ಭದ್ರಾವತಿ ತಾಲ್ಲೂಕಿನ ಕೊರಚರಹಟ್ಟಿಯ ಧನು ಅಲಿಯಾಸ್ ಧನಂಜಯ (23) ಹಾಗೂ ಕಲ್ಲಾಳ್ ವೃತ್ತದ ಹರಿಕೃಷ್ಣ (45) ಬಂಧಿತರು. ಚನ್ನಗಿರಿ ತಾಲ್ಲೂಕಿನ ಚಿಕ್ಕಬೆನ್ನೂರು ಕೊರಚರಹಟ್ಟಿಯ ಗುಡ್ಡರಾಮ, ಕೃಷ್ಣ, ಚಿಟ್ಟೆಕೃಷ್ಣ ಹಾಗೂ ಅಶೋಕ ತಲೆಮರೆಸಿಕೊಂಡಿದ್ದಾರೆ. ಬಂಧಿತರಿಂದ ₹ 5 ಲಕ್ಷ ಮೌಲ್ಯದ 19 ಚೀಲ ಅಡಿಕೆ ಹಾಗೂ ₹ 8 ಲಕ್ಷ ಮೌಲ್ಯದ ಬುಲೆರೊ ವಾಹನ ಜಪ್ತಿ ಮಾಡಲಾಗಿದೆ.