‘ಗುಜರಾತಿನ ಅಹಮದಾಬಾದ್, ಸೂರತ್, ಮಹಾರಾಷ್ಟ್ರ, ಮೀರಜ್, ರಾಜಸ್ಥಾನ, ಬಿಹಾರ ಹೀಗೆ ವಿವಿಧ ರಾಜ್ಯಗಳಿಂದ ಅನೇಕ ಮಂದಿ ಲಾಕ್ಡೌನ್ ನಂತರ ಬಂದರು. ಅವರೆಲ್ಲರನ್ನು ಕ್ವಾರಂಟೈನ್ಗೆ ಒಳಪಡಿಸಿ ಸಮುದಾಯಕ್ಕೆ ಹರಡದಂತೆ ನೋಡಿಕೊಂಡಿದ್ದೇವೆ. ದೆಹಲಿಯಿಂದ ಮೃತದೇಹವೊಂದು ಬಂದಿತ್ತು. ಸಮಸ್ಯೆಯಾಗದಂತೆ ಸಮರ್ಪಕವಾಗಿ ಜವಾಬ್ದಾರಿ ನಿಭಾಯಿಸಿದ್ದೇವೆ’ ಎಂದು ಕಾರ್ಯವೈಖರಿಯನ್ನು ವಿವರಿಸಿದರು.