‘ನಗರಸಭೆಯ ಗುತ್ತಿಗೆದಾರರಾಗಲೀ, ಪೌರಕಾರ್ಮಿಕರಾಗಲೀ, ಹೊರಗುತ್ತಿಗೆ ಪೌರಕಾರ್ಮಿಕರಾಗಲೀ ಈ ಕೆಲಸ ಮಾಡಿಲ್ಲ. ಮ್ಯಾನ್ಹೋಲ್ ಸ್ವಚ್ಛತೆಗಾಗಿಯೇ ನಮ್ಮ ಕಚೇರಿಯಲ್ಲಿ ಪ್ರತ್ಯೇಕ ಸಿಬ್ಬಂದಿ ಇದ್ದಾರೆ. ಸುರಕ್ಷತಾ ದಿರಿಸುಗಳು, ಅತ್ಯಾಧುನಿಕ ಯಂತ್ರೋಪಕರಣ, ಆಕ್ಸಿಜನ್ ಸಿಲಿಂಡರ್, ಇತರೆ ಉಪಕರಣಗಳಿವೆ. ಕೆಎಸ್ಆರ್ಟಿಸಿ ಸ್ವಚ್ಛತಾ ಗುತ್ತಿಗೆದಾರರು ನಗರಸಭೆಗೆ ಯಾವುದೇ ಮಾಹಿತಿ ನೀಡದೆ ನೇರವಾಗಿ ಮಾಡಿಸಿರುವ ಕುರಿತು ನಗರಸಭೆಗೆ ಮಾಹಿತಿ ಇಲ್ಲ’ ಎಂದು ಚಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.