‘1 ವರ್ಷದಿಂದ ಇಲ್ಲಿ ಬಾಡಿಗೆಯಲ್ಲಿ ಅಂಗಡಿ ಮಾಡಿಕೊಂಡು ಜೀವನ ನಡೆಸುತ್ತಿದ್ದೆವು. ಬೆಳಗಿನ ಜಾವ ಸಿಲಿಂಡರ್ ಸ್ಫೋಟಗೊಂಡಿದೆ. ಬಂದು ನೋಡಿದಾಗ ಆಘಾತವಾಯಿತು. ಹಣ್ಣು, ತರಕಾರಿಯೊಂದಿಗೆ ಟಿ ವ್ಯಾಪಾರವನ್ನೂ ಮಾಡುತ್ತಿದ್ದೆ. ವ್ಯಾಪಾರ ಚೆನ್ನಾಗಿತ್ತು. ಅಂಗಡಿ ಸುಟ್ಟಿರುವುದರಿಂದ ಜೀವನ ನಡೆಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಅಂಗಡಿ ಮಾಲೀಕ ರಮೇಶ್ ಅಳಲು ತೋಡಿಕೊಂಡರು.