಸಂಪಿಗೆ ಸಿದ್ದೇಶ್ವರ ಬರಗೇರಮ್ಮ ಕಣಿವೆ ಮಾರಮ್ಮ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ನೂತನ ಸಂವತ್ಸರ ಆರಂಭದ ‘ಯುಗಾದಿ’ ಹಬ್ಬವನ್ನು ಸ್ವಾಗತಿಸಲು ಕೋಟೆನಾಡಿನ ಜನರು ಸಕಲ ಸಿದ್ಧತೆ ನಡೆಸಿದ್ದಾರೆ. ಹಬ್ಬದ ಖರೀದಿ ಭರಾಟೆ ಕಳೆದೊಂದು ವಾರದಿಂದ ನಡೆಯುತ್ತಿದ್ದು ಮಳೆಯ ಆತಂಕದಲ್ಲಿ ಬುಧವಾರ ಕೊಂಚ ಬಿರುಸಾಯಿತು.</p>.<p>ಬೆಳಿಗ್ಗೆ ವಾಹನಗಳನ್ನು ಸ್ವಚ್ಛಗೊಳಿಸಿ ಮನೆಗಳಲ್ಲಿ ಯುಗಾದಿ ಅಮಾವಾಸ್ಯೆ ಪೂಜೆ ಮುಗಿಸಿದ ಜನರು ಮಾರುಕಟ್ಟೆಗೆ ಲಗ್ಗೆ ಹಾಕಿದರು. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಅಲ್ಪಸ್ವಲ್ಪ ಮಳೆಯಾಗುತ್ತಿದ್ದು ತಾಪಮಾನದಲ್ಲಿ ಇಳಿಕೆಯಾಗಿದೆ. ಬುಧವಾರ ಸಂಜೆ ಸುರಿದ ಅಲ್ಪ ಮಳೆಯಿಂದ ಹಬ್ಬದ ವ್ಯಾಪಾರ ವಹಿವಾಟು ಒಂದಿಷ್ಟು ಅಸ್ತವ್ಯಸ್ತವಾಯಿತು.</p>.<p>ಮಧ್ಯಾಹ್ನ 12ರ ವೇಳೆಗೆ ನಗರದ ಗಾಂಧಿ ವೃತ್ತ, ಮೆದೇಹಳ್ಳಿ ರಸ್ತೆ, ಆನೆ ಬಾಗಿಲು, ಸಂತೆಹೊಂಡದ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂದಿತು. ರಸ್ತೆಗಳಷ್ಟೇ ಅಲ್ಲದೆ, ಪಾದಚಾರಿ ಮಾರ್ಗಗಳು ಸಹ ಜನರಿಂದ ತುಂಬಿದ್ದವು. ಲಕ್ಷ್ಮೀ ಬಜಾರ್, ಹಳೇ ರೂಪವಾಣಿ ಚಿತ್ರಮಂದಿರದ ರಸ್ತೆ, ವಾಸವಿ ಮಹಲ್, ಬಿಡಿ ರಸ್ತೆಯ ಬಟ್ಟೆ ಅಂಗಡಿಗಳಲ್ಲಿ ಖರೀದಿ ಜೋರಾಗಿ ಸಾಗಿತು.</p>.<p>ಕುಟುಂಬ ಸಮೇತರಾಗಿ ಮಾರುಕಟ್ಟೆಗೆ ಬಂದಿದ್ದ ಗ್ರಾಮೀಣರು ಮನೆಯ ಚಿಕ್ಕ ಮಗುವಿನಿಂದ ಹಿರಿಯವರೆಗೂ ಬಟ್ಟೆ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಾವಿನ ತೋರಣ, ಬೇವಿನ ಸೊಪ್ಪು, ಉಡುದಾರ, ಹೂವು, ಹಣ್ಣು, ಬಾಳೆ ಎಲೆ, ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸಿದರು.</p>.<p>ಹೂವು, ಹಣ್ಣಿನ ಬೆಲೆ ಮಾತ್ರ ಗಗನಕ್ಕೇರಿತ್ತು. ಬಳೆ ಸೇರಿದಂತೆ ಮಹಿಳೆಯರ ಅಲಂಕಾರಿಕ ವಸ್ತುಗಳ ಖರೀದಿ ಜೋರಾಗಿತ್ತು. ರಂಗೋಲಿ, ಬಣ್ಣದ ಪುಡಿ ಮಾರಾಟ ಜೋರಾಗಿಯೇ ನಡೆಯಿತು. </p>.<p>ಬಹುತೇಕ ಬಟ್ಟೆ ಅಂಗಡಿಗಳು ಜನರಿಂದ ತುಂಬಿದ್ದವು. ಇದರ ನಡುವೆ ರಸ್ತೆ ಬದಿ ಬಟ್ಟೆ ವ್ಯಾಪಾರ ಕಂಡು ಬಂದಿತು. ಬಿ.ಡಿ. ರಸ್ತೆ, ವಾಸವಿ ಮಹಲ್ ರಸ್ತೆ, ಲಕ್ಷ್ಮಿ ಬಜಾರ್ ಮಾರ್ಗದ ಇಕ್ಕೆಲಗಳಲ್ಲೂ ಸಿದ್ಧ ಉಡುಪುಗಳ ವ್ಯಾಪಾರ ಜೋರಾಗಿಯೇ ನಡೆಯಿತು. ಯುವ ಸಮುದಾಯದಿಂದ ಜೀನ್ಸ್ ಪ್ಯಾಂಟ್, ರೆಡಿಮೇಡ್ ಶರ್ಟ್, ಟೀ ಶರ್ಟ್ಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿತು. ರಾತ್ರಿ 10 ಗಂಟೆ ಸಮೀಪಿಸಿದರೂ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ಸಾಗಿತ್ತು.</p>.<p>ಗಾಂಧಿ ವೃತ್ತದ ಸುತ್ತಲೂ ವ್ಯಾಪಾರ ವಹಿವಾಟು ನಡೆದ ಕಾರಣ ಎಸ್ಬಿಐ ವೃತ್ತದವರೆಗೂ ವಾಹನ ದಟ್ಟಣೆ ಹೆಚ್ಚಾಗಿತ್ತು. ಈ ರಸ್ತೆಯ ಮಾರ್ಗದುದ್ದಕ್ಕೂ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಉಂಟಾಯಿತು. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ತೀವ್ರ ಸಮಸ್ಯೆ ಎದುರಿಸಿದರು.</p>.<h2> ದೇಗುಲಗಳಲ್ಲಿ ಸಕಲ ಸಿದ್ಧತೆ </h2><p>ಯುಗಾದಿಯನ್ನು ವಿಶೇಷವಾಗಿ ಸ್ವಾಗತಿಸಲು ನಗರದ ದೇವಸ್ಥಾನಗಳಲ್ಲಿ ಸಿದ್ಧತೆ ನಡೆಸಲಾಗಿದೆ. ಬಹುತೇಕ ದೇಗುಲಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ದೇವರ ದರ್ಶನ ಪಡೆಯಲು ಎಲ್ಲಿಯೂ ಸಮಸ್ಯೆ ಆಗದಂತೆ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಮುಂಜಾನೆಯಿಂದಲೇ ಅಭಿಷೇಕ ಅರ್ಚನೆ ಸೇರಿದಂತೆ ವಿಶೇಷ ಪೂಜೆಗಳು ನೆರವೇರಲಿವೆ. ನಗರದ ನೀಲಕಂಠೇಶ್ವರ ದೇವಸ್ಥಾನ ಉತ್ಸವಾಂಬ ದೇವಸ್ಥಾನ ಮೇಲುದುರ್ಗದ ಏಕನಾಥೇಶ್ವರಿ ಗಣಪತಿ ಹಿಡಂಬೇಶ್ವರ ಸಂಪಿಗೆ ಸಿದ್ದೇಶ್ವರ ಬರಗೇರಮ್ಮ ಕಣಿವೆ ಮಾರಮ್ಮ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>