ಆಮ್ಲಜನಕ ಸೌಲಭ್ಯ ಹೊಂದಿದ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಬಂದ ರೋಗಿಗೆ ಪ್ರವೇಶ ಸಿಗಲಿಲ್ಲ. ಹಾಸಿಗೆ ಖಾಲಿ ಆಗುವ ವರೆಗೆ ಕಾಯುವಂತೆ ವೈದ್ಯರು ಸೂಚನೆ ನೀಡಿದರು. ಒಂದೂವರೆ ಗಂಟೆಯ ಬಳಿಕ ಆಂಬುಲೆನ್ಸ್ನಲ್ಲಿದ್ದ ಆಮ್ಲಜನಕವೂ ಖಾಲಿಯಾಗುವ ಹಂತಕ್ಕೆ ಬಂದಿತು. ಆಕ್ರೋಶಗೊಂಡ ರೋಗಿಯ ಸಂಬಂಧಿಕರು ಆಸ್ಪತ್ರೆಯ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಬಳಿಕ ಅವರಿಗೆ ಹಾಸಿಗೆ ಸಿಕ್ಕಿತು.