ಅಲೆಮಾರಿ, ಅರೆ ಅಲೆಮಾರಿ ಸಮುದಾಯಕ್ಕೆ ಸೇರಿರುವ ಇಲ್ಲಿನ ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ವಸತಿ, ಊಟ ಮತ್ತು ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಲು 1994ರಲ್ಲಿ ಎರಡು ಎಕರೆಯ ವಿಶಾಲವಾದ ಮೈದಾನದಲ್ಲಿ 10 ಸುಸಜ್ಜಿತ ಕೊಠಡಿಗಳನ್ನೊಳಗೊಂಡ ಆಶ್ರಮ ಶಾಲೆಯನ್ನು ಅಂದಿನ ಸಮಾಜ ಕಲ್ಯಾಣ ಖಾತೆ ಸಚಿವರಾಗಿದ್ದ ಎ. ಕೃಷ್ಣಪ್ಪ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಮಂಜೂರು ಮಾಡಿಸಿದ್ದರು. ಆದರೆ, ಶಿಕ್ಷಕರಿಲ್ಲದ್ದರಿಂದ ಶಾಲೆಯನ್ನು ಆರಂಭಿಸಿರುವ ಉದ್ದೇಶವೇ ಈಡೇರದಂತಾಗಿದೆ.