ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ್ದ ಸಿ.ಸಿ. ಟಿವಿ ಕ್ಯಾಮೆರಾಗಳು ಕೆಟ್ಟಿವೆ. ಇದರಿಂದ ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಅವುಗಳನ್ನು ದುರಸ್ತಿ ಮಾಡಿಸಬೇಕು. ತ್ಯಾಗರಾಜ ನಗರದಲ್ಲಿ ಕೋತಿಗಳ ಹಾವಳಿಯಿಂದ ಜನ ಭಯಗೊಂಡಿದ್ದಾರೆ. ಕೋತಿಗಳನ್ನು ನಿಯಂತ್ರಿಸಬೇಕು. ಗಾಂಧಿನಗರ, ಅಂಬೇಡ್ಕರ್ ನಗರ, ಜನತಾ ಕಾಲೊನಿ, ಜಗಜೀವನರಾಂ ನಗರ ಮುಂತಾದ ಕೊಳೆಗೇರಿ ಪ್ರದೇಶದಲ್ಲಿ ಕೆಲವರು, ರಸ್ತೆ ಒತ್ತುವರಿ ಮಾಡಿ ಅಕ್ರಮ ಚರಂಡಿ, ಶೌಚಾಲಯ ನಿರ್ಮಾಣ ಮಾಡಿಕೊಂಡಿರುವುದನ್ನು ಕೂಡಲೇ ತೆರವುಗೊಳಿಸಬೇಕು ಎಂದು ನಗರಸಭೆ ಸದಸ್ಯರಾದ ಜಯಣ್ಣ, ರಾಜಣ್ಣ, ಪ್ರಗತಿಪರ ರೈತ ಆರ್.ಎ.ದಯಾನಂದ ಆಗ್ರಹಿಸಿದರು.
ವಿವಿಧ ವಾರ್ಡ್ಗಳಲ್ಲಿ ನೀರು ಸಾಕಷ್ಟು ಪೋಲಾಗುತ್ತಿದೆ. ಇದರಿಂದ ನೀರಿನ ಅಭಾವವನ್ನು ಎದುರಿಸಬೇಕಾಗುತ್ತದೆ. ನಲ್ಲಿಗಳಿಗೆ ಮೀಟರ್ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಮುಖ್ಯ ರಸ್ತೆಗಳಲ್ಲಿನ ಫ್ಲೆಕ್ಸ್, ನೀರು ಮತ್ತು ಮನೆಗಳಿಂದ ತಪ್ಪದೇ ಸುಂಕ ವಸೂಲಿ ಮಾಡಬೇಕು. ಇದರಿಂದ ನಗರಸಭೆ ಆದಾಯ ಹೆಚ್ಚುತ್ತದೆ ಎಂದು ನಗರಸಭೆ ಸದಸ್ಯ ವಿಶುಕುಮಾರ್, ನಾಗರಿಕ ರಮೇಶ, ಪ್ರಶಾಂತ್ ಹೇಳಿದರು.