ಡೀಸೆಲ್ ಸರಬರಾಜುದಾರರು ಮುಷ್ಕರಕ್ಕೂ ಮುನ್ನವೇ ಡೀಸೆಲ್ ಇಲ್ಲ ಎಂದರೆ ಹೇಗೆ? ವಾರದಿಂದ ಮಳೆ ಬಿಡುವು ನೀಡಿದ್ದು, ಯಾವ ಸಮಯದಲ್ಲಾದರೂ ಮಳೆ ಬರಬಹುದು. ಮಳೆ ಬಂತೆಂದರೆ, ಮಳೆ ನಿಂತ ವಾರದವರೆಗೂ ಬೇಸಾಯ ಮಾಡುವಂತಿಲ್ಲ. ಹೀಗಾದರೆ ಹೇಗೆ. ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ರೈತರಿಗೆ ಉಳುಮೆ ಮಾಡಲು ಹಾಗೂ ಬಿತ್ತನೆವರೆಗೆ ಸಮರ್ಪಕ ಡೀಸೆಲ್ ಸರಬರಾಜು ವ್ಯವಸ್ಥೆಯನ್ನು ಮಾಡಬೇಕು ಎಂದು ರೈತರಾದ ಅಜ್ಜಪ್ಪ, ಲೋಕೇಶ್, ದಿವಾಕರ್, ದರ್ಶನ್, ಶ್ರೀನಿವಾಸ್ ಒತ್ತಾಯಿಸಿದರು.