ಈ ಬಗ್ಗೆ ಕೇಂದ್ರದ ವೈದ್ಯರನ್ನು ಪ್ರಶ್ನೆ ಮಾಡಿದರೆ, ‘ಆರು ತಿಂಗಳ ಹಿಂದೆ ಘಟಕ ಅಳವಡಿಸಲಾಗಿದೆ. ಕೇಂದ್ರದಲ್ಲಿರುವ 30 ಬೆಡ್ಗಳಿಗೆ ಆಮ್ಲಜನಕ ವ್ಯವಸ್ಥೆ ಇದರಿಂದ ದೊರೆಯಲಿದೆ. ಬೆಂಗಳೂರು ಮೂಲದ ಗುತ್ತಿಗೆದಾರರು ಘಟಕ ಸ್ಥಾಪನೆ ಮಾಡಿದ್ದಾರೆ. 30 ಬೆಡ್
ಗಳಲ್ಲಿ 15 ಕೋವಿಡ್ ರೋಗಿಗಳಿಗೆ, 15 ಬೆಡ್ ಅಸ್ತಮಾ, ಉಸಿರಾಟ ತೊಂದರೆ ರೋಗಿಗಳಿಗೆ ಮೀಸಲಿಡಲಾಗುವುದು. ನಿತ್ಯ ಕೋವಿಡ್ ರೋಗಿಗಳು ಬರುತ್ತಾರೆ. ಆದರೆ ಉಸಿರಾಟ ಸಮಸ್ಯೆ ಇರುವವರನ್ನು ಮೊಳಕಾಲ್ಮುರಿನ ಆಸ್ಪತ್ರೆಗೆ ಕಳಿಸಲಾಗುತ್ತಿದೆ. ಈ ಕೇಂದ್ರ ವ್ಯಾಪ್ತಿಯ ಮೂರು ಜನ ಕೋವಿಡ್ನಿಂದ ಮೃತಪಟ್ಟಿದ್ದಾರೆ’ ಎಂದು ಹೇಳಿದರು.