ಬಾಲಕನನ್ನು ಭೋಪಾಲಕ್ಕೆ ಕರೆ ತಂದಾಗ ಸುಧಾ ಅವರಿಗೆ ಬಾಲಕನ ಚರ್ಮದ ಬಣ್ಣ ಇಷ್ಟವಿರಲಿಲ್ಲ.ಬಾಲಕ ಕಪ್ಪಗಿದ್ದಾನೆ ಎಂದು ಅವನ ಬಗ್ಗೆ ನಿರಾಸಕ್ತಿ ಇತ್ತು. ಹೀಗಿರುವಾಗ ಯಾರೋ ಒಬ್ಬರು ಮಗುವಿನ ಮೈಯನ್ನು ಕಪ್ಪು ಕಲ್ಲಿನಿಂದ ತಿಕ್ಕಿದರೆ ಬೆಳ್ಳಗಾಗುತ್ತದೆ ಎಂದಿದ್ದರು. ಇದನ್ನು ಕೇಳಿ ಸುಧಾ ಬಾಲಕನ ಮೈಯನ್ನು ಕಲ್ಲಿನಿಂದ ತಿಕ್ಕಿ ತೊಳೆದಿದ್ದು, ಆತನ ಸೊಂಟ, ಭುಜ, ಕಾಲು ಕೈಗಳ ಮೇಲೆ ಗಾಯಗಳಾಗಿದ್ದವು.