‘ಮೊಳಕಾಲ್ಮುರು ತಾಲ್ಲೂಕು ಕನಕಯ್ಯನಹಟ್ಟಿಯ ಯಶೋದಮ್ಮ (29) ಸೆರೆಯಾದ ಮಹಿಳೆ. ಪತಿ ಎನ್.ಗೋಪಾಲ (38) ಎಂಬುವರ ಕೊಲೆಗೆ ಈಕೆ ಸಂಚು ರೂಪಿಸಿದ್ದಳು. ಕೊಲೆಗೈದ ಪ್ರಿಯತಮ ತಿಪ್ಪೇಶಿ (28) ಹಾಗೂ ಕೊಲೆಗೆ ನೆರವು ನೀಡಿದ ಎದ್ದಲಬೊಮ್ಮಯ್ಯನಹಟ್ಟಿಯ ಹುಲುಕುಂಟನ (26) ಬಂಧನಕ್ಕೆ ಬಲೆ ಬೀಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.