ತುಮಕೂರು: ಎಂ.ಬಿ.ಪಾಟೀಲ್ ಅವರಂತಹವರು ಪಕ್ಷದಲ್ಲಿ ಬಹಳಷ್ಟು ಮುಖಂಡರು ಇದ್ದಾರೆ. ಎಲ್ಲರನ್ನೂ ಉಪಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು.
ನಗರದ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿದ ಬಳಿಕೆ ಮಾಧ್ಯಮ ಪ್ರತಿನಿಧಿಗಳೊಡನೆ ಮಾತನಾಡಿ, ಪಾಟೀಲರ ಹಿಂದೆ ಸುಮಾರು 15 ಶಾಸಕರು ಇದ್ದಾರೆ ಎನ್ನುವುದು ಸುಳ್ಳ ಮಾಹಿತಿ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಇರುವುದೇ ಆರೋಪ ಮಾಡುವುದಕ್ಕೆ. ಅದರ ಬಗ್ಗೆ ಹೇಳುವ ಅವಶ್ಯಕ ಇಲ್ಲ. ಸಮ್ಮಿಶ್ರ ಸರ್ಕಾರ 5 ವರ್ಷಗಳ ಕಾಲ ಸುಭದ್ರವಾಗಿ ಕಾರ್ಯನಿರ್ವಹಿಸುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು.