ಚುನಾವಣೆ ಹಿಂದೆ, ಮುಂದೆ ಜನಪ್ರತಿನಿಧಿಗಳು ಪಂಚಾಯಿತಿಗೆ ಬಂದು 1-2 ಟ್ಯಾಂಕರ್ ನೀರು ಕೊಡುತ್ತಿದ್ದರು. ಈಗ ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಅವೂ ಬರುತ್ತಿಲ್ಲ. ಅಧಿಕಾರಿಗಳು ಸಹ ಕುಡಿಯುವ ನೀರಿಗೆ ಹಣ ಕೊರತೆಯಿಲ್ಲ ನೀರು ಕೊಡಲು ಸಿದ್ಧ ಎನ್ನುತ್ತಾರೆ. ಆದರೆ, ಹಳ್ಳಿಗಳಿಗೆ ಬಂದು ಜನರ ಸಮಸ್ಯೆ ಆಲಿಸುವವರು ಯಾರು? ಬಯಲುಸೀಮೆಯ ನೀರಿನ ಬವಣೆಯನ್ನು ಪರಿಹರಿಸುವ ಶಾಶ್ವತ ಯೋಜನೆ ಯಾವಾಗ, ಯಾರಿಂದ ಪ್ರಾರಂಭವಾಗುತ್ತದೆ ಎಂಬುವುದು ಜನರ ಒಕ್ಕೋರಲ ಪ್ರಶ್ನೆ.