ಅಂದು ನಾನು ಗಮನಿಸಿದ ಅಂಶವೆಂದರೆ, ಅಲ್ಲಿ ನೀರಿನ ಹರಿವು ಜೋರಾಗಿರಲಿಲ್ಲ, ಸೆಳೆತವೂ ಇರಲಿಲ್ಲ. ಸಾಯುವಂತಹ ಜಾಗವೂ ಅದಾಗಿರಲಿಲ್ಲ. ವಿದ್ಯಾರ್ಥಿಯ ಅಜಾಗರೂಕತೆ ಒಂದೆಡೆಯಾದರೆ ಹತ್ತಿರದಲ್ಲಿ ಸುರಕ್ಷಾ ಸಾಧನಗಳಾವುವೂ ಇರದಿದ್ದುದು ಸಾವಿಗೆ ಕಾರಣ ಎನ್ನಬಹುದು. ಸ್ಥಳೀಯ ಆಡಳಿತವು ಇಂಥ ಸ್ಥಳಗಳಲ್ಲಿ ಈಜು ಬಲ್ಲ ನಿರುದ್ಯೋಗಿ ಯುವಕರನ್ನು ಕಾವಲಿಗೆ ನೇಮಿಸಿ, ರಕ್ಷಾ ಸಾಧನಗಳನ್ನು (ಹಗ್ಗ, ಟ್ಯೂಬ್ ಇತ್ಯಾದಿ) ಇಟ್ಟರೆ ಅಮೂಲ್ಯ ಜೀವಗಳನ್ನು ಖಂಡಿತ ಉಳಿಸಬಹುದು. ಸಂಬಂಧಪಟ್ಟವರು ಗಮನ ಹರಿಸಬೇಕು.